ವೀರ ಸಾವರ್ಕರ್, ಶ್ಯಾಮ್ ಪ್ರಸಾದ್ ಮುಖರ್ಜಿಗೆ ಭಾರತರತ್ನ..? ಹಿಂದೂ ಮಹಾಸಭಾ ವಿಶ್ವಾಸ
ಸಾವರ್ಕರ್ ಅವರು 1937-42ರ ಅವಧಿಯಲ್ಲಿ ಹಾಗೂ ಶ್ಯಾಮ್ಪ್ರಸಾದ್ ಮುಖರ್ಜಿ ಅವರು 1943-44ರಲ್ಲಿ ಮಹಾಸಭಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ವೀರ ಸಾವರ್ಕರ್ ಹಾಗೂ ಡಾ.ಶ್ಯಾಮ್ಪ್ರಸಾದ್ ಮುಖರ್ಜಿ ಅವರಿಗೆ ಭಾರತ ರತ್ನ ಸಿಕ್ಕೇಸಿಗುತ್ತೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ವಿಶ್ವಾಸದಲ್ಲಿದೆ.
Vijaya Karnataka 13 Jan 2020, 8:24 pm
ಹೊಸ ದಿಲ್ಲಿ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಮತ್ತು ಜನಸಂಘದ ಸ್ಥಾಪಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ಕೇಂದ್ರ ಸರಕಾರ ಭಾರತ ರತ್ನ ಪುರಸ್ಕಾರ ನೀಡುವ ಸಾಧ್ಯತೆ ಇದೆ. ಗಣರಾಜ್ಯೋತ್ಸವ ದಿನದಂದು ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ ಎನ್ನಲಾಗಿದೆ.
ವೀರ ಸಾವರ್ಕರ್ ಹಾಗೂ ಡಾ.ಶ್ಯಾಮ್ಪ್ರಸಾದ್ ಮುಖರ್ಜಿ ಅವರಿಗೆ ಭಾರತ ರತ್ನ ಸಿಕ್ಕೇಸಿಗುತ್ತೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಈ ಇಬ್ಬರೂ ಶ್ರೇಷ್ಠ ವಿದ್ವಾಂಸರು ಮಾತ್ರವಲ್ಲ ಶ್ರೇಷ್ಠ ದೇಶಭಕ್ತರು ಕೂಡ. ಇಬ್ಬರೂ ಭಾರತರತ್ನ ಗೌರವಕ್ಕೆ ಅರ್ಹರು’ ಎಂದು ಚಕ್ರಪಾಣಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
‘ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಾವರ್ಕರ್, ಮುಖರ್ಜಿ ಇಬ್ಬರಿಗೂ ಭಾರತರತ್ನ ಪುರಸ್ಕಾರ ನೀಡಿ ಗೌರವಿಸಲಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ 2019ರ ಲೋಕಸಭೆ ಚುನಾವಣೆ ವೇಳೆ ಭರವಸೆ ನೀಡಿದ್ದರು. ಹೀಗಾಗಿ ಗಣರಾಜ್ಯೋತ್ಸವದ ದಿನ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ’ ಎಂದು ಚಕ್ರಪಾಣಿ ತಿಳಿಸಿದ್ದಾರೆ.
ಸಾವರ್ಕರ್ಗೆ ಭಾರತ ರತ್ನ ಕೊಡುವುದಾದರೆ ಗೋಡ್ಸೆಗೇಕೆ ಕೊಡಬಾರದು: ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ವ್ಯಂಗ್ಯ
ವೀರ ಸಾವರ್ಕರ್ ಹಾಗೂ ಡಾ.ಶ್ಯಾಮ್ಪ್ರಸಾದ್ ಮುಖರ್ಜಿ ಅವರಿಗೆ ಭಾರತ ರತ್ನ ನೀಡುವಂತೆ ಹಲವು ಬಾರಿ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದ ಸ್ವಾಮಿ ಚಕ್ರಪಾಣಿ, ಈ ಸಂಬಂಧ ಸೋಮವಾರ ಸಹ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಸಾವರ್ಕರ್ ಅವರು 1937-42ರ ಅವಧಿಯಲ್ಲಿ ಹಾಗೂ ಶ್ಯಾಮ್ಪ್ರಸಾದ್ ಮುಖರ್ಜಿ ಅವರು 1943-44ರಲ್ಲಿ ಮಹಾಸಭಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ವೀರ್ ಸಾವರ್ಕರ್ ಪ್ರಧಾನಿಯಾಗಿದ್ದರೆ, ಪಾಕಿಸ್ತಾನ ಉದಯಿಸುತ್ತಿರಲಿಲ್ಲ: ಉದ್ದವ್ ಠಾಕ್ರೆ
ವೀರ ಸಾವರ್ಕರ್ ಹಾಗೂ ಡಾ.ಶ್ಯಾಮ್ಪ್ರಸಾದ್ ಮುಖರ್ಜಿ ಅವರಿಗೆ ಭಾರತ ರತ್ನ ಸಿಕ್ಕೇಸಿಗುತ್ತೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಈ ಇಬ್ಬರೂ ಶ್ರೇಷ್ಠ ವಿದ್ವಾಂಸರು ಮಾತ್ರವಲ್ಲ ಶ್ರೇಷ್ಠ ದೇಶಭಕ್ತರು ಕೂಡ. ಇಬ್ಬರೂ ಭಾರತರತ್ನ ಗೌರವಕ್ಕೆ ಅರ್ಹರು’ ಎಂದು ಚಕ್ರಪಾಣಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
‘ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಾವರ್ಕರ್, ಮುಖರ್ಜಿ ಇಬ್ಬರಿಗೂ ಭಾರತರತ್ನ ಪುರಸ್ಕಾರ ನೀಡಿ ಗೌರವಿಸಲಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ 2019ರ ಲೋಕಸಭೆ ಚುನಾವಣೆ ವೇಳೆ ಭರವಸೆ ನೀಡಿದ್ದರು. ಹೀಗಾಗಿ ಗಣರಾಜ್ಯೋತ್ಸವದ ದಿನ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ’ ಎಂದು ಚಕ್ರಪಾಣಿ ತಿಳಿಸಿದ್ದಾರೆ.
ಸಾವರ್ಕರ್ಗೆ ಭಾರತ ರತ್ನ ಕೊಡುವುದಾದರೆ ಗೋಡ್ಸೆಗೇಕೆ ಕೊಡಬಾರದು: ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ವ್ಯಂಗ್ಯ
ವೀರ ಸಾವರ್ಕರ್ ಹಾಗೂ ಡಾ.ಶ್ಯಾಮ್ಪ್ರಸಾದ್ ಮುಖರ್ಜಿ ಅವರಿಗೆ ಭಾರತ ರತ್ನ ನೀಡುವಂತೆ ಹಲವು ಬಾರಿ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದ ಸ್ವಾಮಿ ಚಕ್ರಪಾಣಿ, ಈ ಸಂಬಂಧ ಸೋಮವಾರ ಸಹ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಸಾವರ್ಕರ್ ಅವರು 1937-42ರ ಅವಧಿಯಲ್ಲಿ ಹಾಗೂ ಶ್ಯಾಮ್ಪ್ರಸಾದ್ ಮುಖರ್ಜಿ ಅವರು 1943-44ರಲ್ಲಿ ಮಹಾಸಭಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ವೀರ್ ಸಾವರ್ಕರ್ ಪ್ರಧಾನಿಯಾಗಿದ್ದರೆ, ಪಾಕಿಸ್ತಾನ ಉದಯಿಸುತ್ತಿರಲಿಲ್ಲ: ಉದ್ದವ್ ಠಾಕ್ರೆ