ಆ್ಯಪ್ನಗರ

Yogi Adityanath: ಯೋಗಿ ಸರ್ಕಾರದಿಂದ 1300 ಮುಸ್ಲಿಂ ಜೋಡಿಗಳಿಗೆ ಶಾದಿ ಭಾಗ್ಯ!

Yogi Adityanath: ಯೋಗಿ ಸರ್ಕಾರದ ಯೋಜನೆಯ ಅನ್ವಯ ಸರ್ಕಾರ ವಿವಾಹದ ಬಳಿಕ ವಧುವಿಗೆ ಒಟ್ಟು 51 ಸಾವಿರ ರೂ. ನೀಡಲಿದೆ. ಈ ಪೈಕಿ 35 ಸಾವಿರ ರೂ.ಗಳನ್ನು ವಧುವಿನ ಖಾತೆಗೆ ವರ್ಗಾಯಿಸಲಾಗುತ್ತದೆ. ಮಿಕ್ಕ ಹಣದಲ್ಲಿ ವಧುವಿಗೆ ವಿವಾಹದ ವೇಳೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿ ಸರ್ಕಾರದ ವತಿಯಿಂದ ಕೊಡಲಾಗುತ್ತದೆ. ಆದರೆ, ವರನಿಗೆ ಸರ್ಕಾರದ ಕಡೆಯಿಂದ ಯಾವುದೇ ಧನ ಸಹಾಯ ಸಿಗೋದಿಲ್ಲ. ಈ ಯೋಜನೆ ಕೇವಲ ಬಡತನ ರೇಖೆಯಿಂದ ಕೆಳಗಿರುವ ಯಾವುದೇ ಜಾತಿ, ಧರ್ಮದ ಜೋಡಿಗೆ ಅನ್ವಯ ಆಗುತ್ತದೆ.​​

Authored byದಿಲೀಪ್ ಡಿ. ಆರ್. | Vijaya Karnataka Web 14 Oct 2022, 6:36 pm

ಹೈಲೈಟ್ಸ್‌:

  • ಉತ್ತರ ಪ್ರದೇಶ ರಾಜ್ಯಾದ್ಯಂತ ಮುಸ್ಲಿಂ ಬಡ ಕುಟುಂಬಗಳ ಸಾಮೂಹಿಕ ವಿವಾಹ
  • ಅನುದಾನ ನೀಡಲು ಬರೋಬ್ಬರಿ 600 ಕೋಟಿ ರೂ. ಸಂಗ್ರಹ
  • ಉತ್ತರ ಪ್ರದೇಶ ಸರ್ಕಾರ ಕಳೆದ ಆಗಸ್ಟ್‌ ವರೆಗೆ 81.76 ಕೋಟಿ ರೂ. ವೆಚ್ಚ ಮಾಡಿದೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web yogi adityanath
ಯೋಗಿ ಸರ್ಕಾರದಿಂದ 1300 ಮುಸ್ಲಿಂ ಜೋಡಿಗಳಿಗೆ ಶಾದಿ ಭಾಗ್ಯ!
ಲಖನೌ (ಉತ್ತರ ಪ್ರದೇಶ): ಮುಸ್ಲಿಂ ಸಮುದಾಯದ ಕಲ್ಯಾಣಕ್ಕಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಅಲ್ಪಸಂಖ್ಯಾತ ಸಮುದಾಯದ 1,300 ಜೋಡಿಗಳಿಗೆ ವಿವಾಹ ನೆರವೇರಿಸಲು ನಿರ್ಧರಿಸಿದೆ. ಇದಕ್ಕಾಗಿ ಪ್ರಸ್ತುತ ಹಣಕಾಸು ವರ್ಷದಲ್ಲಿ ಅನುದಾನವನ್ನೂ ತೆಗೆದಿರಿಸಿದೆ. ರಾಜ್ಯಾದ್ಯಂತ 1,300 ಜೋಡಿಗಳ ವಿವಾಹಕ್ಕೆ ಸಹಾಯ ಧನ ನೀಡಲು ನಿರ್ಧರಿಸಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ಸಾಮೂಹಿಕ ವಿವಾಹ ಯೋಜನೆಯಡಿ ಈ ಅನುದಾನ ನೀಡಲು ನಿರ್ಧರಿಸಲಾಗಿದ್ದು, ಕಳೆದ ವರ್ಷವಷ್ಟೇ ಈ ಯೋಜನೆ ರೂಪಿಸಲಾಗಿತ್ತು.

Madarasa: ಉತ್ತರ ಪ್ರದೇಶ ರಾಜ್ಯಾದ್ಯಂತ ಮಾನ್ಯತೆ ಇಲ್ಲದ ಮದರಸಾಗಳ ಸರ್ವೆಗೆ ಯೋಗಿ ಸರ್ಕಾರ ಆದೇಶ
ಈ ಹಿಂದೆ ಉತ್ತರ ಪ್ರದೇಶ ಸರ್ಕಾರದ ವಿವಿಧ ಇಲಾಖೆಗಳು ಅಲ್ಪಸಂಖ್ಯಾತ ಸಮುದಾಯದ ಬಡವರ ಮದುವೆಗೆ ಸಹಾಯ ಧನ ನೀಡುತ್ತಿದ್ದವು. ಇದಿಗ ಉತ್ತರ ಪ್ರದೇಶ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯನ್ನೇ ಮುಸ್ಲಿಮರ ಸಾಮೂಹಿಕ ವಿವಾಹಕ್ಕೆ ನೋಡಲ್ ಏಜೆನ್ಸಿಯನ್ನಾಗಿ ಮಾಡಲಾಗಿದೆ. ಈ ಏಜೆನ್ಸಿಗೆ ಉತ್ತರ ಪ್ರದೇಶ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಎತ್ತಿಟ್ಟಿರುವ ಅನುದಾನವನ್ನು ವರ್ಗಾಯಿಸಲಾಗಿದೆ.

ಸದ್ಯ ಉತ್ತರ ಪ್ರದೇಶ ರಾಜ್ಯಾದ್ಯಂತ ಮುಸ್ಲಿಂ ಬಡ ಕುಟುಂಬಗಳ ಸಾಮೂಹಿಕ ವಿವಾಹಕ್ಕೆ ಅನುದಾನ ನೀಡಲು ಬರೋಬ್ಬರಿ 600 ಕೋಟಿ ರೂ. ಸಂಗ್ರಹಿಸಿ ಇಡಲಾಗಿದೆ. ಇದು ಕೇವಲ ಈ ಆರ್ತಿಕ ವರ್ಷದ ಲೆಕ್ಕಾಚಾರವಾಗಿದ್ದು, ಉತ್ತರ ಪ್ರದೇಶ ಸರ್ಕಾರ ಕಳೆದ ಆಗಸ್ಟ್‌ ವರೆಗೆ 81.76 ಕೋಟಿ ರೂ. ವೆಚ್ಚ ಮಾಡಿದೆ.

ಮಹಿಳೆ ಮೇಲೆ ಹಲ್ಲೆ ಮಾಡಿದ ಬಿಜೆಪಿ ಮುಖಂಡನಿಗೇ ಬುಲ್ಡೋಜರ್ ಬಿಸಿ ಮುಟ್ಟಿಸಿದ ಯೋಗಿ ಸರ್ಕಾರ..!
ಪ್ರಸ್ತುತ ಆರ್ಥಿಕ ವರ್ಷದಲ್ಲಿ ಉತ್ತರ ಪ್ರದೇಶ ರಾಜ್ಯಾದ್ಯಂತ ಸಮಾಜ ಕಲ್ಯಾಣ ಇಲಾಖೆಯು ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಒಟ್ಟು 16,033 ಸಾಮೂಹಿಕ ವಿವಾಹಗಳನ್ನು ನೆರವೇರಿಸಿದೆ. ಈ ಪೈಕಿ 1,387 ಅಲ್ಪಸಂಖ್ಯಾತ ಜೋಡಿಗಳ ವಿವಾಹ ನೆರವೇರಿದೆ. ಇನ್ನುಳಿದಂತೆ 9,374 ದಲಿತ ಸಮುದಾಯದ ಜೋಡಿಗಳ ವಿವಾಹ ಮಾಡಿಸಲಾಗಿದೆ. ಒಬಿಸಿ ಸಮುದಾಯದ 4,649 ಜೋಡಿಗಳು ಹಾಗೂ ಜನರಲ್ ಕೆಟಗರಿಯ 623 ಜೋಡಿಗಳು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿವೆ.

ಇನ್ನು ಉತ್ತರ ಪ್ರದೇಶ ರಾಜ್ಯಾದ್ಯಂತ ನೆರವೇರಿದ ಸಾಮೂಹಿಕ ವಿವಾಹಗಳ ಪೈಕಿ ಮೊರಾದಾಬಾದ್ ವಿಭಾಗವು ಸಿಂಹ ಪಾಲನ್ನು ಪಡೆದಿದೆ. ಈ ವಿಭಾಗದಲ್ಲಿ ಒಟ್ಟು 1,567 ಸಾಮೂಹಿಕ ವಿವಾಹಗಳು ನಡೆದಿವೆ. ಇನ್ನುಳಿದಂತೆ ವಾರಣಾಸಿ 1,409, ಲಖನೌ 1,274, ಕಾನ್ಪುರ 1,035, ಅಯೋಧ್ಯಾ 1,014, ಮೀರಟ್ 962, ಪ್ರಯಾಗ್‌ರಾಜ್ 934, ಗೋರಖ್‌ಪುರ 933 ಹಾಗೂ ಬರೇಲಿಯಲ್ಲಿ 871 ಸಾಮೂಹಿಕ ವಿವಾಹಗಳು ನಡೆದಿವೆ.


ಸದ್ಯ ಉತ್ತರ ಪ್ರದೇಶದ ಸಮಾಜ ಕಲ್ಯಾಣ ಇಲಾಖೆಗೆ ಸಾಮೂಹಿಕ ವಿವಾಹಕ್ಕಾಗಿ ಭಾರೀ ಪ್ರಮಾಣದ ಅರ್ಜಿಗಳು ಬರುತ್ತಿವೆ. ಈ ಯೋಜನೆಯ ಅನ್ವಯ ಸರ್ಕಾರ ವಿವಾಹದ ಬಳಿಕ ವಧುವಿಗೆ ಒಟ್ಟು 51 ಸಾವಿರ ರೂ. ನೀಡಲಿದೆ. ಈ ಪೈಕಿ 35 ಸಾವಿರ ರೂ.ಗಳನ್ನು ವಧುವಿನ ಖಾತೆಗೆ ವರ್ಗಾಯಿಸಲಾಗುತ್ತದೆ. ಮಿಕ್ಕ ಹಣದಲ್ಲಿ ವಧುವಿಗೆ ವಿವಾಹದ ವೇಳೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿ ಸರ್ಕಾರದ ವತಿಯಿಂದ ಕೊಡಲಾಗುತ್ತದೆ. ಆದರೆ, ವರನಿಗೆ ಸರ್ಕಾರದ ಕಡೆಯಿಂದ ಯಾವುದೇ ಧನ ಸಹಾಯ ಸಿಗೋದಿಲ್ಲ. ಈ ಯೋಜನೆ ಕೇವಲ ಬಡತನ ರೇಖೆಯಿಂದ ಕೆಳಗಿರುವ ಯಾವುದೇ ಜಾತಿ, ಧರ್ಮದ ಜೋಡಿಗೆ ಅನ್ವಯ ಆಗುತ್ತದೆ.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ