ಆ್ಯಪ್ನಗರ

ಸಾಮೂಹಿಕ ಅತ್ಯಾಚಾರ ಪ್ರಕರಣ ಬಿಜೆಪಿ ಶಾಸಕನಿಗೆ ಕ್ಲೀನ್‌ಚಿಟ್‌, ಸಂಬಂಧಿ ಬಂಧನ

ಸಾಕಷ್ಟು ಸಾಕ್ಷ್ಯಾಧಾರಗಳು ಲಭಿಸದ ಹಿನ್ನೆಲೆಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಭದೊಹಿ ಕ್ಷೇತ್ರದ ಬಿಜೆಪಿ ಶಾಸಕನಿಗೆ ಪೊಲೀಸರು ಕ್ಲೀನ್‌ಚಿಟ್‌ ನೀಡಿದ್ದಾರೆ.

Vijaya Karnataka Web 24 Feb 2020, 8:16 am
ಲಖನೌ: ಸಾಕಷ್ಟು ಸಾಕ್ಷ್ಯಾಧಾರಗಳು ಲಭಿಸದ ಹಿನ್ನೆಲೆಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಭದೊಹಿ ಕ್ಷೇತ್ರದ ಬಿಜೆಪಿ ಶಾಸಕ ರವೀಂದ್ರನಾಥ್‌ ತ್ರಿಪಾಠಿ ಅವರಿಗೆ ಉತ್ತರ ಪ್ರದೇಶ ಪೊಲೀಸರು ಕ್ಲೀನ್‌ಚಿಟ್‌ ನೀಡಿದ್ದಾರೆ.
Vijaya Karnataka Web Ravindranath


ಆದರೆ ತ್ರಿಪಾಠಿ ಅವರ ಸೋದರ ಸಂಬಂಧಿ ಹಾಗೂ ಪ್ರಕರಣದ ಮತ್ತೊಬ್ಬ ಆರೋಪಿ ಸಂದೀಪ್‌ ತ್ರಿಪಾಠಿಯನ್ನು ಬಂಧಿಸಿದ್ದಾರೆ. ಜತೆಗೆ ಶಾಸಕರ ಪುತ್ರ ನಿತೇಶ್‌ ವಿರುದ್ಧ ಐಪಿಸಿ ಸೆಕ್ಷನ್‌ 504(ಉದ್ದೇಶಪೂರ್ವಕ ಅವಮಾನ) ಮತ್ತು 506 ( ಅಪರಾಧ ಉದ್ದೇಶ) ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವಾರಾಣಸಿಯ 35 ವರ್ಷದ ಮಹಿಳೆಯೊಬ್ಬರು ಶಾಸಕ ಹಾಗೂ ಅವರ ಐವರು ಪುತ್ರರು ಮತ್ತು ಸೋದರ ಸಂಬಂಧಿ ವಿರುದ್ಧ ಸಾಮೂಹಿಕ ಅತ್ಯಾಚಾರದ ಆರೋಪ ಹೊರಿಸಿ ಫೆ.20ರಂದು ದೂರು ಸಲ್ಲಿಸಿದ್ದರು. ಈ ಸಂಬಂಧ ಪೊಲೀಸರು ಎಫ್‌ಐಆರ್‌ ಕೂಡ ದಾಖಲಿಸಿದ್ದರು.

2017ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ವೇಳೆ ಸಂದೀಪ್‌ ತನ್ನನ್ನು ಭದೊಹಿಗೆ ಕರೆಸಿಕೊಂಡು ಹೋಟೆಲ್‌ವೊಂದರಲ್ಲಿಇರಿಸಿದ್ದ. ಆತನೊಂದಿಗೆ ಮೂರು ವರ್ಷಗಳ ಗೆಳೆತನ ಹೊಂದಿದ್ದ ಕಾರಣ ವಿಶ್ವಾಸವಿಟ್ಟು ತಾನು ಹೋಟೆಲ್‌ನಲ್ಲಿ ಉಳಿದಿದ್ದೆ. ಆದರೆ ಸಂದೀಪ್‌ ಇದರ ಲಾಭ ಪಡೆದು ಶಾಸಕ ಮತ್ತು ಆತನ ಪುತ್ರರನ್ನು ಹೋಟೆಲ್‌ಗೆ ಕರೆತಂದು ಅತ್ಯಾಚಾರಕ್ಕೆ ಪ್ರಚೋದಿಸಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ