ಆ್ಯಪ್ನಗರ

ರಾಮ ಮಂದಿರ ನಿರ್ಮಾಣಕ್ಕೆ ಒಂದು ಇಟ್ಟಿಗೆ, ರೂ.11 ನೀಡುವಂತೆ ಕರೆ!

ವಿವಾದಿತ ಅಯೋಧ್ಯೆ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಿಸುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದ್ದು, ಇದೀಗ ಸಿಎಂ ಯೋಗಿ ಆದಿತ್ಯನಾಥ್‌ ದೇವಸ್ಥಾನ ನಿರ್ಮಿಸಲು 1 ಇಟ್ಟಿಗೆ ಮತ್ತು 11 ರೂ.ಗಳನ್ನು ಕೊಡುಗೆಯಾಗಿ ಸಮರ್ಪಿಸುವಂತೆ ಕರೆ ನೀಡಿದ್ದಾರೆ.

Vijaya Karnataka Web 14 Dec 2019, 2:45 pm
ಲಖನೌ: ಬಹು ವಿವಾದಿತ ಅಯೋಧ್ಯಾ ರಾಮ ಮಂದಿರ ಭೂವಿವಾದವು ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥಗೊಂಡ ನಂತರ ದೇವಸ್ಥಾನ ನಿರ್ಮಾಣದ ಕಾರ್ಯಗಳು ಆರಂಭಗೊಂಡಿವೆ. ಇದರ ಭಾಗವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಕನಿಷ್ಠ 1 ಇಟ್ಟಿಗೆ ಮತ್ತು ರೂ.11 ಕೊಡುಗೆಯಾಗಿ ನೀಡುವಂತೆ ಕರೆ ನೀಡಿದ್ದಾರೆ.
Vijaya Karnataka Web Yogi Adityanath


ಜಾರ್ಖಂಡ್‌ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದ ಯೋಗಿ ಆದಿತ್ಯನಾಥ, ರಾಜ್ಯದ ಪ್ರತಿಯೊಂದು ಮನೆಯಿಂದ ಕನಿಷ್ಠ 1 ಇಟ್ಟಿಗೆ ಮತ್ತು ರೂ.11 ನೀಡುವಂತೆ ಕೋರಿದರು. ಭಾರತ ರಾಮ ರಾಜ್ಯವಾಗಲು ಪ್ರಧಾನಿ ನರೇಂದ್ರ ಮೋದಿ ಕಾರಣ. ಒಂದೇ ಏಟಿಗೆ ಪ್ರಧಾನಿ ಮೋದಿ ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್‌ 370ನ್ನು ತೆಗೆದು ಹಾಕಿದರು. ಇವತ್ತು ನೀವು ಮಾ ವೈಶ್ಣೋ ಮತ್ತು ಬಾಬಾ ಅಮರನಾಥ ಭೂಮಿ ಕಾಶ್ಮೀರ, ಲಡಾಖ್‌ ಮತ್ತು ಜಮ್ಮುವಿಗೆ ಭೇಟಿ ನೀಡಬಹುದು. ಭೂಮಿಯನ್ನು ಖರೀದಿಸಬಹುದು. ಈ ಅಧಿಕಾರವನ್ನು ನಿಮಗೆ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ ಎಂದರು.

ಆರ್ಟಿಕಲ್‌ 370 ಹಿಂತೆಗೆದುಕೊಂಡಿದ್ದರಿಂದ ಯಾವುದೇ ಸಾವು ಸಂಭವಿಸಿಲ್ಲ, ಆದರೆ ಕಾಂಗ್ರೆಸ್‌, ಆರ್‌ಜೆಡಿ, ಜಾರ್ಖಂಡ್‌ ಮುಕ್ತಿ ಮೋರ್ಚಾ ಮತ್ತು ಸಿಪಿಐ ಪಕ್ಷಗಳಿಗೆ ಭಯ ಹುಟ್ಟಿಸಿತು ಎಂದು ಯೋಗಿ ಹೇಳಿದ್ದಾರೆ.

ಅಯೋಧ್ಯಾ ವಿವಾದ ಈಗ ಅಂತ್ಯ! ಸುಪ್ರೀಂಗೆ ಸಲ್ಲಿಕೆಯಾಗಿದ್ದ ಎಲ್ಲಾ ಮರು ಪರಿಶೀಲನಾ ಅರ್ಜಿಗಳೂ ವಜಾ!

ಪೌರತ್ವ ವಿಧೇಯಕದ ಬಗ್ಗೆ ಮಾತನಾಡಿದ ಯೋಗಿ ಆದಿತ್ಯನಾಥ, ಭಾರತ ಯಾವುದೇ ಒಂದು ಜಾತಿ ಅಥವಾ ಒಂದು ಧರ್ಮದ ಪರವಾಗಿ ಇಲ್ಲ. ಆದರೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ. ಅಲ್ಲಿರುವ ಅಲ್ಪಸಂಖ್ಯಾತರನ್ನು ಬಡಿದು ಓಡಿಸುತ್ತಿದ್ದಾರೆ. ಅವರ ಆಸ್ತಿಯನ್ನು ಕಬಳಿಸುತ್ತಿದ್ದಾರೆ. ಅವರೆಲ್ಲರೂ ಭಾರತಕ್ಕೆ ಬಂದಿದ್ದಾರೆ. ಹಾಗಾಗಿ ಅವರಿಗೆ ಭಾರತದ ಪೌರತ್ವ ನೀಡಲಾಗಿದೆ. ಇದನ್ನು ವಿರೋಧಿಸುತ್ತಿರುವವರು ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದರು.

ರಾಮ ಮಂದಿರ ನಿರ್ಮಾಣಕ್ಕೆ ಶಿಯಾ ಮಂಡಳಿಯ ರಿಜ್ವಿಯಿಂದ 51,000 ರೂ ದೇಣಿಗೆ

ಪ್ರತಿಪಕ್ಷಗಳು ಅಕ್ರಮ ನುಸುಳುಕೋರರ ಪರವಾಗಿ ವಾದಿಸುತ್ತ, ಬಡವರಿಗೆ ನೆಲೆ ಒದಗಿಸುವುದನ್ನು ವಿರೋಧಿಸುತ್ತಿವೆ. ನಾವು ಪಾಕಿಸ್ತಾನದ ಮಾತನ್ನು ಕೇಳಬೇಕಾ? ಇಂತಹ ಪಕ್ಷಗಳಿಗೆ ನೀವು ಮತ ಹಾಕಬೇಕಾ? ಎಂದು ಪ್ರಶ್ನಿಸಿದರು. ಶ್ರೀ ರಾಮನ ಬಗ್ಗೆ ಗೌರವ ಇಲ್ಲದವರು ಸ್ನೇಹಿತರಾಗಿ ಉಳಿಯಲಾರರು ಎಂದೂ ಮಾತು ಸೇರಿಸಿದರು.

2020ರ ಆರಂಭದಲ್ಲಿ ಶುರುವಾಗಲಿದೆ ರಾಮ ಮಂದಿರದ ನಿರ್ಮಾಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ