ಆ್ಯಪ್ನಗರ

ಪ್ರತಿ ಹಳ್ಳಿಯಲ್ಲೂ ರಾಮನ ಪ್ರತಿಮೆ: ವಿಶ್ವಹಿಂದೂ ಪರಿಷತ್ ಕರೆ

ದೇಶದ ಪ್ರತಿ ಹಳ್ಳಿಯಲ್ಲೂ ಶ್ರೀರಾಮನ ಪ್ರತಿಮೆಗಳನ್ನು ಸ್ಥಾಪಿಸಬೇಕು ಎಂದು ವಿಶ್ವಹಿಂದೂ ಪರಿಷತ್‌ ಕರೆ ನೀಡಿದೆ.

Vijaya Karnataka Web 29 Nov 2017, 2:56 pm
ಲಖನೌ: ದೇಶದ ಪ್ರತಿ ಹಳ್ಳಿಯಲ್ಲೂ ಶ್ರೀರಾಮನ ಪ್ರತಿಮೆಗಳನ್ನು ಸ್ಥಾಪಿಸಬೇಕು ಎಂದು ವಿಶ್ವಹಿಂದೂ ಪರಿಷತ್‌ ಕರೆ ನೀಡಿದೆ.
Vijaya Karnataka Web vhp wants ram statue in every village
ಪ್ರತಿ ಹಳ್ಳಿಯಲ್ಲೂ ರಾಮನ ಪ್ರತಿಮೆ: ವಿಶ್ವಹಿಂದೂ ಪರಿಷತ್ ಕರೆ


ಮೂರು ದಿನಗಳ ಕಾಲ ಕರ್ನಾಟಕದ ಉಡುಪಿಯಲ್ಲಿ ನಡೆದ ಧರ್ಮಸಂಸದ್‌ನಲ್ಲಿ ಈ ಕರೆ ನೀಡಲಾಗಿದೆ. ವಿಶ್ವಹಿಂದೂ ಪರಿಷತ್‌, ಬಜರಂಗದಳ ಮತ್ತು ಇತರ ಸಂಘಟನೆಗಳು ಧರ್ಮಸಂಸದ್‌ನಲ್ಲಿ ಭಾಗವಹಿಸಿದ್ದವು.

ಆಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸದ 25ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ವಿಹಿಂಪ ಈ ಕರೆ ನೀಡಿದೆ. ಇದೇ ವೇಳೆ, ಅಯೋಧ್ಯೆ ಪ್ರಕರಣ ಕುರಿತ ಪ್ರತಿದಿನದ ವಿಚಾರಣೆಯನ್ನು ಡಿಸೆಂಬರ್‌ 5ರಿಂದ ಸುಪ್ರೀಂ ಕೋರ್ಟ್‌ ಆರಂಭಿಸಲಿದೆ.

ಮೂರು ದಶಕಗಳಿಂದ ರಾಮ ಮಂದಿರ ನಿರ್ಮಾಣಕ್ಕಾಗಿ ಆಂದೋಲನ ನಡೆಸುತ್ತಿರುವ ವಿಶ್ವಹಿಂದೂ ಪರಿಷತ್‌, ಮಾರ್ಚ್‌ 31ರಂದು ಹನುಮ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವಂತೆಯೂ ಕರೆ ನೀಡಿದೆ. ರಾಮಮಂದಿರ ನಿರ್ಮಾಣಕ್ಕಿರುವ ಎಲ್ಲ ತೊಡಕುಗಳ ನಿವಾರಣೆಗಾಗಿ ಹನುಮಾನ್‌ ಮಂದಿರಗಳಲ್ಲಿ ಪ್ರಾರ್ಥಿಸುವಂತೆ ಹೇಳಿದೆ.

ಮುಂದಿನ ವರ್ಷದ ಮಾರ್ಚ್‌ 15ರಿಂದ 31ರ ವರೆಗೆ ಪ್ರತಿಯೊಬ್ಬ ಹಿಂದುವೂ 108 ಬಾರಿ ಹನುಮಾನ್ ಚಾಲೀಸವೂ ಸೇರಿದಂತೆ ಧಾರ್ಮಿಕ ಮಂತ್ರಗಳನ್ನು ಉಚ್ಚರಿಸುವಂತೆ ಕರೆ ನೀಡಿದೆ.

ವರ್ಷ ಪ್ರತಿಪದೆಯ ಮೊದಲ ದಿನದಿಂದಲೇ (ಮಾರ್ಚ್‌ 15ರಿಂದ 31ರ ವರೆಗೆ) ದೇಶಾದ್ಯಂತ ಜನಜಾಗೃತಿ ಆಂದೋಲನಗಳನ್ನು ನಡೆಸುವುದಾಗಿ ವಿಹಿಂಪ ಘೋಷಿಸಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂದು ಧರ್ಮಸಂಸದ್‌ನಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ, ದೇಶವ್ಯಾಪಿ ಜಾಗೃತಿ ಆಂದೋಲನ ನಡೆಸುವುದಾಗಿ ವಿಹಿಂಪ ಮುಖಂಡ ಶರದ್‌ ಶರ್ಮಾ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ