ಆ್ಯಪ್ನಗರ

ಗೋ ಹತ್ಯೆ: ಅಖ್ಲಾಕ್ ಕುಟುಂಬದ ವಿರುದ್ಧ ಗ್ರಾಮಸ್ಥರು ಕೋರ್ಟ್‌ಗೆ

ಗೋಹತ್ಯೆ ಆರೋಪದಡಿ ಬಿಸದ ನಿವಾಸಿಗಳು ಮೊಹಮ್ಮದ್ ಅಖ್ಲಾಕ್ ಕುಟುಂಬದ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಏಜೆನ್ಸೀಸ್ 10 Jun 2016, 12:28 pm
ನೋಯ್ಡಾ: ಗೋಹತ್ಯೆ ಆರೋಪದಡಿ ಬಿಸದ ನಿವಾಸಿಗಳು ಮೊಹಮ್ಮದ್ ಅಖ್ಲಾಕ್ ಕುಟುಂಬದ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.
Vijaya Karnataka Web villagers move court against akhlaqs family
ಗೋ ಹತ್ಯೆ: ಅಖ್ಲಾಕ್ ಕುಟುಂಬದ ವಿರುದ್ಧ ಗ್ರಾಮಸ್ಥರು ಕೋರ್ಟ್‌ಗೆ


ನಿವಾಸಿಗಳು ಗೌತಮ್ ಬುದ್ಧ ನಗರದ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರಿಗೆ ಮನವಿ ಸಲ್ಲಿಸಿ, ಅಖ್ಲಾಕ್ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.

ಮನವಿಯ ವಿಚಾರಣೆಯನ್ನು ಕೋರ್ಟ್‌ ಜೂನ್ 13ಕ್ಕೆ ಕಾದಿರಿಸಿದೆ. ಅಖ್ಲಾಕ್‌ ಅವರ ಮನೆಯಲ್ಲಿದ್ದ ಮಾಂಸ ಹಸುವಿನದು ಎಂಬುದು ವಿಧಿ ವಿಜ್ಞಾನ ಪರೀಕ್ಷೆ ವರದಿಯಲ್ಲಿ ತಿಳಿದು ಬಂದಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರಕರಣ ದಾಖಲಿಸಿರುವುದಾಗಿ ಬಿಜೆಪಿ ಬಿಜೆಪಿ ಕಾರ್ಯಕರ್ತ ಸಂಜಯ್ ರಾಣಾ ಹೇಳಿದ್ದಾರೆ.

ಅಖ್ಲಾಕ್ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಲು ಅಖ್ಲಾಕ್ ಹತ್ಯೆ ಆರೋಪಿಗಳು ಪೊಲೀಸ್ ಠಾಣೆಗೆ ಹೋದರೂ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ. ಹೀಗಾಗಿ ಕೋರ್ಟ್‌ ಮೊರೆ ಹೋಗಿರುವುದಾಗಿ ಆರೋಪಿಗಳ ಕುಟುಂಬಸ್ಥರು ಹೇಳಿದ್ದಾರೆ.

ಕಳೆದ ಸೆಪ್ಟಂಬರ್‌ನಲ್ಲಿ ಮನೆಯಲ್ಲಿ ಗೋ ಮಾಂಸಕ್ಕೆ ಇದೆ ಎಂಬ ವದಂತಿ ಹರಡಿ ಭುಗಿಲೆದ್ದ ಗಲಭೆಯಲ್ಲಿ ಕೆಲವು ಯುವಕರು ಅಖ್ಲಾಕ್ ಅವರನ್ನು ಥಳಿಸಿ ಸಾಯಿಸಿದ್ದರು.

ಅಖ್ಲಾಕ್ ಅವರ ಮನೆಯ ಹೊರಗಿನ ಟ್ರಾನ್ಸ್ ಫಾರ್ಮರ್ ಹತ್ತಿರ ಮಾಂಸ ಇತ್ತು. ಆದರೆ ಅದರಿಂದ ಅವರ ಕುಟುಂಬವನ್ನು ಗೋ ಹಂತಕರೆಂದು ಸಾಬೀತು ಪಡಿಸಲು ಆಗದು ಎಂಬುದು ಪೊಲೀಸರ ಅಭಿಪ್ರಾಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ