ಆ್ಯಪ್ನಗರ

ವಿಚ್ಛೇದನಕ್ಕೆ ದಾರಿ ಮಾಡಿಕೊಟ್ಟ 'ಪಿಎಚ್ಡಿ' ಗಂಡನ ವಿಪರೀತ ಓದಿನ ಗೀಳು!

ಓದಿನ ಅಷ್ಟೊಂದು ಗೀಳಿದ್ದರೆ, ಮದುವೆ ಮಾಡಿಕೊಂಡಿದ್ದಾದರೂ ಏತಕೆ? ಮದುವೆ ಮಾಡಿಕೊಂಡಾದ ಮೇಲೆಯೂ ಉನ್ನತ ವ್ಯಾಸಂಗಕ್ಕಾಗಿ ಓದಿನಲ್ಲಿ ಮುಳುಗಿದ ಗಂಡ, ಹೆಂಡತಿಯನ್ನು ಕಡೆಗಣಿಸಿದ್ದು ಏತಕೆ?

Vijaya Karnataka Web 31 Aug 2019, 4:24 pm
ಭೋಪಾಲ್ : ಹಲವಾರು ಮಹಿಳೆಯರು ತನ್ನ ಗಂಡ ಹೆಚ್ಚಿನ ವಿದ್ಯಾಭ್ಯಾಸ ಮಾಡಿ, ಅತ್ಯುತ್ತಮ ಹುದ್ದೆ ಗಳಿಸಿ, ಹೆಚ್ಚಿನ ಕಮಾಯಿ ಮಾಡಲಿ, ಹಣಕಾಸಿನ ತೊಂದರೆಯಾಗದಂತೆ ಸಂಸಾರ ದೂಗಿಸಲಿ ಎಂದು ಆಶಿಸಿರುತ್ತಾಳೆ. ಆದರೆ, ಬರೀ ಅದನ್ನೇ ಮಾಡುತ್ತ ಹೆಂಡತಿಯನ್ನೇ ಕಡೆಗಣಿಸಿದರೆ?
Vijaya Karnataka Web muslim-marriage-rituals


ಉನ್ನತ ವ್ಯಾಸಂಗ ಮಾಡಿ, ಉನ್ನತ ಉದ್ಯೋಗ ಗಳಿಸಿ, ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕೆಂದು ಕನಸು ಕಂಡಿದ್ದ ವ್ಯಕ್ತಿಯೊಬ್ಬ, ಜೊತೆಗಿದ್ದ ಸಂಸಾರವನ್ನು ಮರೆತಿದ್ದಕ್ಕಾಗಿ ಭಾರೀ ಬೆಲೆ ತೆರುವ ಸ್ಥಿತಿಗೆ ತಲುಪಿದ್ದಾನೆ. ಮದುವೆಯಾದ ಹೊಸತರಲ್ಲಿಯೇ ಸಂಸಾರ ಒಡೆದು ನುಚ್ಚುನೂರಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯೇ ಅತೀವವಾಗಿ ಮುಳುಗಿದ್ದ ಮಧ್ಯ ಪ್ರದೇಶದ ವ್ಯಕ್ತಿಯೇ ತನ್ನ ಹೆಂಡತಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ. ತನ್ನ ಗಂಡನಿಗೆ ತನಗಿಂತ ಸ್ಪರ್ಧಾತ್ಮಕ ಪರೀಕ್ಷೆಗಳೇ ಹೆಚ್ಚಾದವು, ತನ್ನನ್ನು ಆತ ಸಂಪೂರ್ಣ ಕಡೆಗಣಿಸಿದ್ದ ಎಂದು ಆರೋಪಿಸಿದ್ದಾಳೆ. ಇಷ್ಟಾದರೂ ಆತನೊಂದಿಗೆ ಸಂಸಾರ ನಡೆಸಲು ಆಸಕ್ತಿಯಿದೆ ಎಂದು ಹೇಳಿದ್ದಾಳೆ.

ತನ್ನ ಗಂಡ ಯುಪಿಎಸ್ಸಿ ಮತ್ತು ರಾಜ್ಯಮಟ್ಟದ ಇತರ ಪರೀಕ್ಷೆಗಳ ತಯಾರಿಯಲ್ಲಿಯೇ ಮುಳುಗಿರುತ್ತಿದ್ದ. ಆತನಿಗೆ ನನ್ನ ಬಗ್ಗೆ ಆಸಕ್ತಿಯೇ ಇರಲಿಲ್ಲ, ನನ್ನನ್ನು ಕಡೆಗಣಿಸುತ್ತಿದ್ದ. ಸಂಸಾರದಲ್ಲಿ ಎಳ್ಳಷ್ಟೂ ಆಸಕ್ತಿ ತೋರುತ್ತಿರಲಿಲ್ಲ ಎಂದು ಜಿಲ್ಲಾ ಕಾನೂನು ಸೇವಾ ಆಯೋಗದ ಮುಂದೆ ನೂರುನ್ನಿಸಾ ಖಾನ್ ಹೇಳಿದ್ದಾಳೆ.

ಆತ ಈಗಾಗಲೆ ಪಿಎಚ್ಡಿ ಪಡೆದಿದ್ದಾನೆ. ಆತ ಕುಟುಂಬದ ಏಕೈಕ ಮಗನಾಗಿದ್ದರಿಂದ, ಕುಟುಂಬದ ಸದಸ್ಯರೊಬ್ಬರಿಗೆ ಮಾರಣಶೈಯೆಯಲ್ಲಿ ಇದ್ದಿದ್ದರಿಂದ ತುರ್ತಾಗಿ ಮದುವೆಯಾಗಿದ್ದ. ಇದರಿಂದ ಪುಸ್ತಕಗಳಲ್ಲಿಯೇ ಮುಳುಗಿರುತ್ತಿದ್ದನೇ ಹೊರತು, ಹೊಸದಾಗಿ ಮದುವೆಯಾದ ಹೆಂಡತಿಯತ್ತ ತಿರುಗಿಯೂ ನೋಡುತ್ತಿರಲಿಲ್ಲ ಎಂದು ಆಕೆ ಆರೋಪಿಸಿದ್ದಾಳೆ.

ಆತನೇನು ಕಮ್ಮಿಯಿಲ್ಲ. ನನ್ನ ಹೆಂಡತಿ ತವರಿಗೆ ಹೋದವಳು ವಾಪಸ್ ಬರಲು ತಯಾರಿಲ್ಲ. ಆಕೆಯ ಪೋಷಕರೇ ಆಕೆಯನ್ನು ವಾಪಸ್ ಕಳುಹಿಸಿದಾಗಲೂ ಒಬ್ಬರಿಗೊಬ್ಬರು ಮಾತಾಡುತ್ತಲೂ ಇಲ್ಲ ಎಂದು ಗಂಡನೂ ಆರೋಪಿಸಿದ್ದು, ಪರಸ್ಪರ ವಿಚ್ಛೇದನಕ್ಕೆ ಅರ್ಜಿ ಗುಜರಾಯಿಸಿದ್ದಾರೆ. ಇಬ್ಬರ ಸಂಸಾರ ಸರಿದೂಗಿಸಲು ಎರಡೂ ಕುಟುಂಬದವರು ಪ್ರಯತ್ನಿಸಿದರೂ ಫಲ ನೀಡಿಲ್ಲ.

ಇನ್ನೂ ನಾಲ್ಕು ಮಾಡಿ ಆಯೋಗದ ಮುಂದೆ ಕೌನ್ಸೆಲಿಂಗ್ ನಡೆಯಲಿದ್ದು, ಮದುವೆಯನ್ನು ಉಳಿಸಿಕೊಳ್ಳುವ ಆಶಾಭಾವನೆಯನ್ನು ಆಕೆ ವ್ಯಕ್ತಪಡಿಸಿದ್ದಾಳೆ. ಪಿಎಚ್ಡಿ ಮಾಡಿರುವ ವ್ಯಕ್ತಿ ಇನ್ನೂ ಹೆಚ್ಚಿನ ವ್ಯಾಸಂಗ ಮಾಡಬಾರದಂತೇನೂ ಇಲ್ಲ, ಆದರೆ ಸಂಸಾರವೂ ಎಲ್ಲಕ್ಕಿಂತ ಮುಖ್ಯವಲ್ಲವೆ? ಏನಂತೀರಿ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ