ಕೊರೊನಾ ಲಸಿಕೆ ಎಂದು ಮಕ್ಕಳಿಗೆ ಮದ್ಯ ನೀಡುತ್ತಿದ್ದ ನಕಲಿ ಸ್ವಾಮೀಜಿಯ ಬಂಧನ!
ಸಾಧುಗಳ ಹೆಸರಲ್ಲಿ ಕೆಲವು ನಕಲಿ ಸಾಧುಗಳು ತಲೆ ಎತ್ತಿದ್ದಾರೆ. ಇಂತವರ ಪೈಕಿ ಇದೀಗ ಉತ್ತರ ಪ್ರದೇಶದಲ್ಲಿ ಓರ್ವನನ್ನ ಅರೆಸ್ಟ್ ಮಾಡಲಾಗಿದೆ. ಕೊರೊನಾಗೆ ಔಷಧಿ ಎಂದು ಹೇಳುತ್ತ ಮಕ್ಕಳಿಗೆ ಮದ್ಯ ನೀಡಿ ಬಳಿಕ ಲೈಂಗಿಕ ಕಿರುಕುಳ ನೀಡುತ್ತಿದ್ದ ಈ ಖತರ್ನಾಕ್ ಸ್ವಾಮೀಜಿ.
TIMESOFINDIA.COM 14 Jul 2020, 8:12 am
ಮುಜಫ್ಫರನಗರ: ಕೊರೊನಾ ವೈರಸ್ಗೆ ಔಷಧವೆಂದು ಮಕ್ಕಳಿಗೆ ಮದ್ಯ ಸೇವಿಸುವಂತೆ ಒತ್ತಾಯಿಸಿ ಬಳಿಕ ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ನಕಲಿ ಸಾಧುವಿನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮಕ್ಕಳ ಸಹಾಯವಾಣಿಯ ನೆರವಿನಿಂದ ಪೊಲೀಸರ ತಂಡ ಉತ್ತರ ಪ್ರದೇಶದ ಮುಜಫ್ಫರನಗರ ಜಿಲ್ಲೆಯ ಶುಕ್ರತಾಳ್ನ ಆಶ್ರಮದ ದಾಳಿ ನಡೆಸಿ ಎಂಟು ಮಕ್ಕಳನ್ನು ರಕ್ಷಿಸಲಾಗಿದೆ.
ಗೋದಿಯಾ ಮಠ ಆಶ್ರಮದ ಮುಖ್ಯಸ್ಥ, ಸ್ವಾಮಿ ಭಕ್ತಿ ಭೂಷಣ್ ನಿತ್ಯವೂ ಆಶ್ರಮದಲ್ಲಿ ಅಭ್ಯಾಸ ಮಾಡುತ್ತಿದ್ದ ಮಕ್ಕಳಿಗೆ ಕೋವಿಡ್ ಔಷಧವೆಂದು ಹೇಳಿ ಮದ್ಯಪಾನ ಮಾಡುವಂತೆ ಒತ್ತಾಯಿಸುತ್ತಿದ್ದ. ಬಳಿಕ ಅವರಿಗೆ ನೀಲಿ ಚಿತ್ರಗಳನ್ನು ವೀಕ್ಷಿಸುವಂತೆ ಪ್ರೇರೆಪಿಸುತ್ತಿದ್ದ. ಆ ವೇಳೆ ಮಕ್ಕಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.
ಆಶ್ರಮದ ಎರಡು ಅಂತಸ್ತಿನ ಕಟ್ಟಡ ನಿರ್ಮಾಣವಾಗುತ್ತಿದ್ದು, ಅಲ್ಲಿ ದುಡಿಯುವಂತೆಯೂ ಮಕ್ಕಳನ್ನು ಒತ್ತಾಯಿಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಮಕ್ಕಳ ಸಹಾಯವಾಣಿಗೆ ಬಂದ ಕರೆಗಳ ನೆರವಿನಿಂದ ಪೊಲೀಸರು ಆಶ್ರಮದ ಮೇಲೆ ದಾಳಿ ನಡೆಸಿ ಮಕ್ಕಳನ್ನು ರಕ್ಷಿಸಿದ್ದಾರೆ.
ಕೊರೊನಾ ಲೈವ್ ಅಪ್ಡೇಟ್ಸ್: ದೇಶದಲ್ಲಿ 9ಲಕ್ಷದ 07ಸಾವಿರಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ!
ರಕ್ಷಿಸಲಾದ ಮಕ್ಕಳೆಲ್ಲರೂ 7 ರಿಂದ 16 ವರ್ಷದವರಾಗಿದ್ದು ಈಶಾನ್ಯ ಭಾರತ ಮೂಲದವರಾಗಿದ್ದಾರೆ. ''ನಕಲಿ ಸಾಧು ಸ್ವಾಮಿ ಭಕ್ತಿ ಭೂಷಣ್ ಕಳೆದ 12 ವರ್ಷದಿಂದ ಇಲ್ಲಿ ಆಶ್ರಮ ನಡೆಸುತ್ತಿದ್ದಾನೆ. ಮಕ್ಕಳ ಪೈಕಿ ನಾಲ್ವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದುಬಂದಿದೆ.
ಗೋದಿಯಾ ಮಠ ಆಶ್ರಮದ ಮುಖ್ಯಸ್ಥ, ಸ್ವಾಮಿ ಭಕ್ತಿ ಭೂಷಣ್ ನಿತ್ಯವೂ ಆಶ್ರಮದಲ್ಲಿ ಅಭ್ಯಾಸ ಮಾಡುತ್ತಿದ್ದ ಮಕ್ಕಳಿಗೆ ಕೋವಿಡ್ ಔಷಧವೆಂದು ಹೇಳಿ ಮದ್ಯಪಾನ ಮಾಡುವಂತೆ ಒತ್ತಾಯಿಸುತ್ತಿದ್ದ. ಬಳಿಕ ಅವರಿಗೆ ನೀಲಿ ಚಿತ್ರಗಳನ್ನು ವೀಕ್ಷಿಸುವಂತೆ ಪ್ರೇರೆಪಿಸುತ್ತಿದ್ದ. ಆ ವೇಳೆ ಮಕ್ಕಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.
ಆಶ್ರಮದ ಎರಡು ಅಂತಸ್ತಿನ ಕಟ್ಟಡ ನಿರ್ಮಾಣವಾಗುತ್ತಿದ್ದು, ಅಲ್ಲಿ ದುಡಿಯುವಂತೆಯೂ ಮಕ್ಕಳನ್ನು ಒತ್ತಾಯಿಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಮಕ್ಕಳ ಸಹಾಯವಾಣಿಗೆ ಬಂದ ಕರೆಗಳ ನೆರವಿನಿಂದ ಪೊಲೀಸರು ಆಶ್ರಮದ ಮೇಲೆ ದಾಳಿ ನಡೆಸಿ ಮಕ್ಕಳನ್ನು ರಕ್ಷಿಸಿದ್ದಾರೆ.
ಕೊರೊನಾ ಲೈವ್ ಅಪ್ಡೇಟ್ಸ್: ದೇಶದಲ್ಲಿ 9ಲಕ್ಷದ 07ಸಾವಿರಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ!
ರಕ್ಷಿಸಲಾದ ಮಕ್ಕಳೆಲ್ಲರೂ 7 ರಿಂದ 16 ವರ್ಷದವರಾಗಿದ್ದು ಈಶಾನ್ಯ ಭಾರತ ಮೂಲದವರಾಗಿದ್ದಾರೆ. ''ನಕಲಿ ಸಾಧು ಸ್ವಾಮಿ ಭಕ್ತಿ ಭೂಷಣ್ ಕಳೆದ 12 ವರ್ಷದಿಂದ ಇಲ್ಲಿ ಆಶ್ರಮ ನಡೆಸುತ್ತಿದ್ದಾನೆ. ಮಕ್ಕಳ ಪೈಕಿ ನಾಲ್ವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದುಬಂದಿದೆ.