ಆ್ಯಪ್ನಗರ

ಟೀಚರ್ ಹೇಳಿದ್ರು ನೀ ಝಿರೋ, UPSCಯಲ್ಲಿ 261ನೇ ರ‍್ಯಾಂಕ್

ಸೋಲನ್ನು ಮೆಟ್ಟಿ ನಿಂತು ಗೆಲುವನ್ನು ಪಡೆದ ಸಾಧಕ ಸೈಯ್ಯದ್ ಸಾಮಾನ್ಯರಿಗೆ ಪ್ರೇರಣೆಯಾಗಿದ್ದಾರೆ.

Times Now 14 Jul 2019, 12:55 pm
ಹೊಸದಿಲ್ಲಿ: ಸೈಯ್ಯದ್ ರಿಯಾಜ್ ಅಹಮದ್ 12ನೇ ತರಗತಿಯಲ್ಲಿ ಫೇಲ್ ಆಗಿದ್ದ. ಆಗ ಶಿಕ್ಷಕರು ಹೇಳಿದ್ದರು- ನೀನು ಝೀರೋ, ನಿನ್ನಿಂದ ಏನೂ ಮಾಡಲಾಗದು. ಕೆಲವು ವರ್ಷಗಳ ಬಳಿಕ ಆತ ಕೇಂದ್ರ ಲೋಕ ಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆಯಲ್ಲೂ ವಿಫಲನಾದ. ಆದರೂ ಆತ ಗುರಿಯಿಂದ ವಿಮುಖನಾಗಲಿಲ್ಲ. ಕಠಿಣ ಪರಿಶ್ರಮದಿಂದ ಕೊನೆಗೂ IAS ಪರೀಕ್ಷೆ ಪಾಸಾದ. ದೇಶದ ಅತಿ ಕಠಿಣ ಪರೀಕ್ಷೆಯಲ್ಲಾತ 261ನೇ ರ‍್ಯಾಂಕ್ ಪಡೆದು ತಾನು ಸೊನ್ನೆಯಲ್ಲ ಎಂಬುದನ್ನು ಸಾಬೀತು ಪಡಿಸಿದ.
Vijaya Karnataka Web Syed-Riaz-Ahmed


ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಸೈಯ್ಯದ್ ಹೇಳುತ್ತಾರೆ, ನಮ್ಮ ತಂದೆಯನ್ನು ಕರೆದ ಕ್ಲಾಸ್ ಟೀಚರ್ ನಿಮ್ಮ ಮಗ ಪೆದ್ದ, ಸೊನ್ನೆ, ಆನ ತಲೆಯಲ್ಲಿ ಏನೂ ಇಲ್ಲ ಎಂದು. ಆದರೆ ಆ ಮಾತುಗಳು ನನ್ನನ್ನು ಕುಗ್ಗಿಸಲಿಲ್ಲ.

ನಾಲ್ಕು ಪ್ರಯತ್ನಗಳಲ್ಲಿ ವಿಫರಾಗಿದ್ದ ಅವರು, ನಾನು ನಿಜಕ್ಕೂ ಸೊನ್ನೆನಾ ಎಂದು ಯೋಚಿಸಿದ್ದರು. IAS ಕನಸನ್ನು ಬಿಟ್ಟು ಬಿಡಲು ಯೋಚಿಸಿದ್ದ ಅವರಿಗೆ ತಂದೆ ಹೇಳಿದ್ದರು. ನೀನು ಪ್ರಯತ್ನ ಕೈ ಬಿಡಲು ಯೋಚಿಸಿದ್ದರೆ ಹಾಗೆ ಮಾಡು. ಆದರೆ ನಿನ್ನ ಕನಸು ಕನಸಾಗೇ ಇರಬೇಕೇ? ಎಂದು.

ಮತ್ತೆ ಸೈಯ್ಯದ್ ಹಿಂತಿರುಗಿ ನೋಡಲಿಲ್ಲ. ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಎರಡು ಬಾರಿ ವಿಫಲರಾಗಿದ್ದ ಅವರು ಮೂರನೇ ಬಾರಿ ಪಾಸು ಮಾಡಿದ್ದರು. ಐದನೇ ಬಾರಿ 261ನೇ ರ‍್ಯಾಂಕ್‌ನೊಂದಿಗೆ ಗೆಲುವನ್ನು ದಾಖಲಿಸಿಯೇ ಬಿಟ್ಟರು.

ಸೋಲೇ ಗೆಲುವಿನ ಸೋಪಾನ, ದೃಢ ಮನಸ್ಸಿದ್ದರೆ ಎಲ್ಲವೂ ಸಾಧ್ಯ ಎನ್ನುವುದು ಇಂತವರನ್ನು ನೋಡಿಯೇ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ