ಆ್ಯಪ್ನಗರ

ಖಾಕಿ ಖದರ್‌: ಯುಪಿಯಲ್ಲೇ ಇದ್ದಾನೆ ಡಾನ್‌ ವಿಕಾಸ್‌ ದುಬೆ, ಸಿಸಿಟಿವಿಯಲ್ಲಿ ಸೆರೆಯಾಯ್ತು 'ದಿ ಗ್ರೇಟ್ ಎಸ್ಕೇಪ್'‌!

8 ಪೊಲೀಸರ ಸಾವಿಗೆ ಕಾರಣವಾಗಿದ್ದ ಡಾನ್‌ ವಿಕಾಸ್‌ ದುಬೆ ಉತ್ತರ ಪ್ರದೇಶದ ಪೊಲೀಸ್‌ ಠಾಣೆಯಲ್ಲಿರುವುದು ಸ್ಪಷ್ಟವಾಗಿದೆ. ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರಿಗೆ ಆತ ಅಲ್ಲಿಂದ ಕಾಲ್ಕಿತ್ತಿದ್ದು ಸ್ಪಷ್ಟವಾಗಿ ತಿಳಿದಿದೆ. ಇನ್ನು ಆತನ ಚಲನವಲನ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಪೊಲೀಸರು ಇದನ್ನ ರಿವೀಲ್‌ ಮಾಡಿಲ್ಲ.

Vijaya Karnataka Web 8 Jul 2020, 1:05 pm
ಫರೀದಾಬಾದ್‌: ಸದ್ಯ ಉತ್ತರ ಪ್ರದೇಶದ ಪೊಲೀಸರಿಗೆ ಬೇಕಾಗಿರುವ ಪಾತಕಿ ವಿಕಾಸ್‌ ದುಬೆಗೆ ಗುಂಡೇಟಿನ ರುಚಿ ತೋರಿಸುವ ಮುನ್ನ ಸ್ವಲ್ಪದರಲ್ಲೇ ಎಸ್ಕೇಪ್‌ ಆಗಿರುವ ಘಟನೆ ನಡೆದಿದೆ. ಆದರೆ ಆತನ ಬಲಗೈ ಬಂಟನನ್ನ ಯಮಲೋಕಕ್ಕೆ ಕಳುಹಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾನ್ಪುರದಲ್ಲಿ ನಡೆದ ಪೊಲೀಸರ ಹತ್ಯಗೆ ಸಂಬಂಧಪಟ್ಟಂತೆ ದುಬೆಗೆ ಕೋಳ ತೊಡಿಸಲು ಪೊಲೀಸರು ದಶ ದಿಕ್ಕುಗಳಲ್ಲೂ ಬಲೆ ಬೀಸಿದ್ದಾರೆ.
Vijaya Karnataka Web vikas dubey spotted in faridabad hotel
ಖಾಕಿ ಖದರ್‌: ಯುಪಿಯಲ್ಲೇ ಇದ್ದಾನೆ ಡಾನ್‌ ವಿಕಾಸ್‌ ದುಬೆ, ಸಿಸಿಟಿವಿಯಲ್ಲಿ ಸೆರೆಯಾಯ್ತು 'ದಿ ಗ್ರೇಟ್ ಎಸ್ಕೇಪ್'‌!


ಈ ಹಿನ್ನೆಲೆ ಫರಿದಾಬಾದ್‌ನ ಹೋಟೆಲೊಂದರಲ್ಲಿ ದುಬೆ ಇರುವ ಮಾಹಿತಿ ಸಿಕ್ಕಿದ ತಕ್ಷಣ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ಕೊಂಚದರಲ್ಲೇ ವಿಕಾಸ್‌ ದುಬೆ ಸ್ಥಳದಿಂದ ಎಸ್ಕೇಪ್‌ ಆಗಿದ್ದಾನೆ. ಆದರೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ವಿಕಾಸ್‌ ದುಬೆಯ ಬಲಗೈ ಬಂಟ ಅಮರ್‌ ದುಬೆ ಫಿನೀಶ್‌ ಆಗಿದ್ದಾನೆ. ಅಲ್ಲದೇ ಆತನ ಮೂವರು ಸಹಚರರನ್ನ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸ್ಥಳ ಹಾಗೂ ಬಂಧಿತರಿಂದ ನಾಲ್ಕು ಪಿಸ್ತೂಲ್‌ ಸೇರಿ ವಿವಿಧ ವಸ್ತುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿಸಿಟಿವಿಯಲ್ಲಿ ಪಾತಕಿಯ ದೃಶ್ಯ!ಇನ್ನು ಫರೀದಾಬಾದ್‌ನಲ್ಲಿ ವಾಸ್ತವ್ಯ ಹೂಡಿದ್ದ ಪಾತಕಿ ವಿಕಾಸ್‌ ದುಬೆಯ ಚಲನವಲನಗಳು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆತ ಅಲ್ಲಿನ ಲಾಬಿಗೆ ಆಗಮಿಸಿ ಮಾತನಾಡುತ್ತಿರುವ ದೃಶ್ಯವಿದೆ. ಅಲ್ಲದೇ ಅಲ್ಲಿಂದ ಕಾಲ್ಕಿಳುವ ದೃಶ್ಯವು ಸೆರೆಯಾಗಿದೆ. ದಾಳಿ ಮಾಡುವ ಮಾಹಿತಿ ಸಿಕ್ಕಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ ದುಬೆ. ಸದ್ಯ ಯುಪಿ ಪೊಲೀಸರು ದೆಹಲಿ, ಫರೀದಾಬಾದ್‌ ಹಾಗೂ ಗುರುಗ್ರಾಮದಲ್ಲಿ ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನು ಇದೆ ವೇಳೆ ಯಪಿ ಪೊಲೀಸರು ಐದು ಲಕ್ಷ ವಿಕಾಸ್‌ ದುಬೆ ತಲೆಗೆ ಘೋಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ