ಆ್ಯಪ್ನಗರ

ವಾಯು ಚಂಡಮಾರುತ ದುರ್ಬಲ

ಭೂ ಪ್ರದೇಶದಿಂದ ದೂರ ಸಾಗಿದ್ದ ವಾಯು ಚಂಡಮಾರುತ ಮತ್ತೇ ಪಥ ಬದಲಿಸಿ ಗುಜರಾತ್‌ ಕರಾವಳಿಯತ್ತ ಧಾವಿಸಿದೆಯಾದರೂ ಅದು ದುರ್ಬಲಗೊಂಡಿದೆ.

PTI 16 Jun 2019, 5:00 am
ಹೊಸದಿಲ್ಲಿ: ಭೂ ಪ್ರದೇಶದಿಂದ ದೂರ ಸಾಗಿದ್ದ ವಾಯು ಚಂಡಮಾರುತ ಮತ್ತೇ ಪಥ ಬದಲಿಸಿ ಗುಜರಾತ್‌ ಕರಾವಳಿತ್ತ ಧಾವಿಸಿದೆ. ಆದರೆ, ಅದು ಉತ್ತರ ಗುಜರಾತ್‌ ತೀರ ಪ್ರವೇಶಿಸುವ ವೇಳೆಗೆ ದುರ್ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
Vijaya Karnataka Web cyclone-vayu


ಜೂನ್‌ 17ರಂದು ಸಂಜೆ ವೇಳೆಗೆ ಚಂಡಮಾರುತ ಗುಜರಾತ್‌ ತೀರ ತಲುಪಲಿದೆ. ಆದರೆ ಅಷ್ಟರಲ್ಲಿ ಅದು ಭಾರಿ ವಾಯುಭಾರ ಕುಸಿತವಾಗಿ ಮಾರ್ಪಡಲಿದೆ. ಇದರಿಂದ ಗುಜರಾತ್‌ ತೀರ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

ಶರವೇಗದಲ್ಲಿ ಧಾವಿಸುತ್ತಿದ್ದ ವಾಯು ಚಂಡ ಮಾರುತ ಜೂನ್‌ 13ರಂದು ಗುಜರಾತ್‌ ತೀರಕ್ಕೆ ಅಪ್ಪಳಿಸಬೇಕಿತ್ತು. ಚಂಡಮಾರುತ ಎದುರಿಸಲು ಗುಜರಾತ್‌ ಸರಕಾರ ಸಕಲ ಸಿದ್ಧತೆ ಕೈಗೊಂಡಿತ್ತು. ಆದರೆ ಅಷ್ಟರಲ್ಲಿ ಅದು ಪಥ ಬದಲಿಸಿ ಭೂ ಪ್ರದೇಶದಿಂದ ದೂರವಾಗಿ ಆಳ ಸಮುದ್ರದತ್ತ ಸಾಗಿತ್ತು. ಮೂರು ದಿನಗಳ ಬಳಿಕ ಅದು ಮತ್ತೆ ಭೂಭಾಗದತ್ತ ಹೊರಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ