ಆ್ಯಪ್ನಗರ

ಶಿವನ ಅವತಾರವಾಗಿದ್ದರೆ ರಾಹುಲ್‌ ವಿಷ ಕುಡಿಯಲಿ: ಬಿಜೆಪಿ ಸಚಿವ

ರಾಹುಲ್ ಶಿವನ ಅವತಾರ ಎನ್ನುವುದಾದರೆ, ಅವರಿಗೆ ವಿಷ ಹಾಕಬೇಕು. ವಿಷ ಕುಡಿದ ಬಳಿಕವೂ ಬದುಕುಳಿದರೆ ಅವರು ಶಿವನ ಅವತಾರವೆಂದು ಎಲ್ಲರೂ ನಂಬಬಹುದು ಎಂದವರು ವ್ಯಂಗ್ಯವಾಡಿದ್ದಾರೆ.

TIMESOFINDIA.COM 26 Mar 2019, 2:17 pm
ಅಹಮದಾಬಾದ್: ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಶಿವನ ಅವತಾರ ಎಂದು ಬಣ್ಣಿಸಿದ್ದ ಕೈ ಕಾರ್ಯಕರ್ತರಿಗೆ ಗುಜರಾತ್ ಸಚಿವ ಗಣಪತ್ ವಾಸವಾ, ಪೌರಾಣಿಕ ಕಥೆಯನ್ನು ಆಧಾರವಾಗಿಟ್ಟುಕೊಂಡು ಟಾಂಗ್ ನೀಡಿದ್ದಾರೆ.
Vijaya Karnataka Web Rahul 1200


ರಾಹುಲ್ ಶಿವನ ಅವತಾರ ಎನ್ನುವುದಾದರೆ, ಅವರಿಗೆ ವಿಷ ಹಾಕಬೇಕು. ವಿಷ ಕುಡಿದ ಬಳಿಕವೂ ಬದುಕುಳಿದರೆ ಅವರು ಶಿವನ ಅವತಾರವೆಂದು ಎಲ್ಲರೂ ನಂಬಬಹುದು ಎಂದವರು ವ್ಯಂಗ್ಯವಾಡಿದ್ದಾರೆ.

ಸೋಮವಾರ ಬದ್ರೋಲಿಯಲ್ಲಿ ವಿಜಯ ಸಂಕಲ್ಪ ಸಮ್ಮೇಲನದಲ್ಲಿ ಸೇರಿದ್ದ 5ಸಾವಿರಕ್ಕಿಂತ ಹೆಚ್ಚು ಜನರನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರು ಇತ್ತೀಚಿಗೆ ರಾಹುಲ್ ಗಾಂಧಿಯನ್ನು ಶಿವನವತಾರ ಎಂದು ಬಣ್ಣಿಸಿದ್ದರು. ಜನರನ್ನು ಉಳಿಸಲು ಶಿವದೇವರು ವಿಷವನ್ನು ಕುಡಿದಿದ್ದರು. ನಿಮ್ಮ ನಾಯಕನಿಗೂ 500 ಗ್ರಾಂ ವಿಷ ನೀಡಿ. ಬದುಕುಳಿದರೆ ಅವರು ಸಾಕ್ಷಾತ್ ಶಿವನವತಾರ ಎಂದು ನಾವು ನಂಬುತ್ತೇವೆ ಎಂದು ವಾಸವಾ ಹೇಳಿದ್ದಾರೆ. ಈ ಸಭೆಯಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಉಪಸ್ಥಿತರಿದ್ದರು.

ಈ ಕುರಿತು ಮಾಧ್ಯಮಗಳು ಕೇಳಿದಕ್ಕೆ ಪ್ರತಿಕ್ರಿಯಿಸಿದ ಅವರು, ಅವರು ಏರ್ ಸ್ಟ್ರೈಕ್ ಸಾಕ್ಷ್ಯ ಕೇಳುತ್ತಾರೆ. ಹಾಗೆ ನಾವು ಕೂಡ ರಾಹುಲ್ ಶಿವ ಎನ್ನುವುದಕ್ಕೆ ಸಾಕ್ಷ್ಯ ಕೇಳಬಹುದಲ್ಲ ಎಂದುತ್ತರಿಸಿದ್ದಾರೆ.

ಸಚಿವನ ಈ ಹೇಳಿಕೆಗೆ ಕಿಡಿಕಾರಿರುವ ಕಾಂಗ್ರೆಸ್ ವಕ್ತಾರ ಮನೀಶ್ ದೋಶಿ, ಇಂತಹ ಹೇಳಿಕೆಗಳು ಬಿಜೆಪಿ ಮತ್ತವರ ನಾಯಕರು ಎಂತಹ ಮನಸ್ಥಿತಿಯವರೆಂದು ತೋರಿಸಿಕೊಡುತ್ತದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲುವುದು ನಿಶ್ಚಿತವಾದ್ದರಿಂದ ಹತಾಶೆಗೊಳಗಾಗಿರುವ ಅವರು ಇಂತಹ ಮಾತುಗಳನ್ನಾಡುತ್ತಿದ್ದಾರೆ ಎಂದಿದ್ದಾರೆ.

ಸುರರು ಮತ್ತು ಅಸುರರು ಸಮುದ್ರ ಮಥನ ಮಾಡುವಾಗ ಹಾಲಾಹಲವೆಂಬ ವಿಷ ಉತ್ಪನ್ನವಾಗಿತ್ತು. ಅದು ಜಗಕ್ಕೆ ಕಂಟಕವಾಗುತ್ತದೆ ಎಂದು ಶಿವನೇ ಅದನ್ನು ಕುಡಿದು ಕಂಠದಲ್ಲಿ ಇಟ್ಟುಕೊಂಡು ವಿಷಕಂಠ, ನೀಲಕಂಠ ಎನ್ನಿಸಿಕೊಂಡ ಎಂದು ಪುರಾಣದಲ್ಲಿ ಹೇಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ