ಆ್ಯಪ್ನಗರ

ಯುಪಿ, ಹರಿಯಾಣ ಈಗ ಮಧ್ಯಪ್ರದೇಶ, ಮಹಾಕಾಳನ ದರ್ಶನ ಬಳಿಕ ಪಾತಕಿ ದುಬೆ ಶರಣಾಗತಿ?

ಉತ್ತರ ಪ್ರದೇಶದಿಂದ ಸುಮಾರು 600 ಕಿ.ಮೀ ದೂರದಲ್ಲಿರುವ ಮಧ್ಯಪ್ರದೇಶಕ್ಕೆ ದುಬೆ ತೆರಳಿದ್ದು ಹೇಗೆ? ಇಷ್ಟೆಲ್ಲ ಟೈಟ್‌ ಸೆಕ್ಯೂರಿಟಿ ನಡುವೆ ದುಬೆ ಎನ್ನುವ ಪಾತಕಿ ಎಸ್ಕೇಪ್‌ ಆಗುತ್ತಿದ್ದಿದ್ದು ಹೇಗೆ? ಇಲ್ಲಿದೆ ಈ ಬಗ್ಗೆ ಸ್ಚಾರಸ್ಯಕರ ಸಂಗತಿ.

Vijaya Karnataka Web 9 Jul 2020, 12:19 pm
ಉಜ್ಜಯಿನಿ: ಕಾನ್ಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 8 ಪೊಲೀಸರನ್ನು ಕೊಂದು ಪರಾರಿಯಾಗಿದ್ದ ಗ್ಯಾಂಗ್‌ಸ್ಟರ್‌ ವಿಕಾಸ್‌‌ ದುಬೆಯನ್ನ ಈಗ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬಂಧಿಸಲಾಗಿದೆ. ಮೂಲಗಳ ಪ್ರಕಾರ ಶರಣಾಗತಿಗೆ ಬಂದಿರುವುದಾಗಿ ಆತ ಹೇಳಿದ್ದ ಎನ್ನುವ ವಿಚಾರಗಳು ಕೂಡ ಕೇಳಿಬಂದಿದೆ. ಹಾಗಾದರೆ ಯುಪಿಯಿಂದ ಆರಂಭವಾದ ಪಾತಕಿಯ ಓಟ ನಂತರ ಹರಿಯಾಣ ಬಳಿಕ ಮಧ್ಯಪ್ರದೇಶದಲ್ಲಿ ಅಂತ್ಯವಾದ ಸ್ವಾರಸ್ಯಕರ ಸಂಗತಿ ಇಲ್ಲಿದೆ.
Vijaya Karnataka Web EcdgKHUWkAY5nzi


ಶರಣಾಗತಿಗೆ ಆಗಮಿಸಿದ್ದ ಪಾತಕಿ?
ಮಧ್ಯ ಪ್ರದೇಶದ ಉಜ್ಜಯಿನಿ ಬಳಿ ಇರುವ ಮಹಾಕಾಳ ದೇವಾಸ್ಥಾನಕ್ಕೆ ವಿಕಾಸ್‌ ದುಬೆ ಇಂದು ಮುಂಜಾನೆ ತೆರಳಿದ್ದಾನೆ. ಮುಂಜಾನೆಯಿಂದಲೇ ದೇವಾಸ್ಥಾನದ ಮುಂದೆ ಕುಳಿತ್ತಿದ್ದನಂತೆ ವಿಕಾಸ್‌. ಮಹಾಕಾಳನ ದರ್ಶನ ಕೂಡ ಪಡೆದಿದ್ದನಂತೆ. ಬೆಳಗ್ಗೆ ಸುಮಾರು 9 ಗಂಟೆಯಿಂದ ತಾನು ವಿಕಾಸ್‌ ದುಬೆ ಎಂದು ಜೋರಾಗಿ ಚೀರಾಡೋಕೆ ಆರಂಭಿಸಿದ್ದನಂತೆ. ಇದೆ ವೇಳೆ ಸ್ಥಳೀಯ ಮಾಧ್ಯಮದವರು ಸ್ಥಳದಲ್ಲಿ ಜಮಾಯಿಸಿದ್ದರಂತೆ. ತಾನು ಕಾನ್ಪುರದ ದುಬೆ ಎಂದು ಚೀರಾಡುತ್ತಿದ್ದನಂತೆ. ಅಲ್ಲದೇ ತಾನು ಶರಣಾಗತಿಗೆ ಬಂದಿರುವುದಾಗಿ ಮಾಧ್ಯಮಗಳಿಗೆ ಹೇಳಿದ್ದನಂತೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನನ್ನ ಬಂಧಿಸಿದ್ದಾರೆ.

ಉತ್ತರಪ್ರದೇಶ ಟು ಮಧ್ಯಪ್ರದೇಶ!
ಕೊನೆಗೂ ಪೊಲೀಸರ ರಕ್ತ ಹೀರಿದ ಪಾತಕಿ ವಿಕಾಸ್‌ ದುಬೆಯ ಬಂಧನವಾಗಿದೆ. ಆದ್ರೆ ಇಷ್ಟೇಲ್ಲಾ ಪೊಲೀಸರ ನಿಗಾ ಇದ್ದು, ಎಲ್ಲೆಡೆ ಸೆಕ್ಯೂರಿಟಿ ಇದ್ದು ಹೇಗೆ ದುಬೆ 600 ಕಿ.ಮೀ ದೂರದ ಮಧ್ಯ ಪ್ರದೇಶಕ್ಕೆ ಬಂದ ಎನ್ನವ ಸಂಶಯ ಎಲ್ಲರನ್ನು ಕಾಡುತ್ತಿದೆ. ಈಗಾಗಲೇ ಈತನ ಜೊತೆ ಹಲವು ಪೊಲೀಸರು ಲಿಂಕ್‌ ಹೊಂದಿದ್ದಾರೆ ಎನ್ನುವ ವಿಚಾರ ಬಯಲಾಗಿದೆ. ಇನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಎನ್‌ಕೌಂಟರ್‌ ಬಳಿಕ ಹರಿಯಾಣಕ್ಕೆ ಓಡಿ ಹೋದ ವಿಕಾಸ್‌ ದುಬೆ, ಫರಿದಾಬಾದ್‌ನ ಹೋಟೆಲೊಂದರಲ್ಲಿ ತಂಗಿದ್ದ.

8 ಪೊಲೀಸರನ್ನು ಕೊಂದು ಅಟ್ಟಹಾಸ ಮೆರೆದಿದ್ದ ರೌಡಿ ವಿಕಾಸ್‌ ದುಬೆ ಬಂಧನ!

ಅದು ಅಲ್ಲಿನ ಸಿಸಿ ಟವಿಯಲ್ಲಿ ಸೆರೆಯಾಗಿತ್ತು. ತದ ನಂತರ ಅಲ್ಲಿಂದ ದೆಹಲಿಗೆ ಹೋಗಿ ತಲೆಮರೆಸಿಕೊಳ್ಳುವ ಮಾಹಿತಿ ಸಿಕ್ಕಿದ ತಕ್ಷಣ ಪೊಲೀಸರು ಗಡಿಗಳಲ್ಲಿ ಟೈಟ್‌ ಸೆಕ್ಯೂರಿಟಿ ಮಾಡಿಸಿದ್ದಾರೆ. ಹೀಗಾಗಿ ದುಬೆ ಕಾರಿನ ಮೂಲಕ ಎಲ್ಲಾ ರಕ್ಷಣೆಯೊಂದಿಗೆ ಮಧ್ಯಪ್ರದೇಶಕ್ಕೆ ಓಡಿ ಹೋಗಿದ್ದಾನೆ ಎನ್ನಲಾಗಿದೆ. ಅಲ್ಲದೆ ಇನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಶರಣಾಗತಿಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ