ಆ್ಯಪ್ನಗರ

370ನೇ ವಿಧಿ ರದ್ದು: ಭಾರತದ ವಿರುದ್ಧ ವಿಶ್ವಸಂಸ್ಥೆಗೆ ಪತ್ರ ಬರೆದ ಪಾಕ್‌ಗೆ ಭಾರಿ ಮುಖಭಂಗ

ಭಾರತದ ವಿರುದ್ಧ ವಿಶ್ವಸಂಸ್ಥೆಗೆ ಪತ್ರ ಬರೆದಿರುವ ಪಾಕಿಸ್ತಾನಕ್ಕೆ ಕಪಾಳಮೋಕ್ಷವಾಗುವಂತಹ ಉತ್ತರ ಸಿಕ್ಕಿದೆ.

THE ECONOMIC TIMES 9 Aug 2019, 11:20 am
ನ್ಯೂಯಾರ್ಕ: ಕಾಶ್ಮೀರದ ವಿಷಯದಲ್ಲಿ ಜಾಗತಿಕ ಬೆಂಬಲ ಪಡೆಯಲು ಪ್ರಯತ್ನಿಸಿ ಪದೇ ಪದೇ ಸೋಲುಂಡರೂ ಬುದ್ಧಿ ಕಲಿಯದ ಪಾಕಿಸ್ತಾನ, ಮತ್ತದೇ ದುಸ್ಸಾಹಸಕ್ಕೆ ಪ್ರಯತ್ನಿಸಿ ಭಾರಿ ಮುಖಭಂಗಕ್ಕೊಳಗಾಗಿದೆ. ಭಾರತದ ವಿರುದ್ಧ ದೂರಿ ವಿಶ್ವಸಂಸ್ಥೆಗೆ ಪಾಕ್ ಬರೆದ ಪತ್ರಕ್ಕೆ ನಿರಾಶಾದಾಯಕ ಉತ್ತರ ದೊರಕಿದೆ.
Vijaya Karnataka Web UNO


ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದಾಗಿದ್ದಿನಿಂದ ಕೆರಳಿ ಕೆಂಡಾಮಂಡಲವಾಗಿರುವ ಪಾಕಿಸ್ತಾನ ಈ ಬಗ್ಗೆ ವಿಶ್ವಸಂಸ್ಥೆಗೆ ಪತ್ರ ಬರೆದಿತ್ತು. ಈ ಪತ್ರಕ್ಕೆ ಉತ್ತರಿಸಲು ನಿರಾಕರಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್, ನೋ ಕಮೆಂಟ್ಸ್ ಎಂದಿದ್ದಾರೆ.

370ನೇ ವಿಧಿಯನ್ನು ರದ್ದು ಮಾಡುವ ಮೂಲಕ ಭಾರತ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಉಲ್ಲಂಘಿಸಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಶಿ ವಿಶ್ವಸಂಸ್ಥೆ ಅಧ್ಯಕ್ಷರಿಗೆ ಪತ್ರ ಬರೆದಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯನ್ನು ಕಾಯ್ದುಕೊಳ್ಳುವಂತೆ ಈ ಹಿಂದೆ ಗುಟೆರಸ್ ಉಭಯ ದೇಶಗಳಲ್ಲಿ ಮನವಿ ಮಾಡಿಕೊಂಡಿದ್ದರು.

ಸಂಝೋತಾ ಎಕ್ಸ್‌ಪ್ರೆಸ್‌ ಶಾಶ್ವತ ರದ್ದು: 2-3 ತಿಂಗಳಲ್ಲಿ ಯುದ್ಧ ಆಗಬಹುದು ಎಂದ ಪಾಕ್‌ ರೈಲ್ವೆ ಸಚಿವ

ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಾಗಿಸಿದ ಬಳಿಕ ಹತಾಶೆಗೊಂಡಿರುವ ಪಾಕಿಸ್ತಾನವು ಭಾರತದ ವಿರುದ್ಧ ಸೇಡಿನ ಕ್ರಮಗಳನ್ನು ಮುಂದುವರಿಸಿದ್ದು ಉಭಯ ದೇಶಗಳ ನಡುವಿನ ಸೌಹಾರ್ದತೆಯ ಸಂಕೇತವಾಗಿ 43 ವರ್ಷ ಹಿಂದೆ ಆರಂಭಿಸಲಾಗಿದ್ದ ಸಂಝೋತಾ ಎಕ್ಸ್‌ಪ್ರೆಸ್‌ (ಫ್ರೆಂಡ್‌ಶಿಪ್‌ ಎಕ್ಸ್‌ಪ್ರೆಸ್‌) ರೈಲಿನ ಸಂಚಾರವನ್ನು ಪಾಕ್‌ ಗುರುವಾರದಿಂದ ಹಠಾತ್‌ ರದ್ದುಗೊಳಿಸಿದೆ.

ಇಸ್ಲಾಮಾಬಾದ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯ ಘೋಷಿಸಿದ ಪಾಕಿಸ್ತಾನ ರೈಲ್ವೆ ಸಚಿವ ಶೇಖ್‌ ರಶೀದ್‌ ಅಹ್ಮದ್‌,''ನಾನು ರೈಲ್ವೆ ಸಚಿವನಾಗಿರುವ ತನಕ ಸಂಝೋತಾ ಎಕ್ಸ್‌ಪ್ರೆಸ್‌ ಮತ್ತೆ ಸಂಚಾರ ಆರಂಭಿಸಲು ಬಿಡುವುದಿಲ್ಲ. ಈಗಾಗಲೇ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗಳನ್ನು ಇತರ ರೈಲುಗಳಿಗೆ ಜೋಡಿಸಿ ಈದ್‌ಗಾಗಿ ಪ್ರಯಾಣಿಸುವವರ ಅನುಕೂಲಕ್ಕೆ ಬಳಕೆ ಮಾಡುವಂತೆ ಆದೇಶಿಸಿದ್ದೇನೆ,'' ಎಂದು ತಿಳಿಸಿದರು. ಅಷ್ಟೇ ಅಲ್ಲದೆ, ಮುಂದಿನ 2-3 ತಿಂಗಳಲ್ಲಿ ಭಾರತ-ಪಾಕ್‌ ನಡುವೆ ಯುದ್ಧ ಸಂಭವಿಸಬಹುದು ಎಂದೂ ಖಾನ್‌ ಹೇಳಿದ್ದಾರೆ.

ಶಿಮ್ಲಾ ಒಪ್ಪಂದದ ಭಾಗವಾಗಿ 1976ರ ಜುಲೈ 22ರಂದು ಭಾರತ-ಪಾಕ್‌ ನಡುವೆ ಆರು ಸ್ಲೀಪರ್‌ ಬೋಗಿಗಳು, ಒಂದು ಎಸಿ 3-ಟೈರ್‌ ಕೋಚ್‌ ಇರುವ ಸಂಝೋತಾ ಎಕ್ಸ್‌ಪ್ರೆಸ್‌ ಸಂಚಾರವನ್ನು ಆರಂಭಿಸಲಾಗಿತ್ತು. ಉಭಯ ದೇಶಗಳ ನಡುವೆ ಬಿಕ್ಕಟ್ಟು ಉಂಟಾದಾಗಲೆಲ್ಲ ಎಕ್ಸ್‌ಪ್ರೆಸ್‌ ರೈಲಿನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ನಿದರ್ಶನಗಳಿವೆ. ವಾರದಲ್ಲಿ ಎರಡು ದಿನ (ಸೋಮವಾರ, ಗುರುವಾರ) ಈ ರೈಲು ಪಾಕಿಸ್ತಾನ ಲಾಹೋರ್‌ ಹಾಗೂ ಪಂಜಾಬ್‌ನಲ್ಲಿರುವ ಅಟ್ಟಾರಿ ನಡುವೆ ಸಂಚರಿಸುತ್ತಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ