ಆ್ಯಪ್ನಗರ

ಯುವತಿಗೆ ಕಿರುಕುಳ ನೀಡಿದ ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ಪುತ್ರನ ಬಂಧನ

ಸ್ನೇಹಿತನ ಜತೆ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 9 Aug 2017, 6:55 pm
ಹರಿಯಾಣ: ನಿವೃತ್ತ ಐಎಎಸ್‌ ಅಧಿಕಾರಿ ಪುತ್ರಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ಪ್ರಕರಣ ಸಂಬಂಧ ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್‌ ಬರಾಲಾ ಪುತ್ರ ವಿಕಾಸ್‌ ಬರಾಲಾ (23) ಹಾಗೂ ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web vikas arrested charged with abduction
ಯುವತಿಗೆ ಕಿರುಕುಳ ನೀಡಿದ ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ಪುತ್ರನ ಬಂಧನ


ನಿವೃತ್ತ ಐಎಎಸ್‌ ಅಧಿಕಾರಿ ಪುತ್ರಿ ವರ್ನಿಕಾ ಕುಂದು ಅವರನ್ನು ಕಳೆದ ಶುಕ್ರವಾರ ವಿಕಾಸ್‌ ಮತ್ತು ಆಶೀಷ್‌ ಕಾರಿನಲ್ಲಿ ಹಿಂಬಾಲಿಸಿ, ಕಿರುಕುಳ ನೀಡಿ ಅಪಹರಿಸಲು ಯತ್ನಿಸಿದ್ದರು ಎಂಬ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ಈ ಇಬ್ಬರು ಕಾರಿನಲ್ಲಿ ವರ್ನಿಕಾ ಅವರನ್ನು ಹಿಂಬಾಲಿಸಿದ್ದು ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾಗಿದೆ.

ವರ್ನಿಕಾ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಬುಧವಾರ ಇಬ್ಬರು ಪೊಲೀಸರು ವಿಚಾರಣೆ ನಡೆಸಲು ಸಮನ್ಸ್‌ ನೀಡಿದ್ದರು.

ವಿಚಾರಣೆಗೆ ಸಹಕರಿಸಲು ಹಾಗೂ ರಕ್ತ, ಮೂತ್ರ ಮಾದರಿಯನ್ನು ನೀಡಲು ವಿಕಾಸ್‌, ಆಶೀಶ್‌ ನಿರಾಕರಿಸಿದ್ದರು. ವಿಚಾರಣೆಗೆ ಸಹಕರಿಸದಿದ್ದರೆ ಬಂಧಿಸಬೇಕಾಗುತ್ತದೆ ಎಂದು ಚಂಡೀಗಢ ಡಿಜಿಪಿ ತೇಜಿಂದರ್‌ ಸಿಂಗ್‌ ಎಚ್ಚರಿಕೆ ನೀಡಿದರು.

ಇದರ ಬೆನ್ನಲ್ಲೇ ವಿಕಾಸ್‌ ಹಾಗೂ ಆಶೀಶ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇಬ್ಬರನ್ನೂ ಗುರುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Vikas Barala and other accused arrested, charged with abduction

NEW DELHI: Chandigarh Police arrested Haryana BJP chief's son Vikas Barala and his friend on Wednesday for allegedly stalking and attempting to kidnap a woman last week.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ