ಆ್ಯಪ್ನಗರ

'ನಿರ್ಭಯಾ' ಅಪರಾಧಿಗಳ ಗಲ್ಲು ಶಿಕ್ಷೆ ಜಾರಿಗೆ ನಾನು ರೆಡಿ! ಯುಪಿ 'ಹ್ಯಾಂಗ್‌ ಮನ್' ಘೋಷಣೆ

ನಿರ್ಭಯಾ ಪ್ರಕರಣದಲ್ಲಿ ​​ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅತ್ಯಾಚಾರಿಗಳನ್ನು ಸದ್ಯ ದಿಲ್ಲಿಯ ತಿಹಾರ್‌ ಜೈಲಿನಲ್ಲಿ ಇಡಲಾಗಿದೆ. ವಾರದೊಳಗೆ ಈ ಅಪರಾಧಿಗಳ ಶಿಕ್ಷೆ ಜಾರಿಯಾಗಬಹುದು ಎನ್ನುವ ಸುದ್ದಿ ಹರಡಿದೆ.

Vijaya Karnataka 13 Dec 2019, 8:53 pm
ಲಖನೌ (ಉತ್ತರ ಪ್ರದೇಶ): ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್‌ ವಿಧಿಸಿರುವ ಗಲ್ಲು ಶಿಕ್ಷೆಯನ್ನು ಅನುಷ್ಠಾನಗೊಳಿಸಲು ಸಿದ್ಧ ಎಂದು ಉತ್ತರ ಪ್ರದೇಶದ ಮೀರತ್‌ ಜೈಲಿನ ಹ್ಯಾಂಗ್‌ ಮನ್‌ ಪವನ್‌ ಜಲ್ಲಾದ್‌ ತಿಳಿಸಿದ್ದಾರೆ.
Vijaya Karnataka Web ನಿರ್ಭಯಾ ಅಪರಾಧಿಗಳ ಗಲ್ಲು ಶಿಕ್ಷೆ ಜಾರಿಗೆ ನಾನು ರೆಡಿ! ಯುಪಿ ಹ್ಯಾಂಗ್‌ ಮನ್ ಘೋಷಣೆ


'ತಿಹಾರ್‌ ಜೈಲಿನ ಅಧಿಕಾರಿಗಳು ಒಪ್ಪುವುದಾದರೆ ಈಗ ನಾನು ಖುಷಿಯಿಂದ ನಿರ್ಭಯಾ ಹಂತಕರ ಗಲ್ಲು ಶಿಕ್ಷೆ ಜಾರಿ ಜವಾಬ್ದಾರಿಯನ್ನು ನಿಭಾಯಿಸಬಲ್ಲೆ' ಎಂದು 55 ವರ್ಷದ ಪವನ್‌ ತಿಳಿಸಿದ್ದಾರೆ. ಅವರ ತಂದೆ ಬಬ್ಬು ಜಲ್ಲಾದ್‌ ಮತ್ತು ತಾತ ಕಲ್ಲು ಜಲ್ಲಾದ್‌ ಕೂಡ ಹ್ಯಾಂಗ್‌ ಮನ್‌ ಆಗಿದ್ದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಪ್ರಕರಣದ ಇಬ್ಬರು ಅಪರಾಧಿಗಳನ್ನು ಪವನ್ ಅವರ ತಾತ ಕಲ್ಲು ಜಲ್ಲಾದ್‌ ಗಲ್ಲಿಗೇರಿಸಿದ್ದರು. ಆದ್ರೆ, ಪವನ್ ಜಲ್ಲಾದ್ ಅವರ ತಂದೆ ಬಬ್ಬು ಜಲ್ಲಾದ್‌ ತಮ್ಮ ಸೇವಾ ಅವಧಿಯಲ್ಲಿ ಯಾವುದೇ ಅಪರಾಧಿಯನ್ನು ಗಲ್ಲಿಗೇರಿಸಿಲ್ಲ. ಆದರೆ ಅವರು ತಮ್ಮ ತಂದೆ ಕಲ್ಲು ಜಲ್ಲಾದ್‌ ಜೊತೆ ಅಂತಹ ಹಲವು ಶಿಕ್ಷೆಗಳನ್ನು ಜಾರಿಗೊಳಿಸಲು ನೆರವಾಗಿದ್ದರು.

ನಿರ್ಭಯಾ ಪ್ರಕರಣ: ಡಿ. 17ಕ್ಕೆ ಅತ್ಯಾಚಾರಿಗಳ ಮರು ಪರಿಶೀಲನಾ ಅರ್ಜಿ ವಿಚಾರಣೆ

ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅತ್ಯಾಚಾರಿಗಳನ್ನು ಸದ್ಯ ದಿಲ್ಲಿಯ ತಿಹಾರ್‌ ಜೈಲಿನಲ್ಲಿ ಇಡಲಾಗಿದೆ. ವಾರದೊಳಗೆ ಈ ಅಪರಾಧಿಗಳ ಶಿಕ್ಷೆ ಜಾರಿಯಾಗಬಹುದು ಎನ್ನುವ ಸುದ್ದಿ ಹರಡಿದೆ. ಆದರೆ, ಗಲ್ಲು ಅನುಷ್ಠಾನಗೊಳಿಸುವ ಹ್ಯಾಂಗ್‌ಮ್ಯಾನ್‌ಗಳು ತಿಹಾರ್‌ ಜೈಲಿನಲ್ಲಿ ಇಲ್ಲ. ಈ ಕಾರಣಕ್ಕಾಗಿ ತಿಹಾರ್‌ ಜೈಲು ಅಧಿಕಾರಿಗಳು ಉತ್ತರ ಪ್ರದೇಶದ ಕಾರಾಗೃಹ ಎಡಿಜಿಪಿಗೆ ಪತ್ರ ಬರೆದು, ತಮ್ಮಲ್ಲಿರುವ ಇಬ್ಬರು ಹ್ಯಾಂಗ್‌ಮ್ಯಾನ್‌ಗಳ ಪೈಕಿ ಒಬ್ಬರನ್ನು ಒದಗಿಸುವಂತೆ ಕೋರಿದ್ದಾರೆ.

ವಾಯುಮಾಲಿನ್ಯವೇ ಜನರನ್ನು ಕೊಲ್ಲುತ್ತಿರುವಾಗ ನಮಗೇಕೆ ಗಲ್ಲು? ನಿರ್ಭಯಾ ರೆಪಿಸ್ಟ್‌ಗಳ ಪ್ರಶ್ನೆ!

ಉತ್ತರ ಪ್ರದೇಶದ ಲಖನೌ ಜೈಲಿನಲ್ಲಿರುವ ಒಬ್ಬ ಹ್ಯಾಂಗ್‌ ಮನ್‌ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ ಈಗ ಮೀರತ್‌ನ ಪವನ್‌ ಮಾತ್ರ ಆ ಕರ್ತವ್ಯ ನಿಭಾಯಿಸಲು ಫಿಟ್‌ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲಿಗೇರಿಸಲು ಸಿದ್ಧತೆ: ನೇಣು ಕುಣಿಕೆ ತಯಾರಿಸಲು ಆರ್ಡರ್‌, ತಿಹಾರ್‌ ಜೈಲಿಗೆ ಶಿಫ್ಟ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ