ಆ್ಯಪ್ನಗರ

ವಧು ವಾಟ್ಸ್‌ಆ್ಯಪ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಾಳೆಂದು ಮದುವೆ ಕ್ಯಾನ್ಸಲ್ ಮಾಡಿದ ವರನ ತಂದೆ

ಉತ್ತರ ಪ್ರದೇಶದ ಅಮ್ರೋಹಾದಲ್ಲಿ ತಮ್ಮ ಪುತ್ರನ ಮದುವೆಯನ್ನು ಕುಟುಂಬವೊಂದು ರದ್ದುಗೊಳಿಸಿದೆ. ಆದರೆ, ಇದಕ್ಕೆ ವಿಚಿತ್ರ ಕಾರಣವನ್ನು ನೀಡಲಾಗಿದೆ.

TIMESOFINDIA.COM 11 Sep 2018, 11:38 am
[This story originally published in Times Of India on Sep. 11, 2018]
Vijaya Karnataka Web whatsapp

ಅಮ್ರೋಹಾ:
ಉತ್ತರ ಪ್ರದೇಶದ ಅಮ್ರೋಹಾದಲ್ಲಿ ತಮ್ಮ ಪುತ್ರನ ಮದುವೆಯನ್ನು ಕುಟುಂಬವೊಂದು ರದ್ದುಗೊಳಿಸಿದೆ. ಆದರೆ, ಇದಕ್ಕೆ ವಿಚಿತ್ರ ಕಾರಣವನ್ನು ನೀಡಲಾಗಿದೆ.

ವಧು ವಾಟ್ಸ್‌ಆ್ಯಪ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಾಳೆ ಎಂದು ವರನ ಕಡೆಯವರು ಮದುವೆ ರದ್ದುಗೊಳಿಸಿದ್ದಾರೆ. ವಧುವಿನ ತಂದೆ ಈ ಕುರಿತು ಉತ್ತರ ಪ್ರದೇಶದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮದುವೆಯ ದಿನ ಕರೆ ಮಾಡಿದ ವರನ ಕಡೆಯವರು ಮದುವೆ ಕ್ಯಾನ್ಸಲ್ ಮಾಡಿದ್ದಾರೆ ಎಂದು ವಧುವಿನ ತಂದೆ ಆರೋಪಿಸಿದ್ದಾರೆ.

ಈ ಕುರಿತು ವಿಜಯ ಕರ್ನಾಟಕ ಸೋದರ ಪತ್ರಿಕೆ ಟೈಮ್ಸ್ ಆಫ್‌ ಇಂಡಿಯಾಗೆ ಮಾಹಿತಿ ನೀಡಿದ ವಧುವಿನ ತಂದೆ, 'ನಮಗೆ ಮದುವೆ ರದ್ದಾಗುವ ಮಾಹಿತಿ ಗೊತ್ತಿರಲಿಲ್ಲ. ನನ್ನ ಮಗಳು ಮೂಹೂರ್ತಕ್ಕೆ ಸಿದ್ದಳಾಗುತ್ತಿದ್ದಳು. ಅಲ್ಲದೆ, ಬಹಳ ಖುಷಿಯಾಗಿದ್ದಳು. ಆ ವೇಳೆ, ನನಗೆ ಕರೆ ಮಾಡಿದ ವರನ ಕಡೆಯವರು ಮದುವೆ ಕ್ಯಾನ್ಸಲ್‌ ಮಾಡುತ್ತಿರುವುದಾಗಿ ತಿಳಿಸಿದರು' ಎಂದು ಹೇಳಿದ್ದಾರೆ. ಅಲ್ಲದೆ, ವರನ ತಂದೆ 70 ಲಕ್ಷ ರೂ. ವರದಕ್ಷಿಣೆ ಕೇಳಿದ್ದರು. ಅದನ್ನು ಈಡೇರಿಸಲು ನಮಗೆ ಸಾಧ್ಯವಾಗಲಿಲ್ಲ ಎಂದು ಕನ್ಯೆಯ ತಂದೆ ಆರೋಪಿಸಿದ್ದಾರೆ.

ಇನ್ನು, ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಬಗ್ಗೆ ಮಾಹಿತಿ ನೀಡಿದ ಅಮ್ರೋಹಾ ಸೂಪರಿಟೆಂಡೆಂಟ್ ಆಫ್ ಪೊಲೀಸ್ ವಿಪಿನ್ ಥಾಡಾ,' ಹುಡುಗಿ
ವಾಟ್ಸ್‌ಆ್ಯಪ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಾಳೆಂದು ವರನ ಕಡೆಯವರು ಮದುವೆ ರದ್ದುಗೊಳಿಸಿದ್ದಾರೆ ಎಂದು ವಧುವಿನ ತಂದೆ ನೌಗವಾನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಜತೆಗೆ, ವರನ ಕುಟುಂಬದವರು 70 ಲಕ್ಷ ರೂ. ವರದಕ್ಷಿಣೆ ನೀಡಲು ಆಗ್ರಹಿಸಿದ್ದರು' ಎಂದು ತಿಳಿಸಿದ್ದಾರೆ. ಅಲ್ಲದೆ, ವಧು ಹಾಗೂ ಆತನ ತಂದೆ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ