ಆ್ಯಪ್ನಗರ

ನನ್ನನ್ನು ಬದುಕಿಸು ಡ್ಯಾಡಿ ಎಂದರೂ ಕಲ್ಲು ಹೃದಯ ಕರಗಲಿಲ್ಲ

ಕ್ಯಾನ್ಸರ್‌ನಿಂದ ನರಳುತ್ತಿದ್ದ ಬಾಲಕಿಯೊಬ್ಬಳು ತನ್ನ ಚಿಕಿತ್ಸೆಗೆ ನೆರವಾಗುವಂತೆ ತಂದೆಗೆ ಮನವಿ ಮಾಡಿ ಕಳುಹಿಸಿದ ಮನಕಲುಕುವ ವೀಡಿಯೋ ಒಂದು ವೈರಲ್‌ ಆಗಿದೆ. ಬಾಲಕಿ ಸಾಯಿಶ್ರೀಯ ತಂದೆ ಮತ್ತು ತಾಯಿ ಇಬ್ಬರೂ ಬೇರೆಯಾಗಿ ವಾಸಿಸುತ್ತಿದ್ದಾರೆ. ತಂದೆಯಾದವನು ತನ್ನ ಪತ್ನಿ ಹಾಗೂ ಮಗಳನ್ನು ಬಿಟ್ಟು ಬೇರೆಲ್ಲೋ ಬದುಕುತ್ತಿದ್ದಾನೆ.

ತೆಲುಗು ಸಮಯಂ 15 May 2017, 6:55 pm
ವಿಜಯವಾಡ: ಕ್ಯಾನ್ಸರ್‌ನಿಂದ ನರಳುತ್ತಿದ್ದ ಬಾಲಕಿಯೊಬ್ಬಳು ತನ್ನ ಚಿಕಿತ್ಸೆಗೆ ನೆರವಾಗುವಂತೆ ತಂದೆಗೆ ಮನವಿ ಮಾಡಿ ಕಳುಹಿಸಿದ ಮನಕಲುಕುವ ವೀಡಿಯೋ ಒಂದು ವೈರಲ್‌ ಆಗಿದೆ. ಬಾಲಕಿ ಸಾಯಿಶ್ರೀಯ ತಂದೆ ಮತ್ತು ತಾಯಿ ಇಬ್ಬರೂ ಬೇರೆಯಾಗಿ ವಾಸಿಸುತ್ತಿದ್ದಾರೆ. ತಂದೆಯಾದವನು ತನ್ನ ಪತ್ನಿ ಹಾಗೂ ಮಗಳನ್ನು ಬಿಟ್ಟು ಬೇರೆಲ್ಲೋ ಬದುಕುತ್ತಿದ್ದಾನೆ.
Vijaya Karnataka Web video goes viral abandoned by father girl loses fight against cancer in vijayawada
ನನ್ನನ್ನು ಬದುಕಿಸು ಡ್ಯಾಡಿ ಎಂದರೂ ಕಲ್ಲು ಹೃದಯ ಕರಗಲಿಲ್ಲ


ಸುಮಾರು 10 ವರ್ಷದ ಬಾಲಕಿ ಮಾರಣಾಂತಿಕ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಕೊಡಿಸುವ ಶಕ್ತಿ ತಾಯಿಗಿರಲಿಲ್ಲ. ಹೀಗಾಗಿ ಹತ್ತು ದಿನಗಳ ಹಿಂದೆ ತನ್ನ ಚಿಕಿತ್ಸೆಗೆ ನೆರವಾಗುವಂತೆ ಬಾಲಕಿ ತಂದೆಗೆ ವೀಡಿಯೋ ಮೂಲಕ ಮನವಿ ಮಾಡಿದ್ದಳು. ವೀಡಿಯೋವನ್ನು ವಾಟ್ಸಪ್ ಮೂಲಕ ತಂದೆಗೆ ಕಳುಹಿಸಲಾಗಿತ್ತು.

'ಅಪ್ಪ ನಿನ್ನ ಬಳಿ ಹಣ ಇಲ್ಲ ಅಂತಿದ್ದೀಯಲ್ಲಾ...ಕನಿಷ್ಠ ನನ್ನ ಮನೆ ಇದೆಯಲ್ಲಾ. ಅದನ್ನು ಮಾರಿ ಬಂದ ಹಣದಲ್ಲಿ ನನಗೆ ಚಿಕಿತ್ಸೆ ಕೊಡಿಸು. ಚಿಕಿತ್ಸೆ ಕೊಡದಿದ್ದರೆ ನಾನು ಹೆಚ್ಚು ದಿನ ಬದುಕಲ್ಲ ಪಪ್ಪಾ. ನನ್ನನ್ನು ಬದುಕಿಸು ಡ್ಯಾಡಿ. ನನ್ನ ಸ್ನೇಹಿತರ ಜತೆಗೆ ಆಡಿಕೊಳ್ಳಬೇಕೆಂದಿದೆ, ಸ್ಕೂಲಿಗೆ ಹೋಗಬೇಕೆಂದಿದೆ. ಅಮ್ಮನ ಬಳಿ ಹಣವಿಲ್ಲ. ಚಿಕಿತ್ಸೆಗೆ ಹಣ ನೀನೇ ಕೊಡು. ದಯವಿಟ್ಟು ಈ ವಿಡಿಯೋ ನೋಡಿದ ಮೂರು ದಿನಗಳಲ್ಲಿ ಪ್ರತಿಕ್ರಿಯಿಸಿ. ನನ್ನ ಮೇಲೆ ದಯೆತೋರಿ. ಪ್ಲೀಸ್ ಡ್ಯಾಡಿ' ಎಂದು ಗೋಗರೆದಿದ್ದಾರೆ ಸಾಯಿಶ್ರೀ.

ಆದರೆ ಸಾಯಿಶ್ರೀ ಅಪ್ಪ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ನತದೃಷ್ಟ ಬಾಲಕಿ ನಿನ್ನೆ (ಭಾನುವಾರ) ಕೊನೆಯುಸಿರೆಳೆದಿದ್ದಳು. ತನ್ನ ಸಾವಿಗೆ ಕೇವಲ 10 ದಿನಗಳ ಮೊದಲು ಬಾಲಕಿ ತಂದೆಗೆ ಕಳುಹಿಸಿದ್ದ ಕರುಣಾಜನಕ ವೀಡಿಯೋ ಇಲ್ಲಿದೆ ನೋಡಿ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ