ಆ್ಯಪ್ನಗರ

ಅವಳಿ ಮಕ್ಕಳ ಹತ್ಯೆ: ಚಿತ್ರಕೂಟದಲ್ಲಿ ಹಿಂಸಾತ್ಮಕ ಪ್ರತಿಭಟನೆ; ಕರ್ಫ್ಯೂ ಜಾರಿ

ಬೀದಿಗಿಳಿದು ಪ್ರತಿಭಟಿಸಿದ ಸ್ಥಳೀಯರು ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾಳುಗೆಡವಿದ್ದಾರೆ. ಆರೋಪಿಗಳಲ್ಲೊಬ್ಬನಾದ ಪದ್ಮ್ ಶುಕ್ಲನ ಸಂಬಂಧಿಯನ್ನು ಹಿಡಿದು ಥಳಿಸಲಾಗಿದೆ.

TIMESOFINDIA.COM 25 Feb 2019, 3:30 pm
ಭೋಪಾಲ್: ಅಪಹೃತ ಅವಳಿ ಮಕ್ಕಳ ಹತ್ಯೆ ಹಿನ್ನೆಲೆಯಲ್ಲಿ ಚಿತ್ರಕೂಟದಲ್ಲಿ ಆರಂಭಗೊಂಡ ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿದ್ದು, 144 ಸೆಕ್ಷನ್ ಜಾರಿ ಮಾಡಲಾಗಿದೆ.
Vijaya Karnataka Web Twins


ಬೀದಿಗಿಳಿದು ಪ್ರತಿಭಟಿಸಿದ ಸ್ಥಳೀಯರು ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾಳುಗೆಡವಿದ್ದಾರೆ. ಆರೋಪಿಗಳಲ್ಲೊಬ್ಬನಾದ ಪದ್ಮ್ ಶುಕ್ಲನ ಸಂಬಂಧಿಯನ್ನು ಹಿಡಿದು ಥಳಿಸಲಾಗಿದೆ.

ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು ಹಿಂಸಾಚಾರವನ್ನು ತಡೆಯಲು ಪೊಲೀಸರು ಕೆಲವೆಡೆ ಲಾಠಿ ಚಾರ್ಜ್ ಮಾಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ನಗರದಲ್ಲಿ 1,500 ಪೊಲೀಸರನ್ನು ನೇಮಿಸಲಾಗಿದೆ. ಶನಿವಾರ ಮಕ್ಕಳ ದೇಹ ಪತ್ತೆಯಾಗುತ್ತಿದ್ದಂತೆ ಅಪಾಯ ಗ್ರಹಿಸಿದ್ದ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಿತ್ತು, ಎಂದು ಮೂಲಗಳು ತಿಳಿಸಿವೆ.

ಮಕ್ಕಳಿನ್ನಿಲ್ಲ ಎಂಬ ಸುದ್ದಿ ಹರಿದು ಬರುತ್ತಿದ್ದಂತೆ ಜನರು ಶವದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದ ಸರಕಾರಿ ಆಸ್ಪತ್ರೆಗೆ ಮುತ್ತಿಗೆ ಹಾಕಿದರು. ಕಲ್ಲು ತೂರಾಟ ಮಾಡುತ್ತ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ನಗರದ ವಿವಿಧೆಡೆ ಪ್ರತಿಭಟನೆ ನಡೆದು ಹಿಂಸಾಚಾರ ಭುಗಿಲೆದ್ದಿತು. ಆರೋಪಿಗಳಲ್ಲೊಬ್ಬನಾದ ಶುಕ್ಲಾ ಮನೆಯ ಸದಸ್ಯರನ್ನು ಹಿಡಿದು ಥಳಿಸಲಾಯಿತು. ರಸ್ತೆ ತಡೆದು, ಟೈಯರ್ ಸುಟ್ಟು ಮಕ್ಕಳ ಸಾವಿಗೆ ಪೊಲೀಸರೇ ಕಾರಣ ಎಂದು ಜನರು ಆರೋಪಿಸಿದರು.

ಭಾನುವಾರ ಸಂಜೆ 3 ಗಂಟೆಗೆ ಮಕ್ಕಳ ದೇಹವನ್ನು ಮನೆಗೆ ತಂದು ಅಂತ್ಯ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗಲಾಯಿತು. ಸಂಜೆಯಷ್ಟೊತ್ತಿಗೆ ಪರಿಸ್ಥಿತಿ ಸ್ವಲ್ಪ ನಿಯಂತ್ರಣಕ್ಕೆ ಬಂದಿತು. ಆದರೆ ಪ್ರದೇಶದಲ್ಲಿ ಇನ್ನು ಕೂಡ ನಿಷೇಧಾಜ್ಞೆ ಜಾರಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿತ್ರಕೂಟದ ಉದ್ಯಮಿ ಬ್ರಿಷೇಶ್ ಅವರ ಅವಳಿ ಮಕ್ಕಳನ್ನು ಫೆಬ್ರವರಿ 12 ರಂದು ಶಾಲಾ ಬಸ್‌ನಿಂದ ಅಪಹರಿಸಲಾಗಿತ್ತು. ಅಪಹರಣಕಾರರು ಮಕ್ಕಳ ತಂದೆಯಿಂದ 20 ಲಕ್ಷ ಹಣವನ್ನು ಪಡೆದ ಬಳಿಕವೂ ಸಿಕ್ಕಿ ಹಾಕಿಕೊಳ್ಳಬಹುದೆಂಬ ಭೀತಿಯಿಂದ ಯಮುನಾ ನದಿಗೆಸೆದು ಮಕ್ಕಳನ್ನು ಕೊಂದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ