ಆ್ಯಪ್ನಗರ

ಅಯೋಧ್ಯೆಯಲ್ಲಿ ಶ್ರೀರಾಮಾನುಜಾಚಾರ್ಯರ ಪುತ್ಥಳಿ ಅನಾವರಣ ಮಾಡಿದ ಯೋಗಿ ಆದಿತ್ಯನಾಥ್

ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಅಯೋಧ್ಯೆಯಲ್ಲಿ 120 ವರ್ಷಗಳ ನಂತರ, ರಾಮಾನುಜಾಚಾರ್ಯರ ಪುತ್ಥಳಿ ಅನಾವರಣಗೊಂಡಿದೆ. ನಮ್ಮ ದೇಶವು ಪುರಾತನ ಜ್ಞಾನಸಂಪುತ್ತು ಹಾಗೂ ಶ್ರೀರಾಮಾನುಜಾಚಾರ್ಯರ ಪವಿತ್ರ ಬೋಧನೆಗಳು ತೋರಿದ ಹಾದಿಯಲ್ಲೇ ಸಾಗುತ್ತಿದೆ. ರಾಮಾನುಜಾಚಾರ್ಯರ ಬೋಧನೆಗಳು ಲೌಕಿಕ ಬಂಧನಗಳನ್ನು ತೊಡೆದು ಅಧ್ಯಾತ್ಮದ ಹಾದಿಯಲ್ಲಿ ಮೋಕ್ಷ ಪಡೆಯುವ ದಾರಿಯನ್ನು ತೋರಿಸುತ್ತವೆ. ಅಷ್ಟೇ ಅಲ್ಲದೆ, ನಮ್ಮನ್ನು ಕೆಟ್ಟ ಶಕ್ತಿಗಳಿಂದ ಪಾರಾಗಲು ಸಹಾಯ ಮಾಡುತ್ತವೆ ಎಂದರು.

Authored byಚೇತನ್ ಓ.ಆರ್. | Vijaya Karnataka Web 12 Oct 2022, 10:11 pm
ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರೂಪುಗೊಳ್ಳುತ್ತಿರುವ ನವ ಭಾರತವು ತನ್ನ ಸಂಸ್ಕೃತಿ ಹಾಗೂ ಅಧ್ಯಾತ್ಮಿಕ ಪರಂಪರೆಯ ಹೆಮ್ಮೆಯನ್ನು ಹಿಂದೆಂದಿಗಿಂತಲೂ ಈಗ ಹೆಚ್ಚು ಅಗಾಧವಾಗಿ ಹೊರಸೂಸುವಂತಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ಹೇಳಿದ್ದಾರೆ.
Vijaya Karnataka Web Uttar Pradesh CM Yogi Adityanath unveils Sri Ramanujacharya statue in Ayodhya
ಅಯೋಧ್ಯೆಯಲ್ಲಿ ಯೋಗಿ ಆದಿತ್ಯನಾಥರಿಂದ ಅನಾವರಣಗೊಂಡ ಶ್ರೀರಾಮಾನುಜಾಚಾರ್ಯರ ಪುತ್ಥಳಿ.


ಅಯೋಧ್ಯೆಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಶ್ರೀರಾಮಾನುಜಾಚಾರ್ಯರವರ ಪುತ್ಥಳಿಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು. ಕಳೆದ ಡಿಸೆಂಬರ್ ನಲ್ಲಿ ಮೋದಿಯವರು ಕಾಶಿ ಕಾರಿಡಾರ್ ಅನಾವರಣಗೊಳಿಸಿದ್ದರು. ಮೊನ್ನೆಯಷ್ಟೇ ಮಹಾಕಾಳ ದೇಗುಲ ಕಾರಿಡಾರ್ ನ ಮೊದಲ ಹಂತದ ಸೌಲಭ್ಯಗಳನ್ನು ಅವರು ಅನಾವರಣಗೊಳಿಸಿದ್ದಾರೆ. ಉತ್ತರಾಖಾಂಡದ ಕೇದಾರನಾಥ ದೇಗುಲ ಕಾರಿಡಾರ್ ನ ಮೊದಲ ಹಂತದ ಸೌಲಭ್ಯಗಳ ಕಾಮಗಾರಿ ಜಾರಿಯಲ್ಲಿದೆ. ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿದೆ. ಈ ಎಲ್ಲವೂ ದೇಶದ ಸಂಸ್ಕೃತಿ ಹಾಗೂ ಅಧ್ಯಾತ್ಮಕ ಪರಂಪರೆಯನ್ನು ವಿಶ್ವಕ್ಕೆ ಸಾರುವ ಪ್ರಯತ್ನಗಳಾಗಿವೆ ಎಂದು ಅವರು ಹೇಳಿದರು.

Ayodhya Ram Mandir - ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಶೇ.50ರಷ್ಟು ಪೂರ್ಣ:ಯೋಗಿ ಆದಿತ್ಯನಾಥ್
“ಅಯೋಧ್ಯೆಯಲ್ಲಿ 120 ವರ್ಷಗಳ ನಂತರ, ರಾಮಾನುಜಾಚಾರ್ಯರ ಪುತ್ಥಳಿ ಅನಾವರಣಗೊಂಡಿದೆ. ನಮ್ಮ ದೇಶವು ಪುರಾತನ ಜ್ಞಾನಸಂಪುತ್ತು ಹಾಗೂ ಶ್ರೀರಾಮಾನುಜಾಚಾರ್ಯರ ಪವಿತ್ರ ಬೋಧನೆಗಳು ತೋರಿದ ಹಾದಿಯಲ್ಲೇ ಸಾಗುತ್ತಿದೆ. ರಾಮಾನುಜಾಚಾರ್ಯರ ಬೋಧನೆಗಳು ಲೌಕಿಕ ಬಂಧನಗಳನ್ನು ತೊಡೆದು ಅಧ್ಯಾತ್ಮದ ಹಾದಿಯಲ್ಲಿ ಮೋಕ್ಷ ಪಡೆಯುವ ದಾರಿಯನ್ನು ತೋರಿಸುತ್ತವೆ. ಅಷ್ಟೇ ಅಲ್ಲದೆ, ನಮ್ಮನ್ನು ಕೆಟ್ಟ ಶಕ್ತಿಗಳಿಂದ ಪಾರಾಗಲು ಸಹಾಯ ಮಾಡುತ್ತವೆ’’ ಎಂದು ಅವರು ಹೇಳಿದರು.

ನವಭಾರತವು, ತನ್ನ ಪುರಾತನ ವೇದ, ಉಪನಿಷತ್ತು, ಕಾಲದ ಮಿತಿಯನ್ನೂ ಮೀರಿದ ಅಧ್ಯಾತ್ಮ ಜ್ಞಾನ, ಏಕತೆಯ ಸಂದೇಶ, ಸರ್ವೇಜನೋ ಸುಖಿನೋ ಭವಂತು ಎಂಬ ಭಾವನೆ… ಇವೆಲ್ಲವನ್ನೂ ಗೌರವಿಸುತ್ತದೆ. ನಮ್ಮ ಭೂಮಿಯಲ್ಲಿ ಆಗಿ ಹೋಗಿರುವ ಅನೇಕ ಸಾಧುಗಳು, ಸನ್ಯಾಸಿಗಳು, ಅಧ್ಯಾತ್ಮ ಜ್ಞಾನಿಗಳು ಲೋಕ ಕಲ್ಯಾಣದ ಮೂಲಕವೇ ಮೋಕ್ಷ ಸಾಧಿಸಬಲ್ಲೆವು ಎಂಬ ಸತ್ಯವನ್ನು ಅರಿತಿದ್ದರು. ಈಗ ಇರುವ ಅಧ್ಯಾತ್ಮ ಸಾಧಕರು, ಧರ್ಮ ಪ್ರವರ್ತಕರು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಅವರು ತಿಳಿಸಿದರು.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ