ಆ್ಯಪ್ನಗರ

ತಬ್ಲಿಘಿ ಜಮಾತ್‌ ಸಂಘಟನೆ ನಿಷೇಧಕ್ಕೆ ಒತ್ತಾಯ: ಬ್ಯಾನ್‌ ಮಾಡಲು ಮುಸ್ಲಿಮರಿಂದಲೂ ಒತ್ತಾಯ!

ಭಾರತದಲ್ಲಿ ಕೊರೊನಾ ವೈರಸ್‌ ಸೋಂಕು ಹೆಚ್ಚಾಗಿ ಹರಡುತ್ತಿದೆ. ಅಲ್ಲದೆ, ಸೋಂಕಿತರ ಸಂಖ್ಯೆ ಹೆಚ್ಚಾಗಲು ತಬ್ಲಿಘಿ ಜಮಾತ್‌ ಸಂಘಟನೆಯೇ ಕಾರಣ ಎಂದು ಹಲವರು ಆರೋಪಿಸಿದ್ದು, ಈ ಸಂಘಟನೆ ನಿಷೇಧಕ್ಕೆ ಆಗ್ರಹಿಸುತ್ತಿದ್ದಾರೆ.

Vijaya Karnataka Web 6 Apr 2020, 2:01 pm
ದಿಲ್ಲಿಯ ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲಿಘಿ ಜಮಾತ್‌ ಧಾರ್ಮಿಕ ಕಾರ್ಯಕ್ರಮದ ಬಳಿಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದೆ. ಈಗಾಗಲೇ 1,000ಕ್ಕೂ ಹೆಚ್ಚು ಕೋವಿಡ್‌ - 19 ಸೋಂಕಿತರು ನಿಜಾಮುದ್ದೀನ್‌ ಸಭೆಯಲ್ಲಿ ಭಾಗವಹಿಸಿದ್ದವರು ಎಂದು ತಿಳಿದುಬಂದಿದೆ. ಈ ಹಿನ್ನೆಲೆ ತಬ್ಲಿಘಿ ಜಮಾತ್‌ ಸಂಘಟನೆ ಬ್ಯಾನ್‌ ಮಾಡುವಂತೆ ಹಲವರು ಆಗ್ರಹಿಸುತ್ತಿದ್ದಾರೆ.
Vijaya Karnataka Web vhp uttar pradesh muslim minister insist to ban tablighi jamaat
ತಬ್ಲಿಘಿ ಜಮಾತ್‌ ಸಂಘಟನೆ ನಿಷೇಧಕ್ಕೆ ಒತ್ತಾಯ: ಬ್ಯಾನ್‌ ಮಾಡಲು ಮುಸ್ಲಿಮರಿಂದಲೂ ಒತ್ತಾಯ!


ಮಾರ್ಚ್ ಎರಡನೇ ವಾರದಲ್ಲಿ ಅಲ್ಲಿನ ಧಾರ್ಮಿಕ ಸಭೆಗೆ ಹಾಜರಾದ ಸಾವಿರಕ್ಕೂ ಅಧಿಕ ಜನರಿಗೆ ಕೊರೊನಾ ವೈರಸ್‌ ಪಾಸಿಟಿವ್‌ ಸೋಂಕು ತಗುಲಿದೆ. ಈ ಹಿನ್ನೆಲೆ ಈ ಸಂಘಟನೆ ಬ್ಯಾನ್‌ ಮಾಡುವಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಹಲವರು ಆಗ್ರಹಿಸಿದ್ದಾರೆ. #BanTablighiJamaat ಎಂಬ ಹ್ಯಾಶ್‌ಟ್ಯಾಗ್‌ ಸಹ ಟ್ರೆಂಡಿಂಗ್‌ ಆಗುತ್ತಿದೆ.

ಇನ್ನು, ಕೆಲ ದೇಶಗಳಲ್ಲಿ ತಬ್ಲಿಘಿ ಜಮಾತ್‌ ಸಂಘಟನೆಯ ಸಮಾವೇಶಗಳಿಂದ ಕೊರೊನಾ ವೈರಸ್‌ ಹರಡಿದ್ದು ಖಚಿತವಾಗಿದ್ದರೂ ಭಾರತದಲ್ಲಿ ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಕೇಂದ್ರ ಸರಕಾರದ ವಿರುದ್ಧವೂ ಟೀಕೆ ಕೇಳಿ ಬರುತ್ತಿದೆ. ಸದ್ಯ ಬೃಹತ್ ಧಾರ್ಮಿಕ ಕೂಟದಲ್ಲಿ ಭಾಗವಹಿಸಿದ್ದವರಿಗಾಗಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ದೇಶಾದ್ಯಂತ ಹುಡುಕಾಟ ನಡೆಸುತ್ತಿದ್ದಾರೆ., ಸಭೆಯಲ್ಲಿ ಭಾಗವಹಿಸಿದ್ದ ಸಾವಿರಾರು ಜನರಿಂದ ದೇಶದ ಉದ್ದಗಲಕ್ಕೂ ವೈರಸ್‌ ಮತ್ತಷ್ಟು ಹರಡುತ್ತದೆ ಎಂಬ ಆತಂಕವೂ ಹೆಚ್ಚಾಗಿದೆ.

​ತಬ್ಲಿಘಿ ಜಮಾತ್‌ ಬ್ಯಾನ್‌ಗೆ ವಿಎಚ್‌ಪಿ ಆಗ್ರಹ

ದೇಶದಲ್ಲಿ ಕೋವಿಡ್‌ - 19 ಹಾಟ್‌ಸ್ಪಾಟ್‌ ಆಗಿ ಹೊರಹೊಮ್ಮಿರುವ ತಬ್ಲಿಘಿ ಜಮಾತ್‌ ಮತ್ತುನಿಜಾಮುದ್ದೀನ್ ಮರ್ಕಾಜ್ ಮೇಲೆ ಸಂಪೂರ್ಣ ನಿಷೇಧ ಹೇರಬೇಕೆಂದು ಭಾನುವಾರ ವಿಎಚ್‌ಪಿ ಆಗ್ರಹಿಸಿದೆ. ದಿಲ್ಲಿಯ ನಿಜಾಮುದ್ದೀನ್‌ನ ಪಶ್ಚಿಮ ಭಾಗ ಕೊರೊನಾ ವೈರಸ್‌ನ ಹಾಟ್‌ಸ್ಪಾಟ್‌ ಎನಿಸಿಕೊಂಡಿದೆ.ತಬ್ಲಿಘಿ ಜಮಾತ್‌ ಇಸ್ಲಾಮಿಕ್‌ ತೀವ್ರಗಾಮಿತ್ವ ಮತ್ತು ಭಯೋತ್ಪಾದನೆಯ ಪೋಷಕ ಸಂಘಟನೆ. ಈ ಹಿನ್ನೆಲೆ ಬ್ಯಾನ್‌ ಮಾಡಬೇಕೆಂದು ವಿಎಚ್‌ಪಿಯ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್‌ ಆಗ್ರಹಿಸಿದ್ದಾರೆ.

ಅಲ್ಲದೆ, ಲಾಕ್‌ಡೌನ್‌ನಿಂದ ದೇಶಾದ್ಯಂತ ಜನತೆ ರಿಲೀಫ್‌ನಲ್ಲಿದ್ದಾಗ ಈ ಸಂಘಟನೆಯ ಸಭೆಯಲ್ಲಿ ಭಾಗವಹಿಸಿದ್ದರಿಂದ ದೇಶದಲ್ಲಿ ಕೊರೊನಾ ವೈರಸ್‌ ಸಮುದಾಯಕ್ಕೆ ವಿದ್ತರಿಸುವ ಆತಂಕ ಸೃಷ್ಟಿಯಾಗಿದೆ ಎಂದು ವಿಎಚ್‌ಪಿ ವಕ್ತಾರ ವಿನೋದ್‌ ಬನ್ಸಾಲ್‌ ಮಾಹಿತಿ ನೀಡಿದ್ದಾರೆ.

​ತಬ್ಲಿಘಿ ಜಮಾತ್ ಉಗ್ರ ಸಂಘಟನೆ: ಯುಪಿ ಸಚಿವ

ಉತ್ತರ ಪ್ರದೇಶದ ಮುಸ್ಲಿಂ ವಕ್ಫ್ ಸಚಿವ ಮೊಹ್ಸಿನ್ ರಾಜಾ ತಬ್ಲಿಘಿ ಜಮಾತ್ ಅನ್ನು ಉಗ್ರಗಾಮಿ ಸಂಘಟನೆ ಎಂದು ಬಣ್ಣಿಸಿದ್ದಾರೆ. ದೇಶವು ಒಗ್ಗಟ್ಟಿನಿಂದ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ ಉಗ್ರಗಾಮಿ ಸಂಘಟನೆಯು ಭಾರತ ವಿರೋಧಿ ನಡವಳಿಕೆಯನ್ನು ಪ್ರದರ್ಶಿಸಿದೆ. ಅವರು ಸಭೆಯನ್ನು ನಡೆಸಬಾರದೆಂಬ ಸರಕಾರದ ಆದೇಶವನ್ನು ಧಿಕ್ಕರಿಸಿದ್ದಾರೆ. ಈ ಸಂಘಟನೆಯ ಅಂತರರಾಷ್ಟ್ರೀಯ ಧನಸಹಾಯದ ಬಗ್ಗೆಯೂ ಗಮನಹರಿಸಬೇಕು ಮತ್ತು ಕಾನೂನು ಕ್ರಮಗಳನ್ನು ಸಹ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿದ್ದಾರೆ.

ಆತ್ಮಾಹುತಿ ಬಾಂಬರ್‌ಗಳನ್ನು ತಯಾರಿಸಿದೆ: ಶಿಯಾ ವಕ್ಪ್‌ ಮಂಡಳಿ ಮುಖ್ಯಸ್ಥ

ತಬ್ಲಿಘಿ ಜಮಾತ್‌ ಸಂಘಟನೆಯು ಆತ್ಮಾಹುತಿ ಬಾಂಬರ್‌ಗಳನ್ನು ತಯಾರಿಸಿದೆ ಎಂದು ಶಿಯಾ ವಕ್ಫ್ ಮಂಡಳಿಯ ಮುಖ್ಯಸ್ಥ ವಾಸಿಮ್‌ ರಿಜ್ವಿ ಆರೋಪಿಸಿದ್ದಾರೆ. ಅಲ್ಲದೆ, ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಇಂತಹ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.

ಇದಕ್ಕೂ ಮೊದಲು, ತಬ್ಲಿಘಿ ಜಮಾತ್ ತನ್ನ ಅನುಯಾಯಿಗಳನ್ನು ಉದ್ದೇಶಪೂರ್ವಕವಾಗಿ ಕೊರೊನಾ ವೈರಸ್ ಸೋಂಕಿಗೆ ಒಳಪಡಿಸಿದೆ ಮತ್ತು ಅವರನ್ನು ಭಾರತಕ್ಕೆ ಕಳಿಸಿದೆ. ಇದರಿಂದಾಗಿ ಗರಿಷ್ಠ ಜನರು ಸೋಂಕಿಗೆ ಒಳಗಾಗುತ್ತಾರೆ ಎಂದು ಈ ರೀತಿ ಮಾಡಿದೆ ಎಂದು ವಿಡಿಯೋ ಸಂದೇಶವೊಂದರಲ್ಲಿ ರಿಜ್ವಿ ಆರೋಪಿಸಿದ್ದರು.

ಜತೆಗೆ, ಬರೇಲಿಯ ದರ್ಗಾ ಅಲಾ ಹಜರತ್ ಧರ್ಮಗುರು ಹಾಗೂ ಶಿಯಾ ಧರ್ಮಗುರುಗಳು ಸಹ ದೇಶದಲ್ಲಿ ತಬ್ಲಿಘಿ ಜಮಾತ್ ಸಂಘಟನೆ ನಿಷೇಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಉತ್ತರ ಪ್ರದೇಶ ಅಲ್ಪ ಸಂಖ್ಯಾತರ ಆಯೋಗದ ಸದಸ್ಯ ಸರ್ದಾರ್ ಪರ್ವಿಂದರ್‌ ಸಿಂಗ್‌ ಸಹ ಸಂಘಟನೆ ನಿಷೇಧಕ್ಕೆ ಒತ್ತಾಯಿಸಿದ್ದಾರೆ.

ಟ್ವಿಟ್ಟರ್‌ನಲ್ಲೂ ತಬ್ಲಿಘಿ ಜಮಾತ್‌ ವಿರುದ್ಧ ಆಕ್ರೋಶ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ