ಆ್ಯಪ್ನಗರ

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಪುಲ್ವಾಮಾ ದಾಳಿ ಖಂಡನೆ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಈ ಹೇಳಿಕೆಯ ಮಧ್ಯೆಯೂ ಜೈಷೆ ಸಂಸ್ಥಾಪಕ ಮಸೂದ್‌ ಅಜರ್‌ ಪರ ತನ್ನ ಬೆಂಬಲ ಮುಂದುವರಿಸಿರುವ ಹಠಮಾರಿ ಚೀನಾ, ''ಇದೊಂದು ಸಾಮಾನ್ಯ ರೂಪದ ಖಂಡನೆಯೇ ಹೊರತು ತೀರ್ಪಲ್ಲ,'' ಎಂದು ಪ್ರಕ್ರಿಯಿಸಿದೆ

Vijaya Karnataka 23 Feb 2019, 5:00 am
ನ್ಯೂಯಾರ್ಕ್‌: ಪುಲ್ವಾಮಾ ದಾಳಿ ನಡೆದು ವಾರದ ಬಳಿಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಘಟನೆಯನ್ನು ತೀವ್ರವಾಗಿ ಖಂಡಿಸಲಾಗಿದೆ. ಇದರೊಂದಿಗೆ ಜೈಷೆ ಉಗ್ರರಿಗೆ ಆಶ್ರಯ ತಾಣ ಒದಗಿಸಿರುವ ಪಾಕಿಸ್ತಾನ ಹಾಗೂ ಅದಕ್ಕೆ ಬೆಂಬಲವಾಗಿ ನಿಂತಿರುವ ಚೀನಾದ ಮಾನ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಹರಾಜಾಗಿದೆ. ''ಜೈಷೆ ಮೊಹಮ್ಮದ್‌ ಉಗ್ರ ಸಂಘಟನೆ ಹೊಣೆ ಹೊತ್ತುಕೊಂಡಿರುವ ಪುಲ್ವಾಮಾ ದಾಳಿ ಅತ್ಯಂತ ಬರ್ಬರ ಹಾಗೂ ಹೇಡಿ ಕೃತ್ಯ. ಪಾತಕಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ,'' ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ಹೇಳಿದೆ.
Vijaya Karnataka Web masood azhar


ಮತ್ತದೇ ಕ್ಯಾತೆ:
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಈ ಹೇಳಿಕೆಯ ಮಧ್ಯೆಯೂ ಜೈಷೆ ಸಂಸ್ಥಾಪಕ ಮಸೂದ್‌ ಅಜರ್‌ ಪರ ತನ್ನ ಬೆಂಬಲ ಮುಂದುವರಿಸಿರುವ ಹಠಮಾರಿ ಚೀನಾ, ''ಇದೊಂದು ಸಾಮಾನ್ಯ ರೂಪದ ಖಂಡನೆಯೇ ಹೊರತು ತೀರ್ಪಲ್ಲ,'' ಎಂದು ಪ್ರಕ್ರಿಯಿಸಿದೆ. ಮಸೂದ್‌ ಹೆಸರನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಬೇಕೆಂಬ ಭಾರತದ ಬೇಡಿಕೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾ ವಿರೋಧಿಸುತ್ತಲೇ ಬಂದಿದೆ.

ಎಫ್‌ಎಟಿಎಫ್‌ ಶಾಕ್‌: ಪುಲ್ವಾಮಾ ದಾಳಿಯನ್ನು ಖಂಡಿಸಿರುವ ಭಯೋತ್ಪಾದಕರ ಹಣಕಾಸು ವ್ಯವಹಾರಗಳ ಮೇಲಿನ ಕಣ್ಗಾವಲು ಕಾರ್ಯಪಡೆ (ಎಫ್‌ಎಟಿಎಫ್‌) ಮುಂಬರುವ ಅಕ್ಟೋಬರ್‌ವರೆಗೂ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿ (ಗ್ರೇ ಲಿಸ್ಟ್‌) ಮುಂದುವರಿಸಲು ನಿರ್ಧರಿಸಿದೆ. ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕ್‌ಗೆ ಇದು ದೊಡ್ಡ ಹೊಡೆತ ನೀಡಲಿದೆ. ಒಂದೊಮ್ಮೆ ಭಾರತದ ಬೇಡಿಕೆಯಂತೆ ಅದನ್ನು 'ಕಪ್ಪು ಪಟ್ಟಿ'ಗೆ ಸೇರಿಸಿದರೆ ಪಾಕ್‌ ಭಿಕ್ಷೆ ಬೇಡುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.

ಯುದ್ಧ ಸಿದ್ಧತೆಗೆ ಹೆದರಲ್ಲ: ಪಾಕ್‌

ಭಾರತ-ಪಾಕ್‌ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿರುವ ಹೊತ್ತಲ್ಲೇ ಪಾಕಿಸ್ತಾನ, ಭಾರತದ ಯುದ್ಧ ಸಿದ್ಧತೆಗಳ ಬೆದರಿಕೆಗೆ ಹೆದರುವುದಿಲ್ಲ ಎಂದು ಪ್ರತಿಕ್ರಿಯಿಸಿದೆ. ''ಯುದ್ಧ ನಮಗೆ ಬೇಡವಾಗಿದೆ. ನಾವು ಯುದ್ಧಕ್ಕೆ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿಲ್ಲ. ಆದರೆ ಭಾರತ ಯುದ್ಧ ಬೆದರಿಕೆಗಳನ್ನು ಕಳುಹಿಸುತ್ತಿದೆ. ಇದಕ್ಕೆ ಪಾಕ್‌ ಹೆದರುವುದಿಲ್ಲ,'' ಎಂದು ಪಾಕ್‌ ಸೇನೆಯ ಮೇಜರ್‌ ಜನರಲ್‌ ಅಸಿಫ್‌ ಗಫೂರ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ