ಆ್ಯಪ್ನಗರ

ಝಾನ್ಸಿ ರೈಲು ನಿಲ್ದಾಣದ ಹೆಸರು ಬದಲಾಯಿಸಲು ನಿರ್ಧರಿಸಿದ ಆದಿತ್ಯನಾಥ್‌ ಸರಕಾರ

ರೈಲು ನಿಲ್ದಾಣದ ಹೆಸರು ಬದಲಾವಣೆ ಸಂಬಂಧ ರೈಲ್ವೆ ಸಚಿವಾಲಯಕ್ಕೆ ಅಧಿಕೃತ ಪ್ರಸ್ತಾವನೆಯನ್ನೂ ಸಲ್ಲಿಸಿದೆ. ರೈಲ್ವೆ ಸಚಿವಾಲಯವು ಪ್ರಸ್ತಾವನೆಯನ್ನು ಅಂಚೆ ಇಲಾಖೆ ಮತ್ತು ಸರ್ವೆ ಆಫ್‌ ಇಂಡಿಯಾಕ್ಕೆ ರವಾನಿಸಿದ್ದು, ದಾಖಲೆಗಳನ್ನು ಪರಿಶೀಲಿಸಿ, ಈ ಹೆಸರಿನ ಯಾವುದೇ ನಿಲ್ದಾಣ ಅಥವಾ ಊರು ಇಲ್ಲ ಎನ್ನುವುದನ್ನು ಈ ಇಲಾಖೆಗಳು ದೃಢೀಕರಿಸಬೇಕು.

Vijaya Karnataka 4 Aug 2021, 7:34 am
ಲಖನೌ: ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರ ಪ್ರದೇಶ ಸರಕಾರವು ಝಾನ್ಸಿ ರೈಲು ನಿಲ್ದಾಣದ ಹೆಸರನ್ನು ‘ವೀರಾಂಗನಾ ಲಕ್ಷ್ಮೀಬಾಯಿ ರೈಲುನಿಲ್ದಾಣ’ ಎಂದು ಬದಲಿಸಲು ತೀರ್ಮಾನಿಸಿದೆ.
Vijaya Karnataka Web jhansi railway station


ಈ ಸಂಬಂಧ ರೈಲ್ವೆ ಸಚಿವಾಲಯಕ್ಕೆ ಅಧಿಕೃತ ಪ್ರಸ್ತಾವನೆಯನ್ನೂ ಸಲ್ಲಿಸಿದೆ. ರೈಲ್ವೆ ಸಚಿವಾಲಯವು ಪ್ರಸ್ತಾವನೆಯನ್ನು ಅಂಚೆ ಇಲಾಖೆ ಮತ್ತು ಸರ್ವೆ ಆಫ್‌ ಇಂಡಿಯಾಕ್ಕೆ ರವಾನಿಸಿದ್ದು, ದಾಖಲೆಗಳನ್ನು ಪರಿಶೀಲಿಸಿ, ಈ ಹೆಸರಿನ ಯಾವುದೇ ನಿಲ್ದಾಣ ಅಥವಾ ಊರು ಇಲ್ಲ ಎನ್ನುವುದನ್ನು ಈ ಇಲಾಖೆಗಳು ದೃಢೀಕರಿಸಬೇಕು. ನಂತರ ರೈಲ್ವೆ ಸಚಿವಾಲಯದ ಶಿಫಾರಸು ಆಧರಿಸಿ ಗೃಹ ಸಚಿವಾಲಯವು ಹೆಸರು ಬದಲಾವಣೆ ಸಂಬಂಧ ಅಧಿಕೃತ ಅಧಿಸೂಚನೆ ಹೊರಡಿಸುತ್ತದೆ.
ಮುಂಬೈ ಏರ್‌ಪೋರ್ಟ್‌ನಲ್ಲಿರುವ ‘ಅದಾನಿ ವಿಮಾನ ನಿಲ್ದಾಣ’ ಫಲಕ ಧ್ವಂಸಗೊಳಿಸಿದ ಶಿವಸೇನೆ
ಕೆಲದಿನಗಳ ಹಿಂದಷ್ಟೇ ವಾರಾಣಸಿಯ ಮಂಡೂದಿಹ್‌ ರೈಲುನಿಲ್ದಾಣದ ಹೆಸರನ್ನು ಬನಾರಸ್‌ ಎಂದು ಬದಲಿಸಲಾಗಿದೆ. ಮುಘಲ್‌ಸರಾಯ್‌ ನಿಲ್ದಾಣಕ್ಕೆ 2018ರಲ್ಲಿ ಪಂಡಿತ ದೀನ್‌ದಯಾಳ್‌ ಉಪಾಧ್ಯಾಯ ರೈಲು ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ