ವಿಜಯ್ ಮಲ್ಯ ಹಸ್ತಾಂತರ ಪ್ರಕ್ರಿಯೆ; ಯಾವ ಕ್ಷಣದಲ್ಲಿ ಬೇಕಾದರೂ ಮುಂಬೈಗೆ ಮದ್ಯದ ದೊರೆ
ಬ್ಯಾಂಕ್ಗಳಿಗೆ 9000 ಕೋಟಿ ರೂ. ಸಾಲ ಮಾಡಿ ಮರುಪಾವತಿಸದೇ ವಿದೇಶಕ್ಕೆ ಪರಾರಿಯಾಗಿದ್ದ ಮದ್ಯದ ದೊರೆ ವಿಜಯ್ ಮಲ್ಯ ಹಸ್ತಾಂತರ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ವಿಜಯ್ ಮಲ್ಯರನ್ನು ಮುಂಬೈಗೆ ಕರೆದುಕೊಂಡು ಬರುವ ಸಾಧ್ಯತೆ ಇದೆ.
IANS 3 Jun 2020, 11:02 pm
ಹೊಸದಿಲ್ಲಿ: ಇಂಗ್ಲೆಂಡ್ನಿಂದ ಮದ್ಯದ ದೊರೆ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಯಾವ ಕ್ಷಣದಲ್ಲಿ ಬೇಕಾದರೂ ಮಲ್ಯ ಮುಂಬೈಗೆ ಆಗಮಿಸುವ ಸಾಧ್ಯತೆ ಇದೆ. ಮುಂಬೈನಲ್ಲಿ ಮಲ್ಯ ವಿರುದ್ಧ ಪ್ರಕರಣ ದಾಖಲಾಗಿರುವುದರಿಂದ ಸಿಬಿಐ ಹಾಗೂ ಇಡಿ ಅಧಿಕಾರಿಗಳು ಉದ್ಯಮಿಯನ್ನು ಮುಂಬೈಗೆ ಕರೆದುಕೊಂಡು ಬರುತ್ತಾರೆ ಎಂದು ಮೂಲಗಳು ತಿಳಿಸಿವೆ.
ಭಾರತದಿಂದ ಪರಾರಿಯಾಗಿ ಇಂಗ್ಲೆಂಡ್ನಲ್ಲಿ ನೆಲೆಸಿದ್ದ ವಿಜಯ್ ಮಲ್ಯ ಜೊತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬರಲಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ಮಲ್ಯ ಆರೋಗ್ಯ ಪರಿಶೀಲನೆಗೆ ವೈದ್ಯಕೀಯ ತಂಡವನ್ನು ಕೂಡ ಸಿದ್ಧವಾಗಿ ಇಡಲಾಗಿದೆ.
ರಾತ್ರಿ ಮಲ್ಯ ಬಂದರೆ, ಸಿಬಿಐ ಕಚೇರಿಯಲ್ಲಿಯೇ ರಾತ್ರಿ ಕಳೆಯಬೇಕಾಗಿದ್ದು, ಮರುದಿನ ಕೋರ್ಟ್ಗೆ ಹಾಜರು ಪಡಿಸಲಾಗುತ್ತದೆ. ಹಗಲಿನಲ್ಲಿ ಬಂದರೆ ನೇರವಾಗಿ ಕೋರ್ಟ್ಗೆ ಹಾಜರು ಪಡಿಸಿ ಸಿಬಿಐ ವಶಕ್ಕೆ ಪಡೆಯಲಾಗುವುದು. ನಂತರ, ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದು ವಿಚಾರಣೆ ನಡೆಸಲಿದೆ.
ಆಗಸ್ಟ್ 2018ರಲ್ಲಿ ವಿಜಯ್ ಮಲ್ಯ ಅರ್ಜಿಯನ್ನು ಯುಕೆ ನ್ಯಾಯಾಲಯ ವಿಚಾರಣೆ ನಡೆಸುತ್ತಿದ್ದಾಗ, ಮಲ್ಯರನ್ನು ಹಸ್ತಾಂತರ ಮಾಡಿದರೆ ಯಾವ ಜೈಲಿನಲ್ಲಿ ಇಡುತ್ತೀರಾ ಎಂದು ಭಾರತೀಯ ತನಿಖಾ ದಳಗಳಿಗೆ ಕೇಳಿತ್ತು. ಆಗ ತನಿಖಾ ದಳದ ಅಧಿಕಾರಿಗಳು ಮುಂಬೈನ ಆರ್ಥೂರ್ ರಸ್ತೆಯ ಜೈಲಿನ ವಿಡಿಯೋವನ್ನು ಕೋರ್ಟ್ಗೆ ಸಲ್ಲಿಸಿ, ಅರ್ಥೂರ್ ರೋಡ್ ಜೈಲಿನಲ್ಲಿ ಮಲ್ಯರನ್ನು ಇರಿಸಲಾಗುತ್ತದೆ ಎಂದು ಹೇಳಿದ್ದರು.
ಕೋರ್ಟ್ ತೀರ್ಪು ನಿರಾಶೆ ತಂದಿದೆ; ಆದರೂ ಕಾನೂನು ಸಮರ ಮುಂದುವರಿಕೆ: ವಿಜಯ್ ಮಲ್ಯ
ಹಸ್ತಾಂತರ ಪ್ರಕ್ರಿಯೆಯ ನಂತರ ಮಲ್ಯರನ್ನು ಅರ್ಥೂರ್ ರೋಡ್ ಜೈಲಿನಲ್ಲಿರುವ ಉನ್ನತ ಭದ್ರತೆಯನ್ನು ಹೊಂದಿರುವ ಬ್ಯಾರಕ್ನಲ್ಲಿ ಇರಿಸಲಾಗುತ್ತದೆ ಎಂದು ತನಿಖಾ ದಳಗಳು ಯುಕೆ ಕೋರ್ಟ್ಗೆ ಮಾಹಿತಿ ನೀಡಿದ್ದವು. ಅರ್ಥೂರ್ ರಸ್ತೆ ಜೈಲಿನಲ್ಲಿ ನಟೋರಿಯಸ್ ಕ್ರಿಮಿನಲ್ಗಳು ಹಾಗೂ ಭಯೋತ್ಪಾದಕರನ್ನು ಇಡಲಾಗಿತ್ತು. 26/11 ಮುಂಬೈ ದಾಳಿಗೆ ಸಂಬಂಧಪಟ್ಟಂತೆ ಉಗ್ರ ಅಜ್ಮಲ್ ಕಸಬ್ನನ್ನು ಇದೇ ಜೈಲಿನ ಉನ್ನತ ಭದ್ರತಾ ಬ್ಯಾರಕ್ನಲ್ಲಿ ಇರಿಸಲಾಗಿತ್ತು.
ಮದ್ಯದ ದೊರೆ ವಿಜಯ ಮಲ್ಯಗೆ ಬಿಗ್ ರಿಲೀಫ್!
ಇನ್ನು, ಅಬೂ ಸಲೇಂ, ಛೋಟಾ ರಾಜನ್, ಮುಸ್ತಾಫಾ ದೊಸ್ಸಾ, ಪೀಟರ್ ಮುಖರ್ಜಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 13,500 ಕೋಟಿ ರೂ. ವಂಚಿಸಿದ ವಿಪುಲ್ ಅಂಬಾನಿಯನ್ನು ಕೂಡ ಇದೇ ಜೈಲಿನಲ್ಲಿ ಇಡಲಾಗಿತ್ತು. 14 ವಿವಿಧ ಬ್ಯಾಂಕ್ಗಳಿಗೆ ವಿಜಯ್ ಮಲ್ಯ 9 ಸಾವಿರ ಕೋಟಿ ರೂ.ಗಳ ಸಾಲ ಮರುಪಾವತಿಸದೇ ವಿದೇಶಕ್ಕೆ ಪರಾರಿಯಾಗಿದ್ದರು. ಮೇ 14ರಂದು ಲಂಡನ್ ಸುಪ್ರೀಂ ಕೋರ್ಟ್ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದು, ಭಾರತಕ್ಕೆ ಮಲ್ಯ ಹಸ್ತಾಂತರಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು.
ಭಾರತದಿಂದ ಪರಾರಿಯಾಗಿ ಇಂಗ್ಲೆಂಡ್ನಲ್ಲಿ ನೆಲೆಸಿದ್ದ ವಿಜಯ್ ಮಲ್ಯ ಜೊತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬರಲಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ಮಲ್ಯ ಆರೋಗ್ಯ ಪರಿಶೀಲನೆಗೆ ವೈದ್ಯಕೀಯ ತಂಡವನ್ನು ಕೂಡ ಸಿದ್ಧವಾಗಿ ಇಡಲಾಗಿದೆ.
ರಾತ್ರಿ ಮಲ್ಯ ಬಂದರೆ, ಸಿಬಿಐ ಕಚೇರಿಯಲ್ಲಿಯೇ ರಾತ್ರಿ ಕಳೆಯಬೇಕಾಗಿದ್ದು, ಮರುದಿನ ಕೋರ್ಟ್ಗೆ ಹಾಜರು ಪಡಿಸಲಾಗುತ್ತದೆ. ಹಗಲಿನಲ್ಲಿ ಬಂದರೆ ನೇರವಾಗಿ ಕೋರ್ಟ್ಗೆ ಹಾಜರು ಪಡಿಸಿ ಸಿಬಿಐ ವಶಕ್ಕೆ ಪಡೆಯಲಾಗುವುದು. ನಂತರ, ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದು ವಿಚಾರಣೆ ನಡೆಸಲಿದೆ.
ಆಗಸ್ಟ್ 2018ರಲ್ಲಿ ವಿಜಯ್ ಮಲ್ಯ ಅರ್ಜಿಯನ್ನು ಯುಕೆ ನ್ಯಾಯಾಲಯ ವಿಚಾರಣೆ ನಡೆಸುತ್ತಿದ್ದಾಗ, ಮಲ್ಯರನ್ನು ಹಸ್ತಾಂತರ ಮಾಡಿದರೆ ಯಾವ ಜೈಲಿನಲ್ಲಿ ಇಡುತ್ತೀರಾ ಎಂದು ಭಾರತೀಯ ತನಿಖಾ ದಳಗಳಿಗೆ ಕೇಳಿತ್ತು. ಆಗ ತನಿಖಾ ದಳದ ಅಧಿಕಾರಿಗಳು ಮುಂಬೈನ ಆರ್ಥೂರ್ ರಸ್ತೆಯ ಜೈಲಿನ ವಿಡಿಯೋವನ್ನು ಕೋರ್ಟ್ಗೆ ಸಲ್ಲಿಸಿ, ಅರ್ಥೂರ್ ರೋಡ್ ಜೈಲಿನಲ್ಲಿ ಮಲ್ಯರನ್ನು ಇರಿಸಲಾಗುತ್ತದೆ ಎಂದು ಹೇಳಿದ್ದರು.
ಕೋರ್ಟ್ ತೀರ್ಪು ನಿರಾಶೆ ತಂದಿದೆ; ಆದರೂ ಕಾನೂನು ಸಮರ ಮುಂದುವರಿಕೆ: ವಿಜಯ್ ಮಲ್ಯ
ಹಸ್ತಾಂತರ ಪ್ರಕ್ರಿಯೆಯ ನಂತರ ಮಲ್ಯರನ್ನು ಅರ್ಥೂರ್ ರೋಡ್ ಜೈಲಿನಲ್ಲಿರುವ ಉನ್ನತ ಭದ್ರತೆಯನ್ನು ಹೊಂದಿರುವ ಬ್ಯಾರಕ್ನಲ್ಲಿ ಇರಿಸಲಾಗುತ್ತದೆ ಎಂದು ತನಿಖಾ ದಳಗಳು ಯುಕೆ ಕೋರ್ಟ್ಗೆ ಮಾಹಿತಿ ನೀಡಿದ್ದವು. ಅರ್ಥೂರ್ ರಸ್ತೆ ಜೈಲಿನಲ್ಲಿ ನಟೋರಿಯಸ್ ಕ್ರಿಮಿನಲ್ಗಳು ಹಾಗೂ ಭಯೋತ್ಪಾದಕರನ್ನು ಇಡಲಾಗಿತ್ತು. 26/11 ಮುಂಬೈ ದಾಳಿಗೆ ಸಂಬಂಧಪಟ್ಟಂತೆ ಉಗ್ರ ಅಜ್ಮಲ್ ಕಸಬ್ನನ್ನು ಇದೇ ಜೈಲಿನ ಉನ್ನತ ಭದ್ರತಾ ಬ್ಯಾರಕ್ನಲ್ಲಿ ಇರಿಸಲಾಗಿತ್ತು.
ಮದ್ಯದ ದೊರೆ ವಿಜಯ ಮಲ್ಯಗೆ ಬಿಗ್ ರಿಲೀಫ್!
ಇನ್ನು, ಅಬೂ ಸಲೇಂ, ಛೋಟಾ ರಾಜನ್, ಮುಸ್ತಾಫಾ ದೊಸ್ಸಾ, ಪೀಟರ್ ಮುಖರ್ಜಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 13,500 ಕೋಟಿ ರೂ. ವಂಚಿಸಿದ ವಿಪುಲ್ ಅಂಬಾನಿಯನ್ನು ಕೂಡ ಇದೇ ಜೈಲಿನಲ್ಲಿ ಇಡಲಾಗಿತ್ತು. 14 ವಿವಿಧ ಬ್ಯಾಂಕ್ಗಳಿಗೆ ವಿಜಯ್ ಮಲ್ಯ 9 ಸಾವಿರ ಕೋಟಿ ರೂ.ಗಳ ಸಾಲ ಮರುಪಾವತಿಸದೇ ವಿದೇಶಕ್ಕೆ ಪರಾರಿಯಾಗಿದ್ದರು. ಮೇ 14ರಂದು ಲಂಡನ್ ಸುಪ್ರೀಂ ಕೋರ್ಟ್ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದು, ಭಾರತಕ್ಕೆ ಮಲ್ಯ ಹಸ್ತಾಂತರಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು.