ಆ್ಯಪ್ನಗರ

ಹೇಗೆ ? ಯಾಕೆ ನಡೀತು ರೌಡಿ ದುಬೆಯ ಎನ್‌ಕೌಂಟರ್‌? ಕಾರು ಪಲ್ಟಿ, ಪೊಲೀಸರ ಮೇಲೆ ಗುಂಡಿನ ದಾಳಿಯ ಇಂಟ್ರೆಸ್ಟಿಂಗ್‌ ಕಹಾನಿ!

ಕಳೆದ ಕೆಲವು ದಿನಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ದುಬೆಯನ್ನ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಪೊಲೀಸ್‌ ಹಾಗೂ ದುಬೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ದುಬೆ ಸಾವನಪ್ಪಿದ್ದಾನೆ. ಇದೀಗ ಈ ಘಟನೆ ಬಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ.

Vijaya Karnataka Web 10 Jul 2020, 9:24 am
ಕಳೆದ ಎಳು ದಿನಗಳಿಂದ ಕಳ್ಳ ಪೊಲೀಸ್‌ ಆಟವಾಡುತ್ತಿದ್ದ ವಿಕಾಸ್‌ ದುಬೆ ಅನ್ನೋ ಪಾತಕಿ ಜು. 9ರಂದು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳ ದೇವಾಲಯದಲ್ಲಿ ಬಂಧಿತನಾಗಿದ್ದಾನೆ. ಆದರೆ ಪೊಲೀಸರ ವಶವಾಗಿ , ಹೊತ್ತು ಮುಳುಗುವುದರೊಳಗೆ ಸಾವನಪ್ಪಿದ್ದಾನೆ. ಆದರೆ ಏಕಾಏಕಿ ಪೊಲೀಸರು ಆತನನ್ನ ಎನ್‌ಕೌಂಟರ್‌ ಮಾಡಲು ಕಾರಣವೇನು? ಕಾರು ಪಲ್ಟಿಯಿಂದಾಗಿ ಈ ಘಟನೆ ಹೇಗೆ ನಡೀತು ಅನ್ನುವ ಬಗ್ಗೆ ಇಂಚಿಂಚು ಮಾಹಿತಿ ಇಲ್ಲಿದೆ.
Vijaya Karnataka Web vikas dubey has been died in police encounter in uttar pradesh
ಹೇಗೆ ? ಯಾಕೆ ನಡೀತು ರೌಡಿ ದುಬೆಯ ಎನ್‌ಕೌಂಟರ್‌? ಕಾರು ಪಲ್ಟಿ, ಪೊಲೀಸರ ಮೇಲೆ ಗುಂಡಿನ ದಾಳಿಯ ಇಂಟ್ರೆಸ್ಟಿಂಗ್‌ ಕಹಾನಿ!



ಕಾರು ಪಲ್ಟಿ!

ವಿಕಾಸ್‌ ದುಬೆಯನ್ನ ಮಧ್ಯಪ್ರದೇಶ ಪೊಲೀಸರು, ಉತ್ತರ ಪ್ರದೇಶ ಪೊಲೀಸರಿಗೆ ಹಸ್ತಾಂತರಿಸಿದ ಹಿನ್ನೆಲೆ ಇಂದು ಮುಂಜಾನೆ ವಿಕಾಸ್‌ ದುಬೆಯನ್ನ ಪೊಲೀಸರು ಕಾನ್ಪುರಕ್ಕೆ ಕರೆತಂದಿದ್ದಾರೆ. ಮಧ್ಯಪ್ರದೇಶದ ಗಡಿ ದಾಟಿ ಉತ್ತರ ಪ್ರದೇಶಕ್ಕೆ ಪೊಲೀಸರ ವಾಹನ ಎಂಟ್ರಿಕೊಟ್ಟಿದೆ. ಆದರೆ ಮಳೆಯಿಂದಾಗಿ ರಸ್ತೆ ಸಂಪೂರ್ಣವಾಗಿ ತೊಯ್ದಿತ್ತು. ಅಲ್ಲದೇ ಮಳೆ ಕೂಡ ಬರುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ದುಬೆ ಇದ್ದ ಪೊಲೀಸರ ಬೆಂಗಾವಲು ವಾಹನ ಮಗುಚಿದೆ. ಮಗುಚಿ ಬಿದ್ದ ತಕ್ಷಣ ಪೊಲೀಸರೆಲ್ಲ ಅದರಿಂದ ಹೊರಬಂದಿದ್ದಾರೆ. ಹೆಗೋ ಸುಧಾರಿಸಿಕೊಂಡು ದುಬೆ ಕೂಡ ಹೊರಬಂದಿದ್ದಾನೆ. ಹೊರ ಬಂದ ದುಬೆ ತನ್ನ ನೈಜ ಮುಖವನ್ನ ಪೊಲೀಸರಿಗೆ ತೋರಿಸಿದ್ದಾನೆ. ಥೇಟ್‌ ಸಿನಿಮಾದ ರೀತಿಯಲ್ಲಿ ಅಲ್ಲಿ ಗಾಯಗೊಂಡು ನಿಂತಿದ್ದ ಪೊಲೀಸೊಬ್ಬರ ಪಿಸ್ತೂಲನ್ನ ಕಸಿದುಕೊಂಡಿದ್ದಾನೆ.

ಪಾತಕಿ ವಿಕಾಸ್‌ ದುಬೆ ಪೊಲೀಸ್‌ ಎನ್‌ಕೌಂಟರ್‌ಗೆ ಬಲಿ!

ವಿಕಾಸ್‌ ದುಬೆ

ರಿವಾಲ್ವರ್‌ನಿಂದ ದಾಳಿ!

ಪೊಲೀಸೊಬ್ಬರಿಂದ ರಿವಲ್ವಾರ್‌ ಕಿತ್ತುಕೊಂಡ ಡಾನ್ ದುಬೆ ಏಕಾಏಕಿ ಅಸಹಾಯಕರಾಗಿ ನಿಂತಿದ್ದ ಪೋಲಿಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಅಲ್ಲದೇ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಮೊದಲು ಪೊಲೀಸರು ಶರಣಾಗತಿಯಾಗುವಂತೆ ಸೂಚಿಸಿದ್ದಾರೆ. ಆದರೆ ಆತ ಮಾತು ಕೇಳದೆ ಪರಾರಿಯಾಗಲು ಯತ್ನಿಸುವುದರ ಜೊತೆಗೆ ಮತ್ತೆ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ. ದಿಕ್ಕು ತೋಚದೆ ತಮ್ಮ ರಕ್ಷಣೆಗಾಗಿ ಪೊಲೀಸರು ಕೂಡ ಆತನ ಮೇಲೆ ಗುಂಡು ಹಾರಿಸಿದ್ದಾರೆ. ನಾಲ್ಕೈದು ಪೊಲೀಸರು ಗುಂಡುಹಾರಿಸಿದಾಗ ತೀವ್ರ ಗಾಯಗೊಂಡ ದುಬೆಯನ್ನ ಪೊಲೀಸರು ತಕ್ಷಣ ಆಸ್ಪತ್ರೆಗೆ ಸಾಗಿಸಿದರು. ಆದರೆ ಇದು ಪ್ರಯೋಜನವಾಗಿಲ್ಲ. ಆಸ್ಪತ್ರೆಯಲ್ಲಿ ಆತ ಸಾವನಪ್ಪಿರುವ ಬಗ್ಗೆ ಪೊಲೀಸರು ಘೋಷಿಸಿದ್ದಾರೆ. ಇನ್ನು ಘಟನೆಯನ್ನ ನಾಲ್ಕು ಪೊಲೀಸರು ಕೂಡ ಗಂಭೀರ ಗಾಯಗೊಂಡಿರುವ ಬಗ್ಗೆ ಕಾನ್ಪುರ ಎಸ್‌ಪಿ ತಿಳಿಸಿದ್ದಾರೆ.

ಬಿಕ್ರೂ ಗ್ರಾಮದ ಗಬ್ಬರ್‌ ಸಿಂಗ್ ವಿಕಾಸ್‌ ದುಬೆ‌..! ನಟೋರಿಯಸ್‌ ರೌಡಿಯ ರಕ್ತಸಿಕ್ತ, ಸೈಕೋ ಇತಿಹಾಸ

ನಿನ್ನೆ ಸಿಕ್ಕಿ ಬಿದ್ದಿದ್ದ ಖದೀಮ!

ಕಳೆದ ಏಳು ದಿನಗಳಿಂದ ತಲೆ ಮರೆಸಿಕೊಂಡಿದ್ದ ರೌಡಿ ವಿಕಾಸ್‌ ದುಬೆ ಉತ್ತರ ಪ್ರದೇಶ ನಂತರ ಹರಿಯಾಣ ಬಳಿಕ ಮಧ್ಯ ಪ್ರದೇಶಕ್ಕೆ ಬಂದು ತಲುಪಿದ್ದ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ದೇವಾಲಯಕ್ಕೆ ದರುಶನಕ್ಕೆ ಎಂದು ತೆರಳಿದ್ದ. ಈ ವೇಳೆ ಅಲ್ಲಿನ ಸೆಕ್ಯೂರಿಟಿ ಗಾರ್ಡ್‌ಗಳು ಆತನನ್ನ ಹಿಡಿದಿಟ್ಟಿದ್ದಾರೆ. ನಂತರ ಮಧ್ಯಪ್ರದೇಶದ ಸ್ಥಳೀಯ ಪೊಲೀಸರು ಆತನನ್ನ ಬಂಧಿಸಿದ್ದರು. ಅದರ ನಂತರ ಉತ್ತರ ಪ್ರದೇಶದ ಪೊಲೀಸರಿಗೆ ಹಸ್ತಾಂತರಿಸಿದ್ದರು. ಈ ಹಿನ್ನೆಲೆ ಇಂದು ಮುಂಜಾನೆ ದುಬೆಯನ್ನ ಪೊಲೀಸರು ಕರೆದುಕೊಂಡು ಬಂದಿದ್ದರು.

ಯಾರೀತ 'ಕ್ರಿಮಿ'ನಲ್‌ ವಿಕಾಸ್‌ ದುಬೆ; ಇಲ್ಲಿದೆ ಫುಲ್‌ ಡಿಟೇಲ್ಸ್‌...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ