ಆಘಾತಕಾರಿ ಘಟನೆ: ಕ್ಯಾನ್ಸರ್ನಿಂದ ಮೃತಪಟ್ಟ ಗೆಳೆಯನ ಚಿತೆಗೆ ಹಾರಿ ತಾನೂ ಬಲಿಯಾದ ವ್ಯಕ್ತಿ
Man Jumps into Friend's Pyre in UP: ಜೀವದ ಗೆಳೆಯರು ಎಂದರೆ ಕೆಲವರು ನಿಜಕ್ಕೂ ಅವರಿಗಾಗಿ ತಮ್ಮ ಪ್ರಾಣ ಕಳೆದುಕೊಳ್ಳಲು ಸಿದ್ಧರಿರುತ್ತಾರೆ. ಗೆಳೆತನಕ್ಕಾಗಿ ಜೀವ ಕೊಟ್ಟ ಅನೇಕ ನಿದರ್ಶನಗಳು ಇತಿಹಾಸದಲ್ಲಿವೆ. ಆದರೆ ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ತನ್ನನ್ನು ಬಿಟ್ಟುಹೋದ ಬಾಲ್ಯದ ಸ್ನೇಹಿತನಿಂದ ದೂರ ಇರಲು ಸಾಧ್ಯವಾಗದೆ ವ್ಯಕ್ತಿಯೊಬ್ಬರು ಆತನ ಅಂತ್ಯಸಂಸ್ಕಾರದ ಚಿತೆಗೆ ಹಾರಿ ತಾವೂ ಜೀವ ಕಳೆದುಕೊಂಡಿದ್ದಾರೆ.
ಹೈಲೈಟ್ಸ್:
- ಉತ್ತರ ಪ್ರದೇಶದ ಫಿರೋಜಾಬಾದ್ನ ಯಮುನಾ ನದಿ ತೀರದಲ್ಲಿ ಶನಿವಾರ ಘಟನೆ
- ಕ್ಯಾನ್ಸರ್ನಿಂದ ಮೃತಪಟ್ಟಿದ್ದ 42 ವರ್ಷದ ವ್ಯಕ್ತಿಯ ಅಂತ್ಯಸಂಸ್ಕಾರದ ವೇಳೆ ನಡೆದ ದುರಂತ
- ಬೆಂಕಿಯಿಂದ ದಗದಗಿಸಿ ಉರಿಯುತ್ತಿದ್ದ ಗೆಳೆಯನ ಚಿತೆಗೆ ಹಾರಿ ಜೀವ ಕಳೆದುಕೊಂಡ ವ್ಯಕ್ತಿ
ಫಿರೋಜಾಬಾದ್: ಆಘಾತಕಾರಿ ಘಟನೆಯಲ್ಲಿ, ಆತ್ಮೀಯ ಗೆಳೆಯನ ಅಗಲಿಕೆ ನೋವನ್ನು ಸಹಿಸಲಾಗದೆ ವ್ಯಕ್ತಿಯೊಬ್ಬರು ಆತನ ಅಂತ್ಯಸಂಸ್ಕಾರದ ಚಿತೆಗೆ ಹಾರಿ ಜೀವ ತ್ಯಾಗ ಮಾಡಿದ್ದಾರೆ. ವಿಪರೀತ ಸುಟ್ಟ ಗಾಯಗಳಿಗೆ ಒಳಗಾಗಿದ್ದ ಅವರು ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಫಿರೋಜಾಬಾದ್ನ ಯಮುನಾ ನದಿ ತೀರದಲ್ಲಿ ಶನಿವಾರ ಈ ದಾರುಣ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಗ್ಲಾ ಖಂಗಾರ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿದ್ದ 42 ವರ್ಷದ ಅಶೋಕ್ ಅವರು ಸುದೀರ್ಘ ಸಮಯದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಅವರು ಕೊನೆಗೂ ಸೋತು ಶನಿವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದರು ಎಂದು ಸಿರ್ಸಾಗಂಜ್ ಸರ್ಕಲ್ ಆಫೀಸರ್ (ಸಿಒ) ಪ್ರವೀಣ್ ತಿವಾರಿ ಹೇಳಿದ್ದಾರೆ.
ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಅಶೋಕ್ ಅವರ ಅಂತ್ಯಸಂಸ್ಕಾರವು ಯಮುನಾ ನದಿ ತೀರದಲ್ಲಿ ನಡೆಸಲಾಗಿತ್ತು. ಅಲ್ಲಿ ನೆರೆದಿದ್ದ ಜನರಲ್ಲಿ, ಅಶೋಕ್ ಅವರ ಗೆಳೆಯ ಆನಂದ್ (40) ಕೂಡ ಇದ್ದರು. ಅಶೋಕ್ ಅಂತ್ಯಕ್ರಿಯೆಯ ಎಲ್ಲ ವಿಧಿ ವಿಧಾನಗಳನ್ನು ಅವರ ಕುಟುಂಬಸ್ಥರು ನೆರವೇರಿಸಿದ್ದರು. ಅವರ ಮೃತದೇಹ ಇರಿಸಿದ್ದ ಚಿತೆ ಜೋರಾಗಿ ಹೊತ್ತಿ ಉರಿಯುತ್ತಿತ್ತು. ಅಲ್ಲಿದ್ದ ಜನರೆಲ್ಲಾ ದುಃಖದ ನಡುವೆ ಒಬ್ಬೊಬ್ಬರಾಗಿ ಅಲ್ಲಿಂದ ನಿರ್ಗಮಿಸಲು ಆರಂಭಿಸಿದ್ದರು. ಆಗ ಇದ್ದಕ್ಕಿದ್ದಂತೆ ಆನಂದ್ ಅವರು ಉರಿಯುತ್ತಿದ್ದ ಚಿತೆಗೆ ಜಿಗಿದಿದ್ದಾರೆ ಎಂದು ಸಿಒ ತಿಳಿಸಿದ್ದಾರೆ.
ಸ್ಥಳದಲ್ಲಿದ್ದ ಜನರು ಕೂಡಲೇ ಚಿತೆಯಿಂದ ಆನಂದ್ ಅವರನ್ನು ಹೊರಗೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಶೇ 90ರಷ್ಟು ಚರ್ಮ ಸುಟ್ಟು ಹೋಗಿದ್ದರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದು ಸಾಧ್ಯವಿಲ್ಲ ಎಂದು ಆಗ್ರಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲು ವೈದ್ಯರು ಸಲಹೆ ನೀಡಿದ್ದರು. ಆದರೆ ಅವರನ್ನು ಆಗ್ರಾಕ್ಕೆ ಸಾಗಿಸುವ ಮಾರ್ಗಮಧ್ಯೆ, ಸುಟ್ಟ ಗಾಯಗಳಿಂದಾಗಿ ಮೃತಪಟ್ಟಿದ್ದಾರೆ ಎಂದು ತಿವಾರಿ ಹೇಳಿದ್ದಾರೆ.
ಸ್ನೇಹಿತನ ಸಾವಿನ ನೋವಿನಿಂದ ಅವರು ಚಿತೆಗೆ ಹಾರಿ ತಾವೂ ಆತನ ಜತೆ ಬೂದಿಯಾಗಲು ಬಯಸಿದ್ದರೇ, ಅಥವಾ ಅವರು ಬೇರೆ ಯಾವುದೇ ಸಮಸ್ಯೆ ಕಾರಣದಿಂದ ಆತ್ಮಹತ್ಯೆಗೆ ಮುಂದಾಗಿದ್ದರೇ ಎನ್ನುವುದು ಸ್ಪಷ್ಟವಾಗಿಲ್ಲ. ಇದು ಹಠಾತ್ ತೀರ್ಮಾನವಾಗಿರದೆ, ಅವರು ಮುಂಚೆಯೇ ಆತ್ಮಹತ್ಯೆಯ ಆಲೋಚನೆ ಮಾಡಿರುವ ಸಾಧ್ಯತೆಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಆನಂದ್ ಅವರ ಕೌಟುಂಬಿಕ ಸ್ಥಿತಿಗತಿ, ಅವರ ಹಿನ್ನೆಲೆಯನ್ನು ತಿಳಿದುಕೊಳ್ಳಲು ಅವರ ಕುಟುಂಬದವರನ್ನು ಸಂಪರ್ಕಿಸಲು ಪೊಲೀಸರು ಪ್ರಯತ್ನಿಸಿದ್ದಾರೆ.
ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಅಶೋಕ್ ಅವರ ಅಂತ್ಯಸಂಸ್ಕಾರವು ಯಮುನಾ ನದಿ ತೀರದಲ್ಲಿ ನಡೆಸಲಾಗಿತ್ತು. ಅಲ್ಲಿ ನೆರೆದಿದ್ದ ಜನರಲ್ಲಿ, ಅಶೋಕ್ ಅವರ ಗೆಳೆಯ ಆನಂದ್ (40) ಕೂಡ ಇದ್ದರು. ಅಶೋಕ್ ಅಂತ್ಯಕ್ರಿಯೆಯ ಎಲ್ಲ ವಿಧಿ ವಿಧಾನಗಳನ್ನು ಅವರ ಕುಟುಂಬಸ್ಥರು ನೆರವೇರಿಸಿದ್ದರು. ಅವರ ಮೃತದೇಹ ಇರಿಸಿದ್ದ ಚಿತೆ ಜೋರಾಗಿ ಹೊತ್ತಿ ಉರಿಯುತ್ತಿತ್ತು. ಅಲ್ಲಿದ್ದ ಜನರೆಲ್ಲಾ ದುಃಖದ ನಡುವೆ ಒಬ್ಬೊಬ್ಬರಾಗಿ ಅಲ್ಲಿಂದ ನಿರ್ಗಮಿಸಲು ಆರಂಭಿಸಿದ್ದರು. ಆಗ ಇದ್ದಕ್ಕಿದ್ದಂತೆ ಆನಂದ್ ಅವರು ಉರಿಯುತ್ತಿದ್ದ ಚಿತೆಗೆ ಜಿಗಿದಿದ್ದಾರೆ ಎಂದು ಸಿಒ ತಿಳಿಸಿದ್ದಾರೆ.
ಸ್ಥಳದಲ್ಲಿದ್ದ ಜನರು ಕೂಡಲೇ ಚಿತೆಯಿಂದ ಆನಂದ್ ಅವರನ್ನು ಹೊರಗೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಶೇ 90ರಷ್ಟು ಚರ್ಮ ಸುಟ್ಟು ಹೋಗಿದ್ದರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದು ಸಾಧ್ಯವಿಲ್ಲ ಎಂದು ಆಗ್ರಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲು ವೈದ್ಯರು ಸಲಹೆ ನೀಡಿದ್ದರು. ಆದರೆ ಅವರನ್ನು ಆಗ್ರಾಕ್ಕೆ ಸಾಗಿಸುವ ಮಾರ್ಗಮಧ್ಯೆ, ಸುಟ್ಟ ಗಾಯಗಳಿಂದಾಗಿ ಮೃತಪಟ್ಟಿದ್ದಾರೆ ಎಂದು ತಿವಾರಿ ಹೇಳಿದ್ದಾರೆ.
ಸ್ನೇಹಿತನ ಸಾವಿನ ನೋವಿನಿಂದ ಅವರು ಚಿತೆಗೆ ಹಾರಿ ತಾವೂ ಆತನ ಜತೆ ಬೂದಿಯಾಗಲು ಬಯಸಿದ್ದರೇ, ಅಥವಾ ಅವರು ಬೇರೆ ಯಾವುದೇ ಸಮಸ್ಯೆ ಕಾರಣದಿಂದ ಆತ್ಮಹತ್ಯೆಗೆ ಮುಂದಾಗಿದ್ದರೇ ಎನ್ನುವುದು ಸ್ಪಷ್ಟವಾಗಿಲ್ಲ. ಇದು ಹಠಾತ್ ತೀರ್ಮಾನವಾಗಿರದೆ, ಅವರು ಮುಂಚೆಯೇ ಆತ್ಮಹತ್ಯೆಯ ಆಲೋಚನೆ ಮಾಡಿರುವ ಸಾಧ್ಯತೆಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಆನಂದ್ ಅವರ ಕೌಟುಂಬಿಕ ಸ್ಥಿತಿಗತಿ, ಅವರ ಹಿನ್ನೆಲೆಯನ್ನು ತಿಳಿದುಕೊಳ್ಳಲು ಅವರ ಕುಟುಂಬದವರನ್ನು ಸಂಪರ್ಕಿಸಲು ಪೊಲೀಸರು ಪ್ರಯತ್ನಿಸಿದ್ದಾರೆ.