ಹೊಸದಿಲ್ಲಿ: ನೌಕಾಪಡೆ ಮುಖ್ಯಸ್ಥರನ್ನಾಗಿ ಕರಮ್ಬೀರ್ ಸಿಂಗ್ ಅವರ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿಯನ್ನು ವೈಸ್ ಅಡ್ಮಿರಲ್ ಬಿಮಲ್ ವರ್ಮಾ ಮಂಗಳವಾರ ವಾಪಸ್ ಪಡೆದಿದ್ದಾರೆ. ಇದರೊಂದಿಗೆ ನೂತನ ನೌಕಾಪಡೆ ಮುಖ್ಯಸ್ಥರ ನೇಮಕಕ್ಕೆ ಇದ್ದ ತೊಡಕು ನಿವಾರಣೆಯಾಗಿದೆ.ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ನ ಮುಖ್ಯಸ್ಥರಾಗಿದ್ದ ವರ್ಮಾ ಅವರು, ಸೇವಾ ಜ್ಯೇಷ್ಠತೆಯನ್ನು ಉಲ್ಲಂಘಿಸಿ ತಮ್ಮ ಬದಲು ಕರಮ್ಬೀರ್ ಸಿಂಗ್ ಅವರನ್ನು ನೌಕಾಪಡೆ ಮುಖ್ಯಸ್ಥನ್ನಾಗಿ ನೇಮಕ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ಸೇನಾ ಪಡೆಗಳ ನ್ಯಾಯಾಧೀಕರಣಕ್ಕೆ ಅವರು ದೂರು ಸಲ್ಲಿಸಿದ್ದರು. ಆಂತರಿಕ ಸಂಧಾನಕ್ಕೆ ನ್ಯಾಯಾಧಿಕರಣ ಸೂಚಿಸಿದ ಬಳಿಕ ವರ್ಮಾ ಅರ್ಜಿ ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ.
ನೌಕಾಪಡೆ ಮುಖ್ಯಸ್ಥರ ನೇಮಕ ಅಬಾಧಿತ
ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ನ ಮುಖ್ಯಸ್ಥರಾಗಿದ್ದ ವರ್ಮಾ ಅವರು, ಸೇವಾ ಜ್ಯೇಷ್ಠತೆಯನ್ನು ಉಲ್ಲಂಘಿಸಿ ತಮ್ಮ ಬದಲು ಕರಮ್ಬೀರ್ ಸಿಂಗ್ ಅವರನ್ನು ನೌಕಾಪಡೆ ಮುಖ್ಯಸ್ಥನ್ನಾಗಿ ನೇಮಕ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
Vijaya Karnataka 10 Apr 2019, 5:00 am