ಚಂಡೀಗಢ: ಹರಿಯಾಣದ ರೋಹ್ಟಕ್ ಲೋಕಸಭಾ ಕ್ಷೇತ್ರದಿಂದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ನಿರ್ಧರಿಸಿದೆ. ಇತ್ತೀಚೆಗೆ ನಡೆದ ಪಕ್ಷದ ನಾಯಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸತತ ಮೂರು ಅವಧಿಗೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ನ ದೀಪೇಂದರ್ ಸಿಂಗ್ ಹೂಡಾ ಅವರನ್ನು ಮಣಿಸಲು ಹೊಸ ಅಭ್ಯರ್ಥಿಗಳಿಗೆ ತಲಾಶ್ ನಡೆಸಿದ ನಾಯಕರು, ಅಂತಿಮವಾಗಿ ಸೆಹ್ವಾಗ್ ಹೆಸರು ಅಖೈರುಗೊಳಿಸಿದ್ದಾರೆ. ಸ್ಪರ್ಧೆ ಕುರಿತು ಸೆಹ್ವಾಗ್ ಇನ್ನೂ ತೀರ್ಮಾನ ಪ್ರಕಟಿಸಿಲ್ಲ. ಅವರನ್ನು ಒಪ್ಪಿಸುವ ಜವಾಬ್ದಾರಿಯನ್ನು ದಿಲ್ಲಿ ಹಾಗೂ ರಾಷ್ಟ್ರ ರಾಜಧಾನಿ ವಲಯ (ಎನ್ಸಿಆರ್)ದ ರಾಜಕಾರಣದಲ್ಲಿ ಸಕ್ರಿಯರಾಗಿರುವ ಮುಖಂಡರೊಬ್ಬರಿಗೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಸಂಪರ್ಕಿಸಿದಾಗ ಬಿಜೆಪಿ ಹರಿಯಾಣ ಘಟಕದ ಅಧ್ಯಕ್ಷ ಸುಭಾಷ್ ಬರಾಲಾ ಅವರು,''ಸೆಹ್ವಾಗ್ ಇನ್ನೂ ಪಕ್ಷವನ್ನೇ ಸೇರಿಲ್ಲ. ಹೀಗಿರುವಾಗ ಅವರ ಸ್ಪರ್ಧೆ ಬಗ್ಗೆ ಈಗಲೇ ಏನು ಹೇಳುವುದು?,'' ಎಂದು ಪ್ರತಿಕ್ರಿಯಿಸಿದ್ದಾರೆ.
ಹರಿಯಾಣದಿಂದ ಸೆಹ್ವಾಗ್ ಕಣಕ್ಕೆ ಇಳಿಸಲು ಮುಂದಾಗಿರುವ ಬಿಜೆಪಿ
ಸತತ ಮೂರು ಅವಧಿಗೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ನ ದೀಪೇಂದರ್ ಸಿಂಗ್ ಹೂಡಾ ಅವರನ್ನು ಮಣಿಸಲು ಹೊಸ ಅಭ್ಯರ್ಥಿಗಳಿಗೆ ತಲಾಶ್ ನಡೆಸಿದ ನಾಯಕರು, ಅಂತಿಮವಾಗಿ ಸೆಹ್ವಾಗ್ ಹೆಸರು ಅಖೈರುಗೊಳಿಸಿದ್ದಾರೆ.
Vijaya Karnataka 8 Feb 2019, 5:00 am