ಆ್ಯಪ್ನಗರ

ವಂದೇ ಮಾತರಂ ಎನ್ನದೇ ಅಫ್ಜಲ್ ಗುರುವನ್ನು ಜಪಿಸುತ್ತೀರಾ?: ಮೇಯರ್‌ಗೆ ವೆಂಕಯ್ಯ ನಾಯ್ಡು ತರಾಟೆ

ತಾಯ್ತಾಡನ್ನು ಗೌರವಿಸದೇ, ಭಯೋತ್ಪಾದಕ ಅಫ್ಜಲ್ ಗುರುವನ್ನು ಗೌರವಿಸುತ್ತೀರಾ? ಎಂದ ಉಪರಾಷ್ಟ್ರಪತಿ

Vijaya Karnataka Web 8 Dec 2017, 12:15 pm
ಹೊಸದಿಲ್ಲಿ: ಮೀರತ್‌ನ ನೂತನ ಮೇಯರ್ ಆಗಿ ಆಧಿಕಾರವಹಿಸಿಕೊಂಡ ಬಳಿಕ ಬಿಎಸ್‌ಪಿಯ ಸುನೀತಾ ವರ್ಮ ಅವರು ಮಹಾನಗರ ಪಾಲಿಕೆಯ ಮಂಡಳಿ ಸಭೆಯಲ್ಲಿ ವಂದೇ ಮಾತರಂ ಗೀತೆ ಹಾಡಬೇಕೆಂದು ಕಡ್ಡಾಯಗೊಳಿಸಿರುವ ಬಿಜೆಪಿಯ ಮಾಜಿ ಮೇಯರ್ ಆದೇಶವನ್ನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ ತಾಯಿ ನಾಡನ್ನು ಗೌರವಿಸದೇ, ಭಯೋತ್ಪಾದಕ ಅಫ್ಜಲ್ ಗುರುವನ್ನು ಗೌರವಿಸುತ್ತೀರಾ? ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತೀಕ್ಷವಾಗಿ ಪ್ರಶ್ನಿಸಿದ್ದಾರೆ.
Vijaya Karnataka Web venkaiah naidu on vande mataram row if not mother will you salute afzal guru
ವಂದೇ ಮಾತರಂ ಎನ್ನದೇ ಅಫ್ಜಲ್ ಗುರುವನ್ನು ಜಪಿಸುತ್ತೀರಾ?: ಮೇಯರ್‌ಗೆ ವೆಂಕಯ್ಯ ನಾಯ್ಡು ತರಾಟೆ


ಕೆಲವು ಜನರು 'ವಂದೇ ಮಾತರಂ' ಗೀತೆ ಹಾಡಲು ನಿರಾಕರಿಸುತ್ತಿರುವ ಕಾರಣಕ್ಕೆ ಆಶ್ಚರ್ಯ ವ್ಯಕ್ತಪಡಿಸಿರುವ ಉಪರಾಷ್ಟ್ರಪತಿ ಅವರು, ಘೋಷಣೆಯ ಮೂಲಕ ಮಾತೃಭೂಮಿಗೆ ವಂದನೆ ಸಲ್ಲಿಸಿದರು.

'ವಂದೇ ಮಾತರಂ' ಎಂದರೇ ಹೆತ್ತ ತಾಯಿಗೆ ವಂದನೆ ಎಂದರ್ಥ. ತಾಯಿಗೆ ವಂದನೆ ಸಲ್ಲಿಸಲು ನಿಮಗೇನು ಸಮಸ್ಯೆ?....ತಾಯಿಗೆ ವಂದನೆ ಸಲ್ಲಿಸದಿದ್ದರೆ, ಮತ್ಯಾರಿಗೆ ಗೌರವ ಸಲ್ಲಿಸುತ್ತೀರಾ?... ಸಂಸತ್ ಮೇಲಿನ ದಾಳಿಕೋರ ಅಫ್ಜಲ್ ಗುರುವಿಗೆ ಗೌರವ ಸಲ್ಲಿಸುತ್ತೀರಾ? ಎಂದು ವೆಂಕಯ್ಯ ನಾಯ್ಡು ತಮ್ಮದೇ ಶೈಲಿಯಲ್ಲಿ ಟೀಕಿಸಿದರು.

ಹೊಸದಿಲ್ಲಿಯಲ್ಲಿ ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಾಲ್ ಅವರ ಪುಸ್ತಕ ಬಿಡುಗಡೆ ಮಾಡುವ ಸಂದರ್ಭದಲ್ಲಿ ಅವರು ಮಾತನಾಡಿದರು.

'ಭಾರತ್ ಮಾತಾ ಕೀ ಜೈ ಎನ್ನುವುದು ಕೇವಲ ಒಂದು ಫೋಟೋಗೆ ಸೀಮಿತವಲ್ಲ. ಮಾತೃಭೂಮಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಧರ್ಮ, ಜಾತಿ, ಮತ್ತು ಬಣ್ಣದ ಹೊರತಾಗಿಯೂ ದೇಶದ ಸುಮಾರು 130 ಕೋಟಿ ಜನರು ದೇಶವನ್ನು ಗೌರವಿಸಬೇಕು' ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.

ಹಿಂದುತ್ವ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯ ಎಂದು ಒತ್ತಿ ಹೇಳಿದ ನಾಯ್ಡು, ಕೆಲವರು ಹಿಂದುತ್ವಕ್ಕೆ ಬೇರೆಯೇ ಅರ್ಥ ನೀಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ