ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಅವರ ಸಂಪುಟದ ಸದಸ್ಯರಿಗೆ ಲಖನೌನ ಐಐಎಂನಲ್ಲಿ ಭಾನುವಾರ 'ನಾಯಕತ್ವ ತರಬೇತಿ ಶಿಬಿರ' ಆಯೋಜಿಸಲಾಗಿತ್ತು. ಎಲ್ಲ ಸಚಿವರೂ ಬೆಳಗ್ಗೆ ಸಿಎಂ ನಿವಾಸಕ್ಕೆ ಆಗಮಿಸಿದರು. ಅಲ್ಲಿಂದ ಬಸ್ನಲ್ಲಿ ಭಾರತೀಯ ಆಡಳಿತನಿರ್ವಹಣಾ ಸಂಸ್ಥೆ (ಐಐಎಂ)ಗೆ ತೆರಳಿದರು. ಹಣಕಾಸು ನಿರ್ವಹಣೆ, ತೀರ್ಮಾನಗಳ ತ್ವರಿತ ಅನುಷ್ಠಾನ, ಕಡತಗಳ ಶೀಘ್ರ ವಿಲೇವಾರಿ, ಇಲಾಖಾ ಆಯವ್ಯಯಗಳ ಕುರಿತು ಚರ್ಚೆ ನಡೆಯಿತು. ಸೆ.15 ಮತ್ತು 22ರಂದು ಸಹ ಇದೇ ರೀತಿಯ ತರಬೇತಿಯನ್ನು ಆಯೋಜಿಸಲಾಗಿದೆ. ಯೋಗಿ ಸರಕಾರ ಎರಡೂವರೆ ವರ್ಷ ಪೂರೈಸಿದ್ದು, ಇತ್ತೀಚೆಗೆ ಸಂಪುಟ ವಿಸ್ತರಣೆ ಮಾಡಲಾಗಿದೆ. ಆಡಳಿತದಲ್ಲಿ ಮತ್ತಷ್ಟು ಚುರುಕು ತರಬೇಕೆಂಬ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಲಖನೌ ಐಐಎಂನಲ್ಲಿ ಯೋಗಿ ಸಂಪುಟ ಸದಸ್ಯರಿಗೆ ನಾಯಕತ್ವ ತರಬೇತಿ ಶಿಬಿರ
ಹಣಕಾಸು ನಿರ್ವಹಣೆ, ತೀರ್ಮಾನಗಳ ತ್ವರಿತ ಅನುಷ್ಠಾನ, ಕಡತಗಳ ಶೀಘ್ರ ವಿಲೇವಾರಿ, ಇಲಾಖಾ ಆಯವ್ಯಯಗಳ ಕುರಿತು ಚರ್ಚೆ ನಡೆಯಿತು.
Agencies 9 Sep 2019, 5:00 am