ಕೋವಿಡ್ ನಿಯಮ ಉಲ್ಲಂಘನೆ: ಸಿಂಗಾಪುರದಿಂದ 10 ಭಾರತೀಯರ ಗಡಿಪಾರು!
ಸಿಂಗಾಪುರದಲ್ಲಿ ಸೋಂಕು ದಿನೇ ದಿನೆ ಹೆಚ್ಚುತ್ತಿದ್ದ ಸಂದರ್ಭದಲ್ಲಿ ಕಡಿವಾಣ ಹಾಕಲು ಏಪ್ರಿಲ್ 7ರಂದೇ ಇಲ್ಲಿ ಅಗತ್ಯ ಸೇವೆಗಳ ಹೊರತುಪಡಿಸಿ ಉಳಿದೆಲ್ಲದ್ದಕ್ಕೂ ನಿರ್ಬಂಧ ಹೇರಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿತ್ತು.
Agencies 13 Jul 2020, 9:42 pm
ಸಿಂಗಾಪುರ: ಕೋವಿಡ್ ಪ್ರಸರಣ ತಡೆ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ವಿದ್ಯಾರ್ಥಿಗಳೂ ಸೇರಿ 10 ಭಾರತೀಯರನ್ನು ಸಿಂಗಾಪುರ ಸರಕಾರ ಭಾರತಕ್ಕೆ ಗಡಿಪಾರು ಮಾಡಿದೆ. ಅಲ್ಲದೇ ಇವರಿಗೆ ಮತ್ತೆ ಸಿಂಗಾಪುರ ಪ್ರವೇಶಿಸದಂತೆ ನಿಷೇಧ ಹೇರಿದೆ.
ಸಿಂಗಾಪುರದಲ್ಲಿ ಇದುವರೆಗೂ 45,961 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಸೋಂಕು ದಿನೇ ದಿನೆ ಹೆಚ್ಚುತ್ತಿದ್ದ ಸಂದರ್ಭದಲ್ಲಿ ಕಡಿವಾಣ ಹಾಕಲು ಏಪ್ರಿಲ್ 7ರಂದೇ ಇಲ್ಲಿ ಅಗತ್ಯ ಸೇವೆಗಳ ಹೊರತುಪಡಿಸಿ ಉಳಿದೆಲ್ಲದ್ದಕ್ಕೂ ನಿರ್ಬಂಧ ಹೇರಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿತ್ತು.
ಆದರೆ ಮೇ 5ರಂದು ಕಿಮ್ ಕೀಟ್ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಬಾಡಿಗೆಗೆ ತಂಗಿದ್ದ ನವದೀಪ್ ಸಿಂಗ್(20), ಸಜನ್ದೀಪ್(21), ಅವಿನಾಶ್ ಕೌರ್(27) ಎಂಬ ವಿದ್ಯಾರ್ಥಿಗಳು ಒಬ್ಬ ಮಹಿಳೆ ಸೇರಿ ಏಳು ಜನರನ್ನು ಮನೆಗೆ ಆಹ್ವಾನಿಸಿ ಪಾರ್ಟಿ ಮಾಡಿದ್ದರು. ಸಾಮಾಜಿಕ ಅಂತರ ನಿಯಮ ಉಲ್ಲಂಘನೆ ಆರೋಪದ ಮೇರೆಗೆ ಇವರ ಮೇಲೆ ಪೊಲೀಸರು ಕೋವಿಡ್ ತಾತ್ಕಾಲಿಕ ತಡೆ ಕಾಯಿದೆಯಡಿ ಕ್ರಮ ಕೈಗೊಂಡು ದಂಡ ವಿಧಿಸಿದ್ದರು.
ಮಾನವನ ಮೇಲೆ ಕೊರೊನಾ ಲಸಿಕೆ ಪ್ರಯೋಗದಲ್ಲಿ ರಷ್ಯಾ ಯಶಸ್ವಿ! ಜಗತ್ತಿನ ಮೊದಲ ಲಸಿಕೆ ಸಿದ್ದ?
ವಿಚಾರಣೆ ವೇಳೆ ತಪ್ಪೊಪ್ಪಿಕೊಂಡು ಶಿಕ್ಷೆ ಅನುಭವಿಸಿದ್ದರು. ಶಿಕ್ಷೆ ಪೂರ್ಣಗೊಂಡ ಬಳಿಕ ಈ 10 ಜನರು ಹೊಂದಿದ್ದ ಕೆಲಸದ ಪಾಸ್ಗಳನ್ನು ರದ್ದುಪಡಿಸಿ, ಅವರನ್ನು ಭಾರತಕ್ಕೆ ಗಡಿಪಾರು ಮಾಡಲಾಗಿದೆ ಎಂದು ಸಿಂಗಾಪುರ ಸರಕಾರ ತಿಳಿಸಿದೆ.
ಸಿಂಗಾಪುರದಲ್ಲಿ ಇದುವರೆಗೂ 45,961 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಸೋಂಕು ದಿನೇ ದಿನೆ ಹೆಚ್ಚುತ್ತಿದ್ದ ಸಂದರ್ಭದಲ್ಲಿ ಕಡಿವಾಣ ಹಾಕಲು ಏಪ್ರಿಲ್ 7ರಂದೇ ಇಲ್ಲಿ ಅಗತ್ಯ ಸೇವೆಗಳ ಹೊರತುಪಡಿಸಿ ಉಳಿದೆಲ್ಲದ್ದಕ್ಕೂ ನಿರ್ಬಂಧ ಹೇರಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿತ್ತು.
ಆದರೆ ಮೇ 5ರಂದು ಕಿಮ್ ಕೀಟ್ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಬಾಡಿಗೆಗೆ ತಂಗಿದ್ದ ನವದೀಪ್ ಸಿಂಗ್(20), ಸಜನ್ದೀಪ್(21), ಅವಿನಾಶ್ ಕೌರ್(27) ಎಂಬ ವಿದ್ಯಾರ್ಥಿಗಳು ಒಬ್ಬ ಮಹಿಳೆ ಸೇರಿ ಏಳು ಜನರನ್ನು ಮನೆಗೆ ಆಹ್ವಾನಿಸಿ ಪಾರ್ಟಿ ಮಾಡಿದ್ದರು. ಸಾಮಾಜಿಕ ಅಂತರ ನಿಯಮ ಉಲ್ಲಂಘನೆ ಆರೋಪದ ಮೇರೆಗೆ ಇವರ ಮೇಲೆ ಪೊಲೀಸರು ಕೋವಿಡ್ ತಾತ್ಕಾಲಿಕ ತಡೆ ಕಾಯಿದೆಯಡಿ ಕ್ರಮ ಕೈಗೊಂಡು ದಂಡ ವಿಧಿಸಿದ್ದರು.
ಮಾನವನ ಮೇಲೆ ಕೊರೊನಾ ಲಸಿಕೆ ಪ್ರಯೋಗದಲ್ಲಿ ರಷ್ಯಾ ಯಶಸ್ವಿ! ಜಗತ್ತಿನ ಮೊದಲ ಲಸಿಕೆ ಸಿದ್ದ?
ವಿಚಾರಣೆ ವೇಳೆ ತಪ್ಪೊಪ್ಪಿಕೊಂಡು ಶಿಕ್ಷೆ ಅನುಭವಿಸಿದ್ದರು. ಶಿಕ್ಷೆ ಪೂರ್ಣಗೊಂಡ ಬಳಿಕ ಈ 10 ಜನರು ಹೊಂದಿದ್ದ ಕೆಲಸದ ಪಾಸ್ಗಳನ್ನು ರದ್ದುಪಡಿಸಿ, ಅವರನ್ನು ಭಾರತಕ್ಕೆ ಗಡಿಪಾರು ಮಾಡಲಾಗಿದೆ ಎಂದು ಸಿಂಗಾಪುರ ಸರಕಾರ ತಿಳಿಸಿದೆ.