ಆ್ಯಪ್ನಗರ

ವಿನೋದ್‌ ಖನ್ನಾ ನಿಧನ ವದಂತಿ: ಬಿಜೆಪಿ ಶೋಕಾಚರಣೆ!

ಅನಾರೋಗ್ಯದಿಂದ ಮುಂಬಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್‌ ಹಿರಿಯ ನಟ ವಿನೋದ್‌ ಖನ್ನಾ ನಿಧನರಾಗಿದ್ದಾರೆ ಎಂಬ ವದಂತಿಯನ್ನು ನಂಬಿ ಮೇಘಾಲಯದ ಬಿಜೆಪಿ ನಾಯಕರು ಶೋಕಾಚರಣೆ ಮಾಡಿದ್ದಾರೆ.

ವಿಕ ಸುದ್ದಿಲೋಕ 10 Apr 2017, 1:19 pm
ಇಂಫಾಲ: ಅನಾರೋಗ್ಯದಿಂದ ಮುಂಬಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್‌ ಹಿರಿಯ ನಟ ವಿನೋದ್‌ ಖನ್ನಾ ನಿಧನರಾಗಿದ್ದಾರೆ ಎಂಬ ವದಂತಿಯನ್ನು ನಂಬಿ ಮೇಘಾಲಯದ ಬಿಜೆಪಿ ನಾಯಕರು ಶೋಕಾಚರಣೆ ಮಾಡಿದ್ದಾರೆ.
Vijaya Karnataka Web vinod khanna death rumours meghalaya bjp observes silence
ವಿನೋದ್‌ ಖನ್ನಾ ನಿಧನ ವದಂತಿ: ಬಿಜೆಪಿ ಶೋಕಾಚರಣೆ!


ವಿನೋದ್‌ ಖನ್ನಾ ತೀವ್ರ ಅಸ್ವಸ್ಥರಾಗಿ ಕಾಣುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವೈರಲ್‌ ಆಗಿತ್ತು. ಅದರ ಬೆನ್ನಿಗೇ ಅವರು ಮೃತಪಟ್ಟಿದ್ದಾರೆ ಎಂಬ ವದಂತಿ ಶನಿವಾರ ಕೆಲವೆಡೆ ಹರಿದಾಡಿತು. ಅದನ್ನೇ ನಂಬಿದ ಮೇಘಾಲಯ ಬಿಜೆಪಿ ಪದಾಧಿಕಾರಿಗಳು ನಟ ಜೀವಂತವಾಗಿರುವಾಗಲೇ ಶೋಕಾಚರಣೆ ಕಾರ್ಯಕ್ರಮ ನಡೆಸಿದ್ದಾರೆ.

ಕ್ಷಮೆ ಕೋರಿದ ಬಿಜೆಪಿ:

ಖನ್ನಾ ಅವರು ಮೃತಪಟ್ಟಿರುವುದಾಗಿ ಟಿವಿ ಚಾನೆಲ್‌ಗಳಲ್ಲಿ ಸುದ್ದಿ ಪ್ರಸಾರವಾಗಿದೆ ಎಂದು ಪಕ್ಷದ ಕೆಲ ಸದಸ್ಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಅದನ್ನು ಖಚಿತಪಡಿಸಿಕೊಳ್ಳದೆ ನಂಬಿದ್ದರಿಂದ ಈ ಅಚಾತುರ್ಯ ನಡೆದಿದೆ ಎಂದು ಬಿಜೆಪಿ ಬಳಿಕ ಸ್ಪಷ್ಟೀಕರಣ ನೀಡಿದೆ. ಅಲ್ಲದೆ, ಪ್ರಮಾದಕ್ಕಾಗಿ ಕ್ಷಮೆಯಾಚನೆ ಮಾಡಿರುವ ಬಿಜೆಪಿ, ನಟ ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿರುವುದಾಗಿಯೂ ಹೇಳಿದೆ.

ಹಿರಿಯ ನಟ ವಿನೋದ್‌ ಖನ್ನಾ ಬಿಜೆಪಿಯ ಸಂಸದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ