ಹೊಸದಿಲ್ಲಿ: ಬಾಲ್ಯದಲ್ಲಿ ಲೈಂಗಿಕ ಶೋಷಣೆಗೊಳಗಾಗಿದ್ದ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ 24 ವರ್ಷದ ವ್ಯಕ್ತಿಯೊಬ್ಬರು 'ದಯಾ ಮರಣ' ಕೋರಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.
''ನಾನು 8 ವರ್ಷದವನಿದ್ದಾಗ ಸಹೋದರ ಸಂಬಂಧಿಯಿಂದ ಹಾಗೂ ಹೈಸ್ಕೂಲ್ನಲ್ಲಿದ್ದಾಗ ಉಪಾಧ್ಯಾಯರಿಂದ ಲೈಂಗಿಕ ಶೋಷಣೆಗೊಳಗಾದೆ. ಲೈಂಗಿಕ ದೌರ್ಜನ್ಯ ಸಹಿಸಿಕೊಂಡು ಬದುಕುವುದು ಅಷ್ಟು ಸುಲಭವಲ್ಲ. ಆ ಘಟನೆಗಳು ಈಗಲೂ ನನ್ನನ್ನು ಕನಸಿನಲ್ಲಿ ಕಾಡುತ್ತಿರುತ್ತವೆ. ಗತಕಾಲದ ಕಹಿ ನೆನಪುಗಳಿಂದ ಮುಕ್ತಿ ಪಡೆಯುವುದಕ್ಕಾಗಿ ನಿಮ್ಮಿಂದ ನಾನು ದಯಾ ಮರಣದ ಅನುಮತಿ ಕೋರುತ್ತಿದ್ದೇನೆ,'' ಎಂದು ರಾಷ್ಟ್ರಪತಿಯವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ಪತ್ರದ ಒಂದು ಪ್ರತಿಯನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿಯವರಿಗೂ ರವಾನಿಸಿದ್ದಾರೆ.
''ಸಮಾಜದಲ್ಲಿ ಹೆಣ್ಣು ಮಕ್ಕಳು ಅಥವಾ ಮಹಿಳೆಯರು ಲೈಂಗಿಕ ಶೋಷಣೆಗೊಳಗಾಗುವುದನ್ನು ಕೇಳಿದ್ದೇನೆ. ಆದರೆ, ಗಂಡು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವುದನ್ನು ಕೇಳಿರಲಿಲ್ಲ. ಎರಡೂ ಬಾರಿ ನನ್ನ ತಂದೆ ತಾಯಿಗೆ ವಿಷಯ ತಿಳಿಸಿದ್ದೆ. ಆದರೆ, ಸುಸಂಸ್ಕೃತ ಮನೆತನದವರಾದ ಅವರು ಮರ್ಯಾದೆಗೆ ಅಂಜಿ ಪೊಲೀಸರಿಗೆ ದೂರು ನೀಡಿರಲಿಲ್ಲ. ನನಗೀಗ ಆಘಾತದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಪತ್ರಕ್ಕೆ ರಾಷ್ಟ್ರಪತಿಯವರಿಂದಾಗಲೀ ಮುಖ್ಯಮಂತ್ರಿಯಿಂದಾಗಲೀ ಸ್ಪಂದನೆ ಸಿಗದೇಹೋದಲ್ಲಿ ನಾನೊಂದು ದಿನ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನನ್ನ ಸಾವಿಗೆ ಸರಕಾರಗಳೇ ಜವಾಬ್ದಾರಿಯಾಗಬೇಕಾಗುತ್ತದೆ,'' ಎಂದು ಆತ ಪತ್ರದಲ್ಲಿ ವಿವರಿಸಿದ್ದಾರೆ.
''ನಾನು 8 ವರ್ಷದವನಿದ್ದಾಗ ಸಹೋದರ ಸಂಬಂಧಿಯಿಂದ ಹಾಗೂ ಹೈಸ್ಕೂಲ್ನಲ್ಲಿದ್ದಾಗ ಉಪಾಧ್ಯಾಯರಿಂದ ಲೈಂಗಿಕ ಶೋಷಣೆಗೊಳಗಾದೆ. ಲೈಂಗಿಕ ದೌರ್ಜನ್ಯ ಸಹಿಸಿಕೊಂಡು ಬದುಕುವುದು ಅಷ್ಟು ಸುಲಭವಲ್ಲ. ಆ ಘಟನೆಗಳು ಈಗಲೂ ನನ್ನನ್ನು ಕನಸಿನಲ್ಲಿ ಕಾಡುತ್ತಿರುತ್ತವೆ. ಗತಕಾಲದ ಕಹಿ ನೆನಪುಗಳಿಂದ ಮುಕ್ತಿ ಪಡೆಯುವುದಕ್ಕಾಗಿ ನಿಮ್ಮಿಂದ ನಾನು ದಯಾ ಮರಣದ ಅನುಮತಿ ಕೋರುತ್ತಿದ್ದೇನೆ,'' ಎಂದು ರಾಷ್ಟ್ರಪತಿಯವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ಪತ್ರದ ಒಂದು ಪ್ರತಿಯನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿಯವರಿಗೂ ರವಾನಿಸಿದ್ದಾರೆ.
''ಸಮಾಜದಲ್ಲಿ ಹೆಣ್ಣು ಮಕ್ಕಳು ಅಥವಾ ಮಹಿಳೆಯರು ಲೈಂಗಿಕ ಶೋಷಣೆಗೊಳಗಾಗುವುದನ್ನು ಕೇಳಿದ್ದೇನೆ. ಆದರೆ, ಗಂಡು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವುದನ್ನು ಕೇಳಿರಲಿಲ್ಲ. ಎರಡೂ ಬಾರಿ ನನ್ನ ತಂದೆ ತಾಯಿಗೆ ವಿಷಯ ತಿಳಿಸಿದ್ದೆ. ಆದರೆ, ಸುಸಂಸ್ಕೃತ ಮನೆತನದವರಾದ ಅವರು ಮರ್ಯಾದೆಗೆ ಅಂಜಿ ಪೊಲೀಸರಿಗೆ ದೂರು ನೀಡಿರಲಿಲ್ಲ. ನನಗೀಗ ಆಘಾತದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಪತ್ರಕ್ಕೆ ರಾಷ್ಟ್ರಪತಿಯವರಿಂದಾಗಲೀ ಮುಖ್ಯಮಂತ್ರಿಯಿಂದಾಗಲೀ ಸ್ಪಂದನೆ ಸಿಗದೇಹೋದಲ್ಲಿ ನಾನೊಂದು ದಿನ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನನ್ನ ಸಾವಿಗೆ ಸರಕಾರಗಳೇ ಜವಾಬ್ದಾರಿಯಾಗಬೇಕಾಗುತ್ತದೆ,'' ಎಂದು ಆತ ಪತ್ರದಲ್ಲಿ ವಿವರಿಸಿದ್ದಾರೆ.