ಗೋ ರಕ್ಷಕರಿಗೆ ಐಡಿ ಕಾರ್ಡ್
ಗೋ ರಕ್ಷಣೆಗೆ ತೊಡಗಿಸಿಕೊಂಡಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದ ಸದಸ್ಯರಿಗೆ ಮುಂದಿನ ದಿನಗಳಿಂದ ಐಡಿ ಕಾರ್ಡ್ ನೀಡಲಾಗುವುದು ಎಂದು ಸಂಘಟನೆ ಹೇಳಿಕೊಂಡಿದೆ.
Mumbai Mirror 11 Aug 2017, 5:11 pm
ಮುಂಬಯಿ: ಗೋ ರಕ್ಷಣೆಗೆ ತೊಡಗಿಸಿಕೊಂಡಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದ ಸದಸ್ಯರಿಗೆ ಮುಂದಿನ ದಿನಗಳಿಂದ ಐಡಿ ಕಾರ್ಡ್ ನೀಡಲಾಗುವುದು ಎಂದು ಸಂಘಟನೆ ಹೇಳಿಕೊಂಡಿದೆ.
ಕೆಲ ದುಷ್ಕರ್ಮಿಗಳು ಗೋ ರಕ್ಷಣೆಯ ಹೆಸರಿನಲ್ಲಿ ನಮ್ಮ ಸಂಘಟನೆ ಹೆಸರು, ನಮ್ಮ ಭಾವುಟ, ಹಾಗೂ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿ ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ. ಹೀಗಾಗಿ ಎಲ್ಲರೂ ಹಿಂದೂ ಪರಿಷತ್ ಕಂಡರೆ ಕಿಡಿಕಾರುತ್ತಿದ್ದಾರೆ. ಹೀಗಾಗಿ ನಮ್ಮ ಕಾರ್ಯಕರ್ತರಿಗೆ ಐಡಿ ಕಾರ್ಡ್ ನೀಡುತ್ತೇವೆ ಈ ಮೂಲಕ ತಪ್ಪಿತಸ್ಥರು ನಮ್ಮವರೇ ಇಲ್ಲವೇ ಎಂದು ಎಲ್ಲರಿಗೂ ತಿಳಿಯುತ್ತದೆ ಎಂದು ವಿಹೆಚ್ಪಿ ಉಪಾಧ್ಯಕ್ಷ ಹೇಮಂತ್ ಜಂಬೇಕರ್ ಮುಂಬಯಿ ಮಿರರ್ಗೆ ತಿಳಿಸಿದ್ದಾರೆ.
ಗೋ ರಕ್ಷಣೆಯಲ್ಲಿ ತೊಡಗಿರುವ ನಮ್ಮ ಕಾರ್ಯಕರ್ತರ ಸಂಪುರ್ಣ ಮಾಹಿತಿಯನ್ನು ಕಲೆಹಾಕಿ ಅವರಿಗೆ ಐಡಿ ಕಾರ್ಡ್ ನೀಡುತ್ತೇವೆ. ಬಳಿಕ ನಮ್ಮ ಕಾರ್ಯಕರ್ತರ ಮಾಹಿತಿಯನ್ನು ಪೊಲೀಸರಿಗೂ ನೀಡುತ್ತೇವೆ. ಒಂದು ವೇಳೆ ಗೋ ರಕ್ಷಣೆ ಹೆಸರಿನಲ್ಲಿ ಕಾರ್ಯಕರ್ತರನ್ನು ಬಿಟ್ಟರೆ ಬೇರೆ ಯಾರಾದರೂ ಕಾನೂನನ್ನು ಉಲ್ಲಂಘಿಸಿ ಹಿಂಸೆ ನಡೆಸಿರದರೆ ನಮ್ಮ ಮೇಲೆ ಆರೋಪ ಹೊರಿಸಬಾರದು ಎಂಬ ಉದ್ಧೇಶದಿಂದ ಈ ರೀತಿ ಮಾಡುವುದಾಗಿ ಜಂಬೇಕರ್ ತಿಳಿಸಿದ್ದಾರೆ.
ಇದೇ ಜುಲೈನಲ್ಲಿ ನಾಗ್ಪುರ್ ಜಿಲ್ಲೆಯಲ್ಲಿ ಸಲಿಮ್ ಶೇಖ್ ಎಂಬವರ ಮೇಲೆ ಅಕ್ರಮ ಗೋ ಸಾಗಾಟ ಆರೋಪದಡಿ ಕೆಲ ಯುವಕರು ಹಲ್ಲೆ ನಡೆಸಿದ್ದರು. ಮೊದಲಿಗೆ ಈ ಯುವಕರು ಭಜರಂಗ ದಳ ಕಾರ್ಯಕರ್ತರು ಎಂದು ಹೇಳಲಾಗಿತ್ತು. ಈ ಸುದ್ದಿ ರಾಷ್ಟ್ರಾಧ್ಯಂತ ಹೊಸ ಸಂಚಲನವನ್ನೇ ಮೂಡಿಸಿತ್ತು. ಆದರೆ ತನಿಖೆ ವೇಳೆ ಈ ಕೃತ್ಯ ಎಸಗಿರುವುದು ಎಂಎಲ್ಎ ಬಚ್ಚು ಕಾಡು ಅವರ ಪ್ರಹಾರ್ ಸಂಘಟನೆ ಯುವಕರು ಎಂಬ ವಿಷಯ ಬಯಲಾಗಿತ್ತು.
ಈ ಎಲ್ಲಾ ಬೆಳವಣಿಗೆ ಬಳಿಕ ವಿಹೆಚ್ಪಿ ನೂತನ ಕ್ರಮಕ್ಕೆ ಎದುರಾಗಿದ್ದು, ನಮ್ಮ ಯುವಕರು ಕಾನೂನನ್ನು ಕೈಗೆತ್ತೊಕೊಳ್ಳುವುದಿಲ್ಲ, ಆದರೂ ಬೇರೆಯವರ ತಪ್ಪಿಗೆ ನಮ್ಮ ಸಂಘಟನೆಯನ್ನು ಗುರಿ ಮಾಡಲಾಗುತ್ತದೆ. ಹೀಗಾಗಿ ನೂತನ ಕ್ರಮ ಅನುಸರಿಸುತ್ತಿದ್ದೇವೆ ಎಂದು ಜಂಬೇಕರ್ ತಿಳಸಿದ್ದಾರೆ,
ಕೆಲ ದುಷ್ಕರ್ಮಿಗಳು ಗೋ ರಕ್ಷಣೆಯ ಹೆಸರಿನಲ್ಲಿ ನಮ್ಮ ಸಂಘಟನೆ ಹೆಸರು, ನಮ್ಮ ಭಾವುಟ, ಹಾಗೂ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿ ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ. ಹೀಗಾಗಿ ಎಲ್ಲರೂ ಹಿಂದೂ ಪರಿಷತ್ ಕಂಡರೆ ಕಿಡಿಕಾರುತ್ತಿದ್ದಾರೆ. ಹೀಗಾಗಿ ನಮ್ಮ ಕಾರ್ಯಕರ್ತರಿಗೆ ಐಡಿ ಕಾರ್ಡ್ ನೀಡುತ್ತೇವೆ ಈ ಮೂಲಕ ತಪ್ಪಿತಸ್ಥರು ನಮ್ಮವರೇ ಇಲ್ಲವೇ ಎಂದು ಎಲ್ಲರಿಗೂ ತಿಳಿಯುತ್ತದೆ ಎಂದು ವಿಹೆಚ್ಪಿ ಉಪಾಧ್ಯಕ್ಷ ಹೇಮಂತ್ ಜಂಬೇಕರ್ ಮುಂಬಯಿ ಮಿರರ್ಗೆ ತಿಳಿಸಿದ್ದಾರೆ.
ಗೋ ರಕ್ಷಣೆಯಲ್ಲಿ ತೊಡಗಿರುವ ನಮ್ಮ ಕಾರ್ಯಕರ್ತರ ಸಂಪುರ್ಣ ಮಾಹಿತಿಯನ್ನು ಕಲೆಹಾಕಿ ಅವರಿಗೆ ಐಡಿ ಕಾರ್ಡ್ ನೀಡುತ್ತೇವೆ. ಬಳಿಕ ನಮ್ಮ ಕಾರ್ಯಕರ್ತರ ಮಾಹಿತಿಯನ್ನು ಪೊಲೀಸರಿಗೂ ನೀಡುತ್ತೇವೆ. ಒಂದು ವೇಳೆ ಗೋ ರಕ್ಷಣೆ ಹೆಸರಿನಲ್ಲಿ ಕಾರ್ಯಕರ್ತರನ್ನು ಬಿಟ್ಟರೆ ಬೇರೆ ಯಾರಾದರೂ ಕಾನೂನನ್ನು ಉಲ್ಲಂಘಿಸಿ ಹಿಂಸೆ ನಡೆಸಿರದರೆ ನಮ್ಮ ಮೇಲೆ ಆರೋಪ ಹೊರಿಸಬಾರದು ಎಂಬ ಉದ್ಧೇಶದಿಂದ ಈ ರೀತಿ ಮಾಡುವುದಾಗಿ ಜಂಬೇಕರ್ ತಿಳಿಸಿದ್ದಾರೆ.
ಇದೇ ಜುಲೈನಲ್ಲಿ ನಾಗ್ಪುರ್ ಜಿಲ್ಲೆಯಲ್ಲಿ ಸಲಿಮ್ ಶೇಖ್ ಎಂಬವರ ಮೇಲೆ ಅಕ್ರಮ ಗೋ ಸಾಗಾಟ ಆರೋಪದಡಿ ಕೆಲ ಯುವಕರು ಹಲ್ಲೆ ನಡೆಸಿದ್ದರು. ಮೊದಲಿಗೆ ಈ ಯುವಕರು ಭಜರಂಗ ದಳ ಕಾರ್ಯಕರ್ತರು ಎಂದು ಹೇಳಲಾಗಿತ್ತು. ಈ ಸುದ್ದಿ ರಾಷ್ಟ್ರಾಧ್ಯಂತ ಹೊಸ ಸಂಚಲನವನ್ನೇ ಮೂಡಿಸಿತ್ತು. ಆದರೆ ತನಿಖೆ ವೇಳೆ ಈ ಕೃತ್ಯ ಎಸಗಿರುವುದು ಎಂಎಲ್ಎ ಬಚ್ಚು ಕಾಡು ಅವರ ಪ್ರಹಾರ್ ಸಂಘಟನೆ ಯುವಕರು ಎಂಬ ವಿಷಯ ಬಯಲಾಗಿತ್ತು.
ಈ ಎಲ್ಲಾ ಬೆಳವಣಿಗೆ ಬಳಿಕ ವಿಹೆಚ್ಪಿ ನೂತನ ಕ್ರಮಕ್ಕೆ ಎದುರಾಗಿದ್ದು, ನಮ್ಮ ಯುವಕರು ಕಾನೂನನ್ನು ಕೈಗೆತ್ತೊಕೊಳ್ಳುವುದಿಲ್ಲ, ಆದರೂ ಬೇರೆಯವರ ತಪ್ಪಿಗೆ ನಮ್ಮ ಸಂಘಟನೆಯನ್ನು ಗುರಿ ಮಾಡಲಾಗುತ್ತದೆ. ಹೀಗಾಗಿ ನೂತನ ಕ್ರಮ ಅನುಸರಿಸುತ್ತಿದ್ದೇವೆ ಎಂದು ಜಂಬೇಕರ್ ತಿಳಸಿದ್ದಾರೆ,