ಕೋಲ್ಕತಾ: ವಿಧಾನಸಭೆ ಉಪ ಚುನಾವಣೆಯ ಮುನ್ನ ದಿನವೇ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾರ್ಯಕರ್ತರ ನಡುವೆ ಹಿಂಸಾಚಾರ ಭುಗಿಲೆದಿದ್ದೆ.
ಇಲ್ಲಿಯ ಭಟ್ಪರಾ ಪ್ರದೇಶದಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಅಷ್ಟೆ ಅಲ್ಲದೆ, ಗುಂಡಿನ ದಾಳಿ ಮತ್ತು ಬಾಂಬ್ ಎಸೆದ ಘಟನೆಗಳಿಗೂ ಸಹ ಪಶ್ಚಿಮ ಸಾಕ್ಷಿಯಾಗಿದೆ.
ಭಾರಿ ಹಿಂಸಾಚಾರದಲ್ಲಿ ಅನೇಕ ವಾಹನಗಳು ಬೆಂಕಿಗಾಹುತಿಯಾಗಿರು ಬಗ್ಗೆ ವರದಿಯಾಗಿದೆ.
ಬಂಗಾಳದಲ್ಲಿ ನಿರ್ಣಾಯಕ ಕದನ
ಪಶ್ಚಿಮ ಬಂಗಾಳದಲ್ಲಿ ಕೊನೆಯ ಹಂತದ ಚುನಾವಣೆಯನ್ನು ಬಿಜೆಪಿ ಮತ್ತು ಆಡಳಿತಾರೂಢ ಟಿಎಂಸಿ ಪಾಲಿಗೆ ಮಾಡು ಇಲ್ಲವೇ ಮಡಿ ಹೋರಾಟ ಎಂದು ಬಿಂಬಿಸಲಾಗಿದೆ. ಈ ಬಾರಿ ಚುನಾವಣೆ ಎದುರಿಸಲಿರುವ 9 ಕ್ಷೇತ್ರಗಳ ಪೈಕಿ ಬಹುತೇಕ ಕಡೆ ಟಿಎಂಸಿ ಪ್ರಾಬಲ್ಯವಿದ್ದು, ಬಿಜೆಪಿ ಇವುಗಳನ್ನು ತೆಕ್ಕೆಗೆ ಹಾಕಿಕೊಳ್ಳುವ ಹವಣಿಕೆಯಲ್ಲಿರುವುದರಿಂದ ಉಭಯ ಪಕ್ಷಗಳ ನಡುವೆ ತೀವ್ರ ಜಿದ್ದಾಜಿದ್ದಿ ಪೈಪೋಟಿ ನಡೆಯಲಿದೆ. 7ನೇ ಹಂತದ ಚುನಾವಣೆಯ ಪ್ರಚಾರದಲ್ಲಿ ಬಿಜೆಪಿ-ಟಿಎಂಸಿ ನಡುವೆ ಜಟಾಪಟಿ ನಡೆದದ್ದೂ ಇದೇ ಕಾರಣಕ್ಕಾಗಿಯೇ. 8 ಸ್ಥಾನಗಳ ಪೈಕಿ ಜಾಧವಪುರ ಹೊರತುಪಡಿಸಿ ಉಳಿದ 7 ಕಡೆ ಬಿಜೆಪಿ-ಟಿಎಂಸಿ ಜತೆಗೆ ಕಾಂಗ್ರೆಸ್ ಮತ್ತು ಎಡಪಕ್ಷಗಳೂ ಸಮರಕ್ಕಿಳಿದಿರುವುದರಿಂದ ಪೈಪೋಟಿ ಮತ್ತಷ್ಟು ಜೋರಾಗಿದೆ. ಮಮತಾ ಬ್ಯಾನರ್ಜಿ ಅವರ ಸೋದರ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ಸ್ಪರ್ಧೆಯಿಂದಾಗಿ ಕೋಲ್ಕೊತಾದ ಡೈಮಂಡ್ ಹಾರ್ಬರ್ ಕ್ಷೇತ್ರ ಕುತೂಹಲ ಮೂಡಿಸಿದೆ.
ಭಾರಿ ಭದ್ರತೆ: ಹಿಂದೆ ನಡೆದ ಎಲ್ಲಾ ಹಂತಗಳ ಚುನಾವಣೆಯಲ್ಲೂ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಈ ಬಾರಿಯೂ ಪ.ಬಂಗಾಳದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಅರೆಸೇನಾ ಪಡೆಗಳ 800 ತುಕಡಿಗಳನ್ನು 9 ಕ್ಷೇತ್ರಗಳಲ್ಲೂ ನಿಯೋಜಿಸಲಾಗಿದೆ.
ಇಲ್ಲಿಯ ಭಟ್ಪರಾ ಪ್ರದೇಶದಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಅಷ್ಟೆ ಅಲ್ಲದೆ, ಗುಂಡಿನ ದಾಳಿ ಮತ್ತು ಬಾಂಬ್ ಎಸೆದ ಘಟನೆಗಳಿಗೂ ಸಹ ಪಶ್ಚಿಮ ಸಾಕ್ಷಿಯಾಗಿದೆ.
ಭಾರಿ ಹಿಂಸಾಚಾರದಲ್ಲಿ ಅನೇಕ ವಾಹನಗಳು ಬೆಂಕಿಗಾಹುತಿಯಾಗಿರು ಬಗ್ಗೆ ವರದಿಯಾಗಿದೆ.
ಬಂಗಾಳದಲ್ಲಿ ನಿರ್ಣಾಯಕ ಕದನ
ಪಶ್ಚಿಮ ಬಂಗಾಳದಲ್ಲಿ ಕೊನೆಯ ಹಂತದ ಚುನಾವಣೆಯನ್ನು ಬಿಜೆಪಿ ಮತ್ತು ಆಡಳಿತಾರೂಢ ಟಿಎಂಸಿ ಪಾಲಿಗೆ ಮಾಡು ಇಲ್ಲವೇ ಮಡಿ ಹೋರಾಟ ಎಂದು ಬಿಂಬಿಸಲಾಗಿದೆ. ಈ ಬಾರಿ ಚುನಾವಣೆ ಎದುರಿಸಲಿರುವ 9 ಕ್ಷೇತ್ರಗಳ ಪೈಕಿ ಬಹುತೇಕ ಕಡೆ ಟಿಎಂಸಿ ಪ್ರಾಬಲ್ಯವಿದ್ದು, ಬಿಜೆಪಿ ಇವುಗಳನ್ನು ತೆಕ್ಕೆಗೆ ಹಾಕಿಕೊಳ್ಳುವ ಹವಣಿಕೆಯಲ್ಲಿರುವುದರಿಂದ ಉಭಯ ಪಕ್ಷಗಳ ನಡುವೆ ತೀವ್ರ ಜಿದ್ದಾಜಿದ್ದಿ ಪೈಪೋಟಿ ನಡೆಯಲಿದೆ. 7ನೇ ಹಂತದ ಚುನಾವಣೆಯ ಪ್ರಚಾರದಲ್ಲಿ ಬಿಜೆಪಿ-ಟಿಎಂಸಿ ನಡುವೆ ಜಟಾಪಟಿ ನಡೆದದ್ದೂ ಇದೇ ಕಾರಣಕ್ಕಾಗಿಯೇ. 8 ಸ್ಥಾನಗಳ ಪೈಕಿ ಜಾಧವಪುರ ಹೊರತುಪಡಿಸಿ ಉಳಿದ 7 ಕಡೆ ಬಿಜೆಪಿ-ಟಿಎಂಸಿ ಜತೆಗೆ ಕಾಂಗ್ರೆಸ್ ಮತ್ತು ಎಡಪಕ್ಷಗಳೂ ಸಮರಕ್ಕಿಳಿದಿರುವುದರಿಂದ ಪೈಪೋಟಿ ಮತ್ತಷ್ಟು ಜೋರಾಗಿದೆ. ಮಮತಾ ಬ್ಯಾನರ್ಜಿ ಅವರ ಸೋದರ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ಸ್ಪರ್ಧೆಯಿಂದಾಗಿ ಕೋಲ್ಕೊತಾದ ಡೈಮಂಡ್ ಹಾರ್ಬರ್ ಕ್ಷೇತ್ರ ಕುತೂಹಲ ಮೂಡಿಸಿದೆ.
ಭಾರಿ ಭದ್ರತೆ: ಹಿಂದೆ ನಡೆದ ಎಲ್ಲಾ ಹಂತಗಳ ಚುನಾವಣೆಯಲ್ಲೂ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಈ ಬಾರಿಯೂ ಪ.ಬಂಗಾಳದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಅರೆಸೇನಾ ಪಡೆಗಳ 800 ತುಕಡಿಗಳನ್ನು 9 ಕ್ಷೇತ್ರಗಳಲ್ಲೂ ನಿಯೋಜಿಸಲಾಗಿದೆ.