ಆ್ಯಪ್ನಗರ

ಸುಂದರವಾಗಿಲ್ಲವೆಂದು ಸಾಯಿಸಿ ಬಿಟ್ಟ ಪಾಪಿ ಪತಿ

ನೋಡಲು ಸುಂದರವಾಗಿಲ್ಲವೆಂದು ಜರಿಯುತ್ತ ಸದಾ ಹಿಂಸಿಸುತ್ತಿದ್ದ ಪಾಪಿ ಪತಿಯೊಬ್ಬ ಇದೇ ಕಾರಣಕ್ಕೆ ಪತ್ನಿಯನ್ನು ಉಸಿರುಗಟ್ಟಿಸಿ ಸಾಯಿಸಿದ ಅಮಾನುಷ ಪ್ರಸಂಗ ಜಿಲ್ಲೆಯ ಜಗ್ತೀರಾ ಗ್ರಾಮದಲ್ಲಿ ನಡೆದಿದೆ.

TIMESOFINDIA.COM 9 Jun 2018, 1:00 pm
ಬರೇಲಿ: ನೋಡಲು ಸುಂದರವಾಗಿಲ್ಲವೆಂದು ಜರಿಯುತ್ತ ಸದಾ ಹಿಂಸಿಸುತ್ತಿದ್ದ ಪಾಪಿ ಪತಿಯೊಬ್ಬ ಇದೇ ಕಾರಣಕ್ಕೆ ಪತ್ನಿಯನ್ನು ಉಸಿರುಗಟ್ಟಿಸಿ ಸಾಯಿಸಿದ ಅಮಾನುಷ ಪ್ರಸಂಗ ಜಿಲ್ಲೆಯ ಜಗ್ತೀರಾ ಗ್ರಾಮದಲ್ಲಿ ನಡೆದಿದೆ.
Vijaya Karnataka Web 31277562_180246176122074_221722674429165568_n


ಮೃತಳ ಪೋಷಕರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಘಟನೆ ವಿವರ: ಹಿಂದೊರ್ ಗ್ರಾಮದ ನಿವಾಸಿಯಾಗಿದ್ದ ನಿಘಾಟ್ ( 24) ಮಾರ್ಚ್ 2017ರಲ್ಲಿ ತಸವ್ವರ್ ಖಾನ್ ಎಂಬಾತನನ್ನು ಮದುವೆಯಾಗಿದ್ದಳು. ಮದುವೆಯಾದಾಗಿಂದ ಆಕೆಯ ಪತಿ ನೀ ನೋಡಲು ಸುಂದರವಾಗಿಲ್ಲ ಎಂದು ಆಕೆಯನ್ನು ಹಿಂಸಿಸುತ್ತಿದ್ದ. ಆಕೆಯ ಮೈದುನ ಕೂಡ ಅಣ್ಣನಿಗೆ ಸಾಥ್ ನೀಡುತ್ತಿದ್ದ. ಅತ್ತೆ- ಮಾವ ಸಹ ವರದಕ್ಷಿಣೆ ತರುವಂತೆ ಕಾಟ ಕೊಡುತ್ತಿದ್ದರು.

ವರದಕ್ಷಿಣೆ ತರದಿದ್ದರೆ ಕೊಂದು ಹಾಕುವುದಾಗಿ ಅತ್ತೆ ಮಾವ ಸದಾ ನನ್ನ ಮಗಳನ್ನು ಪೀಡಿಸುತ್ತಿದ್ದರು, ಮನಬಂದಂತೆ ಥಳಿಸುತ್ತಿದ್ದರು. ನೀನು ನೋಡಲು ಸುಂದರವಾಗಿಲ್ಲ, ತವರಿಂದ ಹಣ ತಂದು ಸೌಂದರ್ಯವರ್ಧಕ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಬಲವಂತ ಮಾಡುತ್ತಿದ್ದರು ಎಂದು ಮೃತಳ ತಂದೆ ನೆಹಾಲುದ್ದೀನ್ ಅಳಲು ತೋಡಿಕೊಂಡಿದ್ದಾರೆ.

ಗುರುವಾರ ಮಧ್ಯಾಹ್ನ 2 ಗಂಟೆಗೆ ಸುಮಾರಿಗೆ ಫೋನ್ ಕರೆ ಮಾಡಿದ ಮಗಳು ಅಪ್ಪ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಅತ್ತಿದ್ದಾಳೆ. ತಕ್ಷಣ ನಾನು ಮತ್ತು ಪತ್ನಿ ಅಫ್ರೋಜ್ ಬೇಗಂ ಆಕೆಯನ್ನು ನೋಡಲು ಹೋಗುತ್ತಿದ್ದಾಗ ಅಳಿಯನಿಂದ ಫೋನ್ ಕರೆ ಬಂತು. ಆತ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ. ಅವರ ಮನೆಗೆ ಹೋಗಿ ಮಗಳು ಸಾವನ್ನಪ್ಪಿರುವುದು ಖಚಿತವಾದಾಗ ಪೊಲೀಸರಿಗೆ ಫೋನ್ ಕರೆ ಮಾಡಿದೆ ಎಂದಾತ ಹೇಳಿದ್ದಾನೆ.

ಪ್ರಮುಖ ಆರೋಪಿ ಪತಿಯನ್ನು ಬಂಧಿಸಿರುವ ಪೊಲೀಸರು ಉಳಿದ ಮೂವರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ