ದೇಶದ 6 ಲಕ್ಷ ಗ್ರಾಮಗಳಲ್ಲಿ ವಿಎಚ್ಪಿ ಧರ್ಮಸಭೆ
ಈಗ ನಡೆಯುತ್ತಿರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ರಾಮ ಮಂದಿರಕ್ಕಾಗಿ ಸರಕಾರ ಶಾಸನ ರೂಪಿಸಬೇಕೆಂದು ಆಗ್ರಹಿಸಿ ವಿಎಚ್ಪಿ ಜಮ್ಮುವಿನಲ್ಲಿ ಭಾನುವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಇಂತಹದ್ದೊಂದು ನಿರ್ಧಾರಕ್ಕೆ ಬರಲಾಗಿದೆ.
Vijaya Karnataka 17 Dec 2018, 9:46 am
ಜಮ್ಮು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಹೊರಡಿಸುವಂತೆ ಸರಕಾರದ ಮೇಲೆ ಒತ್ತಡ ಹೇರಲು ಮುಂದಿನ ದಿನಗಳಲ್ಲಿ ಎಲ್ಲ 543 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಸುಮಾರು 6 ಲಕ್ಷ ಗ್ರಾಮಗಳಲ್ಲಿ ಧರ್ಮಸಭೆ ನಡೆಸಲು ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದೆ.
ಈಗ ನಡೆಯುತ್ತಿರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ರಾಮ ಮಂದಿರಕ್ಕಾಗಿ ಸರಕಾರ ಶಾಸನ ರೂಪಿಸಬೇಕೆಂದು ಆಗ್ರಹಿಸಿ ವಿಎಚ್ಪಿ ಜಮ್ಮುವಿನಲ್ಲಿ ಭಾನುವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಇಂತಹದ್ದೊಂದು ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ಹೇಳಿವೆ. ಸಭೆಯಲ್ಲಿ ವಿಎಚ್ಪಿ ಕೇಂದ್ರೀಯ ಕಾರ್ಯದರ್ಶಿ ರಾಜೇಂದರ್ ಸಿಂಗ್ ಪಂಕಜ್, ಜಮ್ಮು-ಕಾಶ್ಮೀರದ ಬಿಜೆಪಿ ನಾಯಕರು ಹಾಗೂ 100ಕ್ಕೂ ಅಧಿಕ ಸಾಧು-ಸಂತರು ಪಾಲ್ಗೊಂಡಿದ್ದರು.
ಜನವರಿಯಲ್ಲಿ ಪ್ರಯಾಗ್ರಾಜ್ನಲ್ಲಿ ನಡೆಯಲಿರುವ ಕುಂಭಮೇಳದಲ್ಲಿ ಮಂದಿರ ನಿರ್ಮಾಣ ಕುರಿತು ರೂಪುರೇಷೆ ಸಿದ್ಧಗೊಳ್ಳಲಿದೆ. ಯಾವ ಶಕ್ತಿಗಳಿಂದಲೂ ಮಂದಿರ ನಿರ್ಮಾಣ ತಡೆಯಲು ಸಾಧ್ಯವಿಲ್ಲ ಎಂದು ಧರ್ಮಸಭೆಯಲ್ಲಿ ಪಾಲ್ಗೊಂಡಿದ್ದ ಅಖಿಲ ಭಾರತೀಯ ಸಂತ ಸಮಿತಿಯ ಜಗದ್ಗುರು ರಮಾನಂದಚಾರ್ಯ ಸ್ವಾಮಿ ಹಂಸದೇವಾಚಾರ್ಯ ಮಹಾರಾಜ್ ಹೇಳಿದರು.
ಈಗ ನಡೆಯುತ್ತಿರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ರಾಮ ಮಂದಿರಕ್ಕಾಗಿ ಸರಕಾರ ಶಾಸನ ರೂಪಿಸಬೇಕೆಂದು ಆಗ್ರಹಿಸಿ ವಿಎಚ್ಪಿ ಜಮ್ಮುವಿನಲ್ಲಿ ಭಾನುವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಇಂತಹದ್ದೊಂದು ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ಹೇಳಿವೆ. ಸಭೆಯಲ್ಲಿ ವಿಎಚ್ಪಿ ಕೇಂದ್ರೀಯ ಕಾರ್ಯದರ್ಶಿ ರಾಜೇಂದರ್ ಸಿಂಗ್ ಪಂಕಜ್, ಜಮ್ಮು-ಕಾಶ್ಮೀರದ ಬಿಜೆಪಿ ನಾಯಕರು ಹಾಗೂ 100ಕ್ಕೂ ಅಧಿಕ ಸಾಧು-ಸಂತರು ಪಾಲ್ಗೊಂಡಿದ್ದರು.
ಜನವರಿಯಲ್ಲಿ ಪ್ರಯಾಗ್ರಾಜ್ನಲ್ಲಿ ನಡೆಯಲಿರುವ ಕುಂಭಮೇಳದಲ್ಲಿ ಮಂದಿರ ನಿರ್ಮಾಣ ಕುರಿತು ರೂಪುರೇಷೆ ಸಿದ್ಧಗೊಳ್ಳಲಿದೆ. ಯಾವ ಶಕ್ತಿಗಳಿಂದಲೂ ಮಂದಿರ ನಿರ್ಮಾಣ ತಡೆಯಲು ಸಾಧ್ಯವಿಲ್ಲ ಎಂದು ಧರ್ಮಸಭೆಯಲ್ಲಿ ಪಾಲ್ಗೊಂಡಿದ್ದ ಅಖಿಲ ಭಾರತೀಯ ಸಂತ ಸಮಿತಿಯ ಜಗದ್ಗುರು ರಮಾನಂದಚಾರ್ಯ ಸ್ವಾಮಿ ಹಂಸದೇವಾಚಾರ್ಯ ಮಹಾರಾಜ್ ಹೇಳಿದರು.