ಆ್ಯಪ್ನಗರ

ಸ್ವಾಮಿ ಚಿನ್ಮಯಾನಂದ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

ತನ್ನ ಮೇಲೆ ಅತ್ಯಾಚಾರ ಎಸಗಿರುವ ಸ್ವಾಮಿ ಚಿನ್ಮಯಾನಂದ ಅವರನ್ನು ಕೂಡಲೇ ಬಂಧಿಸದೇ ಇದ್ದರೆ ಆತ್ಮಹತ್ಯೆಗೆ ಶರಣಾಗುವುದಾಗಿ ಲೈಂಗಿಕ ಕಿರುಕುಳದ ಆರೋಪ ಮಾಡಿದ ಯುವತಿ ಬೆದರಿಕೆ ಹಾಕಿದ್ದಳು.

Vijaya Karnataka 25 Sep 2019, 8:38 am
ಶಹಜಹಾನ್‌ಪುರ: ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿಸಿಲುಕಿ ಜೈಲು ಸೇರಿರುವ ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದ ಅವರ ಜಾಮೀನು ಅರ್ಜಿಯನ್ನು ಶಹಜಹಾನ್‌ಪುರ ಚೀಫ್‌ ಜ್ಯೂಡಿಷಿಯಲ್‌ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ತಿರಸ್ಕರಿಸಿದೆ.
Vijaya Karnataka Web Chinmayananda


ಕಳೆದ ನಾಲ್ಕು ದಿನಗಳ ಹಿಂದೆ ಚಿನ್ಮಯಾನಂದ ಬಂಧನ

ಇಲ್ಲಿ ಅರ್ಜಿ ತಿರಸ್ಕೃತಗೊಂಡ ಬೆನ್ನಲ್ಲೇ ಚಿನ್ಮಯಾನಂದ ಅವರ ವಕೀಲ ಓಂ ಸಿಂಗ್‌, ಜಾಮೀನು ಕೋರಿ ಸೆಷನ್ಸ್‌ ಕೋರ್ಟ್‌ ಮೊರೆ ಹೋಗುವುದಾಗಿ ಹೇಳಿದ್ದಾರೆ. ಇದೇ ವೇಳೆ ಚಿನ್ಮಯಾನಂದ ಅವರನ್ನು ಸುಲಿಗೆ ಮಾಡಿದ ಆರೋಪದಲ್ಲಿಜೈಲು ಪಾಲಾಗಿರುವ ಸಂಜಯ್‌, ಸಚಿನ್‌ ಹಾಗೂ ವಿಕ್ರಂ ಎಂಬ ಮೂವರು ಆರೋಪಿಗಳ ಜಾಮೀನು ಅರ್ಜಿಯನ್ನೂ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ವಜಾಗೊಳಿಸಿದೆ. ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದ ಎಸ್‌ಐಟಿ ಕಳೆದ ಶುಕ್ರವಾರ ಚಿನ್ಮಯಾನಂದ ಅವರನ್ನು ಬಂಧಿಸಿದೆ.

ಅನಾರೋಗ್ಯದಿಂದ ಬಳಲುತ್ತಿರುವ ಚಿನ್ಮಯಾನಂದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ನಾನದ ವಿಡಿಯೋ ಮಾಡಿ ಅತ್ಯಾಚಾರ: ಚಿನ್ಮಯಾನಂದ ವಿರುದ್ಧ 43 ದೃಶ್ಯದ ತುಣುಕು ಕೊಟ್ಟ ವಿದ್ಯಾರ್ಥಿನಿ

ಯುವತಿಯ ಆರೋಪ

ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಕಾನೂನು ಪದವಿಗಾಗಿ ಪ್ರವೇಶ ಪಡೆದ ಸಂದರ್ಭದಲ್ಲಿ ಸ್ವಾಮಿ ಚಿನ್ಮಯಾನಂದ ನನಗೆ ಕೆಲಸ ನೀಡುವ ಭರವಸೆ ನೀಡಿದರು. ಅಂದು ಕತ್ತಲಾಗುವವರೆಗೂ ನಾನು ಕಾಲೇಜಿನಲ್ಲೇ ಇರಬೇಕಾದ ಅನಿವಾರ್ಯತೆ ಸೃಷ್ಟಿಸಿದರು. ಬಳಿಕ ಕಾಲೇಜು ಸಿಬ್ಬಂದಿಯ ಬಲವಂತದ ಮೇರೆಗೆ ನಾನು ಹಾಸ್ಟೇಲ್‌ನಲ್ಲಿಯೇ ಉಳಿದುಕೊಂಡೆ. ಈ ವೇಲೆ ನಾನು ಸೇರಿದಂತೆ ಹಲವು ವಿದ್ಯಾರ್ಥಿನಿಯರ ಮೇಲೆ ಚಿನ್ಮಯಾನಂದ ಲೈಂಗಿಕ ಕೌರ್ಜನ್ಯ ಎಸಗಿದರು. ಆದರೆ, ಈ ಸಂಬಂಧ ನಾನೊಬ್ಬಳೆ ಧ್ವನಿ ಎತ್ತುವ ಧೈರ್ಯ ತೆಗೆದುಕೊಂಡೆ ಎನ್ನುವುದು ಯುವತಿಯ ಆರೋಪವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ