ಆ್ಯಪ್ನಗರ

ಉನ್ನಾವ್‌ ಸಾಮೂಹಿಕ ಅತ್ಯಾಚಾರ: ಡಿಸೆಂಬರ್‌ 16ಕ್ಕೆ ಅಂತಿಮ ತೀರ್ಪು

ಉತ್ತರ ಪ್ರದೇಶದ ಉನ್ನಾವ್‌ ಸಾಮೂಹಿಕ ಅತ್ಯಾಚಾರ ಪ್ರಕರಣ ದೇಶದಲ್ಲಿ ಭಾರಿ ಸಂಚಲನ ಉಂಟು ಮಾಡಿದೆ. ಪ್ರಕರಣರ ವಿಚಾರಣೆ ಪೂರ್ಣಗೊಂಡಿದೆ, ತೀರ್ಪು ಬಾಕಿ ಇದೆ.

Vijaya Karnataka Web 10 Dec 2019, 7:26 pm
ಹೊಸದಿಲ್ಲಿ: ಉತ್ತರ ಪ್ರದೇಶದ ಉನ್ನಾವ್‌ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತು ವಿಚಾರಣೆ ಮಂಗಳವಾರ ಪೂರ್ಣಗೊಂಡಿದೆ.
Vijaya Karnataka Web ಉನ್ನಾವ್‌ ಪ್ರಕರಣ
ಉನ್ನಾವ್‌ ಪ್ರಕರಣ


ಮುಂದಿನ ಸೋಮವಾರ ಅಂದರೆ ಡಿಸೆಂಬರ್‌ 16ರಂದು ತೀರ್ಪು ಪ್ರಕಟಿಸಲಾಗುವುದು ಎಂದು ದಿಲ್ಲಿ ನ್ಯಾಯಾಲಯದ ನ್ಯಾಯಾಧೀಶರು ತಿಳಿಸಿದ್ದಾರೆ.

ಈ ಪ್ರಕರಣದ ಕುರಿತು ವಿಚಾರಣೆ ಪೂರ್ಣಗೊಂಡಿದೆ. ಉಭಯ ಪಕ್ಷಗಳ ವಾದ-ಪ್ರತಿವಾದವನ್ನು ಆಲಿಸಿದ ನಂತರ ನ್ಯಾಯಾಧೀಶರು, ಡಿಸೆಂಬರ್ 16ರಂದು ತೀರ್ಪು ಪ್ರಕಟಿಸುವ ನಿರ್ಧಾರ ತಿಳಿಸಿದರು.

ಉತ್ತರ ಪ್ರದೇಶದ ಬಿಜೆಪಿ ಉಚ್ಚಾಟಿತ ನಾಯಕ ಕುಲ್ದೀಪ್‌ ಸಿಂಗ್‌ ಸೆಂಗಾರ್ ವಿರುದ್ಧ ಅಪರಹರಣ, ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.

2017ರಲ್ಲಿ ಉನ್ನಾವ್‌ದಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಕುಲ್ದೀಪ್‌ ಸಿಂಗ್‌ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು ಎಂಬ ಆರೋಪ ಇದೆ. ಪ್ರಮುಖ ಸಾಕ್ಷಿಗಳನ್ನು ಕೊಲ್ಲಲು ಸಹ ಪ್ರಯತ್ನಿಸಲಾಗಿತ್ತು. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು.

ಕಳೆದ ವಾರ ಉನ್ನಾವ್‌ ಸಂತ್ರಸ್ತೆಯನ್ನು ನ್ಯಾಯಾಲಯಕ್ಕೆ ಕರೆ ತರುತ್ತಿದ್ದಾಗ ಬೆಂಕಿ ಹಚ್ಚಲಾಗಿತ್ತು. ಆಕೆ ಎರಡು ದಿನಗಳ ನಂತರ ಆಕೆ ಹೊಸದಿಲ್ಲಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ