ಆ್ಯಪ್ನಗರ

ವಿಡಿಯೋ ಗೇಮ್ ತೆಗೆದುಕೊಡದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

ಮಕ್ಕಳು ವಿಡಿಯೋ ಗೇಮ್‌ಗಳ ವ್ಯಸನಕ್ಕೆ ಬಿದ್ದರೆ ಏನೆಲ್ಲಾ ಅವಘಡಳಾಗುತ್ತವೆ ಎಂಬುದಕ್ಕೆ ಈ ಘಟನೆ ಸ್ಪಷ್ಟ ನಿದರ್ಶನ. ವಿಡಿಯೋ ಗೇಮ್ ತೆಗೆದುಕೊಡಲು ತಂದೆತಾಯಿ ನಿರಾಕರಿಸಿದ ಹಿನ್ನೆಲೆಯಲ್ಲಿ ತೀವ್ರವಾಗಿ ಮನನೊಂದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.

ತೆಲುಗು ಸಮಯಂ 8 Aug 2017, 4:39 pm
ಹೈದರಾಬಾದ್: ಮಕ್ಕಳು ವಿಡಿಯೋ ಗೇಮ್‌ಗಳ ವ್ಯಸನಕ್ಕೆ ಬಿದ್ದರೆ ಏನೆಲ್ಲಾ ಅವಘಡಳಾಗುತ್ತವೆ ಎಂಬುದಕ್ಕೆ ಈ ಘಟನೆ ಸ್ಪಷ್ಟ ನಿದರ್ಶನ. ವಿಡಿಯೋ ಗೇಮ್ ತೆಗೆದುಕೊಡಲು ತಂದೆತಾಯಿ ನಿರಾಕರಿಸಿದ ಹಿನ್ನೆಲೆಯಲ್ಲಿ ತೀವ್ರವಾಗಿ ಮನನೊಂದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮನೆಯ ಮೇಲಿನಿಂದ ಜಿಗಿದು ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಈ ವಿಷಾದನೀಯ ಘಟನೆ ಹೈದರಾಬಾದ್‌ನ ಹೊರವಲಯದ ಅಬ್ದುಲ್ಲಾಪೂರ್‌ಮೆಟ್ ಪಂಚಾಯಿತಿಯ ಕುಂಟ್ಲೂರು ಎಂಬ ಗ್ರಾಮದಲ್ಲಿ ನಡೆದಿದೆ.
Vijaya Karnataka Web video game addiction kills a boy in hyderabad
ವಿಡಿಯೋ ಗೇಮ್ ತೆಗೆದುಕೊಡದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ


ಈ ಗ್ರಾಮದ ಶ್ರೀನಿವಾಸ್, ಪದ್ಮಾ ದಂಪತಿಗಳ ಏಕೈಕ ಪುತ್ರ ಅಭಿನಯ್ (17) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಇತ್ತೀಚೆಗಷ್ಟೇ ತಮ್ಮ ಗ್ರಾಮದಲ್ಲಿ ಹೊಸದಾಗಿ ಎರಡು ಅಂತಸ್ತಿನ ಭವನ ಕಟ್ಟಿದ್ದಾರೆ ಈ ದಂಪತಿಗಳು. ಅಭಿನಯ್ ಎಂಜಿನಿಯರಿಂಗ್ ಮೊದಲ ವರ್ಷದ ವಿದ್ಯಾರ್ಥಿ. ಆಗಸ್ಟ್ 2ರಂದಷ್ಟೇ ಅಭಿನಯ್ ಕಾಲೇಜಿಗೆ ಸೇರಿದ್ದ.

ತನಗೆ ಹೊಸ ವಿಡಿಯೋ ಗೇಮ್ ಕೊಡಿಸಬೇಕೆಂದು ಕಳೆದ ವಾರದಿಂದ ತಂದೆಯನ್ನು ಸತಾಯಿಸುತ್ತಲೇ ಇದ್ದ. ಆದರೆ ಅವರ ತಂದೆ ಅದನ್ನು ಮುಂದೂಡುತ್ತಲೇ ಬಂದಿದ್ದರು. ಭಾನುವಾರ ಮತ್ತೊಮ್ಮೆ ತನ್ನ ತಂದೆಯನ್ನು ವಿಡಿಯೋ ಗೇಮ್ ತೆಗೆದುಕೊಡಬೇಕೆಂದು ಕೇಳಿದ. ಮನೆ ಕಟ್ಟಲು ತುಂಬಾ ಹಣ ಖರ್ಚಾಗಿದೆ ಎಂದೂ, ವಿಡಿಯೋ ಗೇಮ್ ನಿಧಾನಕ್ಕೆ ಕೊಡಿಸುತ್ತೇನೆಂದು ತಿಳಿಹೇಳಿದ್ದರು.

ಆದರೆ ತನಗೆ ವಿಡಿಯೋ ಗೇಮ್ ಬೇಕೇಬೇಕೆಂದು ಹಠ ಮಾಡಿದ್ದ ಅಭಿನಯ್. ಈ ಸಂಬಂಧ ಮಗನನ್ನು ಬೈದಿದ್ದರು. ಇದರಿಂದ ತೀವ್ರವಾಗಿ ಮನನೊಂದಿದ್ದ ಅಭಿನಯ್ ಟೆರೇಸ್ ಮೇಲೆ ಹೋಗಿ ಮೆಟ್ಟಿನ ಬಳಿಯ ಬಾಗಿಲನ್ನು ಮುಚ್ಚಿಕೊಂಡು, ಆ ಬಳಿಕ ಮೇಲಿನಿಂದ ಕೆಳಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನನ್ನು ತುರ್ತಾಗಿ ಎಲ್ಬಿ ನಗರದಲ್ಲಿನ ಕಾಮಿನೇನಿ ಆಸ್ಪತ್ರೆಗೆ ಸಾಗಿಸಿದರಾದರೂ ಅಷ್ಟರಲ್ಲಾಗಲೇ ಅಭಿನಯ್ ಮರಣಿಸಿರುವುದಾಗಿ ವೈದ್ಯರು ನಿರ್ಧರಿಸಿದ್ದಾರೆ. ಕುಟುಂಬ ಸದಸ್ಯರು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಅಭಿನಯ್ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ