ಆ್ಯಪ್ನಗರ

ನಗರ ನಕ್ಸಲರ ಪತ್ರ: 6 ಕಡೆ ದಾಳಿಗೆ ಸಂಚು

ನಕ್ಸಲ್‌ ಸಂಪರ್ಕ ಹೊಂದಿರುವ ಶಂಕೆಯಿಂದ ಬಂಧನಕ್ಕೊಳಗಾಗಿದ್ದ ಹೋರಾಟಗಾರರಲ್ಲೊಬ್ಬನಿಂದ ವಶಪಡಿಸಿಕೊಳ್ಳಲಾದ ಪತ್ರದಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಕಾರ್ಯಕರ್ತರು, 6 ಸ್ಥಳಗಳಲ್ಲಿ ಭದ್ರತಾ ಪಡೆಯ ಮೇಲೆ ದಾಳಿ ಮಾಡುವ ಯೋಜನೆ ಹೊಂದಿರುವುದರ ಬಗ್ಗೆ ಉಲ್ಲೇಖಿಸಲಾಗಿತ್ತು.

TIMESOFINDIA.COM 21 Sep 2018, 1:06 pm
[This story originally published in Times Of India on Sep 21, 2018]
Vijaya Karnataka Web nuxal


ಹೊಸದಿಲ್ಲಿ:
ನಕ್ಸಲ್‌ ಸಂಪರ್ಕ ಹೊಂದಿರುವ ಶಂಕೆಯಿಂದ ಬಂಧನಕ್ಕೊಳಗಾಗಿದ್ದ ಹೋರಾಟಗಾರರಲ್ಲೊಬ್ಬನಿಂದ ವಶಪಡಿಸಿಕೊಳ್ಳಲಾದ ಪತ್ರದಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಕಾರ್ಯಕರ್ತರು, 6 ಸ್ಥಳಗಳಲ್ಲಿ ಭದ್ರತಾ ಪಡೆಯ ಮೇಲೆ ದಾಳಿ ಮಾಡುವ ಯೋಜನೆ ಹೊಂದಿರುವುದರ ಬಗ್ಗೆ ಉಲ್ಲೇಖಿಸಲಾಗಿತ್ತು. ಅದರಲ್ಲಿ ನಾಲ್ಕು ಕಡೆ ಈಗಾಗಲೇ ದಾಳಿ ನಡೆದಿದ್ದು, ಇದು ಹೋರಾಟಗಾರರು ಮತ್ತು ನಕ್ಸಲರ ಮಧ್ಯೆ ನಂಟಿರುವುದನ್ನು ಸಾಬೀತುಪಡಿಸುತ್ತದೆ ಎಂದು ಪೊಲೀಸರು ಕೋರ್ಟ್ ವಿಚಾರಣೆ ವೇಳೆ ತಿಳಿಸಿದ್ದಾರೆ.

ಬಂಧಿತ ಹೋರಾಟಗಾರರು ಮತ್ತು ನಕ್ಸಲ್‌ರ ನಡುವೆ ಸಂಪರ್ಕವಿದೆ ಎಂಬುದು ಅವರಿಂದ ವಶಪಡಿಸಿಕೊಳ್ಳಲಾದ ಪತ್ರದಿಂದ ಸ್ಪಷ್ಟವಾಗಿದೆ, ಎಂದು ಪುಣೆ ಪೊಲೀಸರು ಸುಪ್ರೀಂ ಕೋರ್ಟ್ ಮುಂದೆ ಹೇಳಿದ್ದಾರೆ.

ನಕ್ಸಲರ ಜತೆ ನಂಟು ಮತ್ತು ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಅಗಸ್ಟ್ 28ರಂದು ದೇಶದ ವಿವಿಧೆಡೆ ಒಟ್ಟು 10 ಚಳುವಳಿಗಾರರ ಮನೆ ಮೇಲೆ ದಾಳಿ ನಡೆಸಿದ್ದ ಪುಣೆ ಪೊಲೀಸರು, ಸುಧಾ ಭಾರದ್ವಾಜ್, ಗೌತಮ್ ನವಾಲಖಾ, ವರ್ನಾನ್ ಗೋನ್ಸಾಲ್ವೆಸ್, ಅರುಣ್ ಫೆರೇರಾ, ವರವರರಾವ್ ಅವರನ್ನು ಬಂಧಿಸಿ, ಬಳಿಕ ಗೃಹ ಬಂಧನದಲ್ಲಿರಿಸಿದ್ದರು.

ಇತಿಹಾಸಕಾರ್ತಿ ರೊಮಿಲಾ ಥಾಪರ್, ಸತೀಶ್ ದೇಶಪಾಂಡೆ, ಪ್ರಭಾತ್ ಪಟ್ನಾಯಕ್, ದೇವಕಿ ಜೈನ್ ಮತ್ತು ಮಜು ದಾರುವಾಲ ಬಂಧನವನ್ನು ಪ್ರಶ್ನಿಸಿ ಮತ್ತು ಈ ಪ್ರಕರಣದ ಸ್ವತಂತ್ರ ವಿಚಾರಣೆ ನಡೆಸಬೇಕೆಂದು ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ವೇಳೆ ಪೊಲೀಸರು ಈ ಸಾಕ್ಷ್ಯವನ್ನು ಮುಂದಿಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ