ಆ್ಯಪ್ನಗರ

ಗ್ರಾಮಸ್ಥರೇ ದೇಣಿಗೆ ಸಂಗ್ರಹಿಸಿ ಸೇತುವೆ ನಿರ್ಮಾಣ: ಸರಕಾರದ ನಿರ್ಲಕ್ಷ್ಯಕ್ಕೆ ಚಾಟಿ ಬೀಸಿದ ಹಳ್ಳಿಗರು

ಕಳೆದ 30 ವರ್ಷಗಳಿಂದಲೂ ಒಂದು ಸೇತುವೆ ನಿರ್ಮಾಣಕ್ಕಾಗಿ ಇರಿಸಿದ್ದ ಬೇಡಿಕೆಯನ್ನು ಜನಪ್ರತಿನಿಧಿಗಳು ಮತ್ತು ಸರಕಾರ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿತಾವೇ ಖುದ್ದು ದೇಣಿಗೆ ಸಂಗ್ರಹಿಸಿ ಹೊಸ ಸೇತುವೆಯೊಂದನ್ನು ಅಚ್ಚುಕಟ್ಟಾಗಿ ಬಿಹಾರದ ಬುಧೌಲ್‌ ಗ್ರಾಮಸ್ಥರು ನಿರ್ಮಿಸಿದ್ದಾರೆ.

Vijaya Karnataka Web 18 Sep 2020, 10:11 pm
ಗಯಾ: ಕಳೆದ 30 ವರ್ಷಗಳಿಂದಲೂ ಒಂದು ಸೇತುವೆ ನಿರ್ಮಾಣಕ್ಕಾಗಿ ಇರಿಸಿದ್ದ ಬೇಡಿಕೆಯನ್ನು ಜನಪ್ರತಿನಿಧಿಗಳು ಮತ್ತು ಸರಕಾರ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿತಾವೇ ಖುದ್ದು ದೇಣಿಗೆ ಸಂಗ್ರಹಿಸಿ ಹೊಸ ಸೇತುವೆಯೊಂದನ್ನು ಅಚ್ಚುಕಟ್ಟಾಗಿ ಬಿಹಾರದ ಬುಧೌಲ್‌ ಗ್ರಾಮಸ್ಥರು ನಿರ್ಮಿಸಿದ್ದಾರೆ.
Vijaya Karnataka Web Bihar Budhaul bridge


''1992ರಿಂದಲೂ ಸೇತುವೆಯೊಂದನ್ನು ಕಟ್ಟಿಕೊಡುವಂತೆ ಮನವಿಗಳನ್ನು ಸಲ್ಲಿಸುತ್ತಲೇ ಇದ್ದೆವು. ಕಳೆದ ವರ್ಷ ನದಿಯಲ್ಲಿಮುಳುಗಿ ಇಬ್ಬರು ಬಾಲಕಿಯರ ಸಮೇತ ಮೂವರು ಬಲಿಯಾಗಿದ್ದರು. ಹಾಗಿದ್ದು ಸ್ಥಳೀಯ ಆಡಳಿತ ಹಾಗೂ ಸರಕಾರ ನಿರ್ಲಕ್ಷ್ಯ ತೋರುತ್ತಿತ್ತು.

ಕೊನೆಗೆ ಗ್ರಾಮಸ್ಥರೆಲ್ಲರೂ ಒಟ್ಟಾಗಿ ದೇಣಿಗೆ ಸಂಗ್ರಹಿಸಿ, ಇಟ್ಟಿಗೆ, ಕಬ್ಬಿಣ, ಸಿಮೆಂಟ್‌ಗಳನ್ನು ಕೂಡ ಸಂಗ್ರಹಿಸಿದೆವು. ಕೆಲವು ಗ್ರಾಮಸ್ಥರ ಜತೆಗೆ ಕಾರ್ಮಿಕರು ಸೇರಿಕೊಂಡು ಸೇತುವೆ ನಿರ್ಮಿಸಿದ್ದೇವೆ,'' ಎಂದು ಸ್ಥಳೀಯರೊಬ್ಬರು ಎಎನ್‌ಎ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ತಪ್ಪು ಮಾಹಿತಿ ನಂಬಿ ಮೋಸ ಹೋಗಬೇಡಿ: ರೈತರಿಗೆ ಪ್ರಧಾನಿ ಮೋದಿ ಮನವಿ

ಬುಧೌಲ್‌ ಮತ್ತು ಮದಾರ್‌ದಿಹ್‌ ಗ್ರಾಮಗಳ ನಡುವೆ ನಿರ್ಮಿಸಲಾಗಿರುವ ಈ ಸೇತುವೆ 110 ಅಡಿ ಉದ್ದ, 12 ಅಡಿ ಅಗಲವಿದೆ. ಸೇತುವೆ ಮಾರ್ಗದಿಂದಾಗಿ ಎರಡು ಗ್ರಾಮಗಳ ನಡುವಿನ ದೂರ ಸದ್ಯ ಕೇವಲ 1 ಕಿ.ಮೀ.ಗೆ ಇಳಿಕೆಯಾಗಿದೆ. ಈ ಮುನ್ನ 15 ಕಿ.ಮೀ. ದೂರ ಕ್ರಮಿಸಬೇಕಿತ್ತು.

ಪಿತ್ರೋಗಢ ಜಿಲ್ಲೆಯ ಸಭಾ ಗರ್ದಿ ಗ್ರಾಮದಲ್ಲಿಕೂಡ ಭಾರಿ ಮಳೆಯಿಂದಾಗಿ ಕಾಳಿ ನದಿ ಉಕ್ಕಿ ಹರಿದು ಸೇತುವೆ , ರಸ್ತೆಗಳು ಕೊಚ್ಚಿ ಹೋಗಿದ್ದರಿಂದ ಬಳಿಕ ಗ್ರಾಮಸ್ಥರೇ ಒಟ್ಟಾಗಿ ಮರದ ಕಟ್ಟಿಗೆಗಳಿಗೆ ತಾತ್ಕಾಲಿಕ ಸೇತುವೆಯೊಂದನ್ನು ನಿರ್ಮಿಸಿ ಗಮನಸೆಳೆದಿದ್ದರು.

ಕೊಚ್ಚಿ ಹೋದ ಸೇತುವೆ: ಬಿಹಾರದ ಕಿಶನ್‌ಗಂಜ್‌ ಜಿಲ್ಲೆಯಲ್ಲಿ ಸುಮಾರು 1.42 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಹೊಸ ಸೇತುವೆ ಕನ್‌ಕಾಯಿ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. 2019ರ ಜೂನ್‌ನಲ್ಲಿ ಸೇತುವೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. ಸುಮಾರು 12 ಗ್ರಾಮಗಳಿಗೆ ಈ ಸೇತುವೆ ಸಂಚಾರಕ್ಕೆ ಅನುಕೂಲ ಕಲ್ಪಿಸುತ್ತಿತ್ತು. ಸೇತುವೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಗ್ರಾಮೀಣಾಭಿವೃದ್ಧಿ ಇಲಾಖೆ ಎಂಜಿನಿಯರ್‌ಗಳು, ''ಇದೊಂದು ನೈಸರ್ಗಿಕ ವಿಕೋಪ,'' ಎಂದು ಜಾರಿಕೊಂಡಿದ್ದಾರೆ.

ಬಿಹಾರದಲ್ಲಿ ಐತಿಹಾಸಿಕ ಕೋಸಿ ರೈಲು ಮಹಾಸೇತುವೆಯನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ಕೋಸಿ ಸೇತುವೆ ಉದ್ಘಾಟನೆ
ಬಿಹಾರದಲ್ಲಿಐತಿಹಾಸಿಕ ಕೋಸಿ ರೈಲು ಮಹಾ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಾಷ್ಟ್ರಕ್ಕೆ ಸಮರ್ಪಿಸಿದರು. ಇದೇವೇಳೆ ಬಿಹಾರದಲ್ಲಿ ಹೊಸ ರೈಲು ಮಾರ್ಗಗಳು ಮತ್ತು ವಿದ್ಯುದ್ದೀಕರಣ ಯೋಜನೆಗಳು ಸೇರಿದಂತೆ ಒಟ್ಟು 3,000 ಕೋಟಿ ರೂ. ವೆಚ್ಚದ ಯೋಜನೆಗಳನ್ನು ಉದ್ಘಾಟಿಸಿದರು.

ಮಿಥಿಲಾ ಮತ್ತು ಕೋಸಿ ನಡುವೆ ಸಂಪರ್ಕ ಕಲ್ಪಿಸುವ ಕೋಸಿ ಮಹಾಸೇತುವೆ ಯೋಜನೆಯನ್ನು 2003ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಸಂಪುಟದಲ್ಲಿ ನಿತೀಶ್‌ಕುಮಾರ್‌ ಅವರು ರೈಲ್ವೆ ಸಚಿವರಾಗಿದ್ದಾಗ ರೂಪಿಸಲಾಗಿತ್ತು. ಈ ಸೇತುವೆ ನಿರ್ಮಾಣದಿಂದ 300 ಕಿ.ಮೀ ದೂರದ ರೈಲು ಮಾರ್ಗವು ಈಗ 22 ಕಿ.ಮೀಗೆ ಇಳಿದಿದೆ. ''ಬಿಹಾರದಲ್ಲಿ 85 ವರ್ಷ ಹಿಂದೆ ಸಂಭವಿಸಿದ ಭೂಕಂಪದಿಂದ ಮಿಥಿಲಾ ಮತ್ತು ಕೋಸಿ ನಡುವೆ ಸಂಪರ್ಕ ಕಡಿದುಹೋಗಿತ್ತು.

ಈಗ ಕೊರೊನಾ ಸಂಕಷ್ಟದ ಸಮಯದಲ್ಲಿಎರಡೂ ಪ್ರದೇಶಗಳ ನಡುವೆ ಸಂಪರ್ಕ ಏರ್ಪಟ್ಟಿರುವುದು ಕಾಕತಾಳೀಯ,'' ಎಂದು ಪ್ರಧಾನಿ ಹೇಳಿದರು. ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ನಿರೀಕ್ಷೆಯಲ್ಲಿರುವ ಬಿಹಾರಕ್ಕೆ ಕೇಂದ್ರ ಸರಕಾರ ಕೆಲದಿನಗಳ ಹಿಂದೆ ಏಮ್ಸ್‌ ಕೊಡುಗೆ ಘೋಷಿಸಿದೆ. ಖುದ್ದು ಪ್ರಧಾನಿಯವರು ಒಂದು ವಾರದ ಅವಧಿಯಲ್ಲಿ ಸುಮಾರು 16,000 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಚಾಲನೆ ಮತ್ತು ಉದ್ಘಾಟನೆ ನೆರವೇರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ