ಆ್ಯಪ್ನಗರ

ವಿಶಾಖಪಟ್ಟಣಂ ವಿಷಾನಿಲ ಸೋರಿಕೆ ಪ್ರಕರಣ: ಎಲ್‌ಜಿ ಪಾಲಿಮರ್ಸ್‌ ಸ್ಥಳಾಂತರಕ್ಕೆ ಆಗ್ರಹ

ಆಂಧ್ರಪ್ರದೇಶದ ವಿಶಾಖಪಟ್ಟಣಂ ಸಮೀಪ ನಡೆದ ವಿಷಾನಿಲ ಸೋರಿಕೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಇದೀಗ ಅನಿಲ ಘಟಕವನ್ನು ಸ್ಥಳಾಂತರ ಮಾಡಬೇಕೆಂದು ಮೃತಪಟ್ಟವರ ಶವಯಾತ್ರೆ ವೇಳೆ ಪ್ರತಿಭಟನೆ ನಡೆದಿದೆ.

Vijaya Karnataka Web 10 May 2020, 11:13 am
ವಿಶಾಖಪಟ್ಟಣಂ: ಸ್ಟೈರಿನ್‌ ಅನಿಲ ಸೋರಿಕೆಯಾಗಿ 11 ಮಂದಿ ಮೃತಪಟ್ಟು 300ಕ್ಕೂ ಅಧಿಕ ಗ್ರಾಮಸ್ಥರು ಅಸ್ವಸ್ಥಗೊಂಡಿದ್ದ ವಿಶಾಖಪಟ್ಟಣಂ ಜಿಲ್ಲೆಯ ಆರ್‌.ಆರ್‌. ವೆಂಕಟಾಪುರ ಗ್ರಾಮದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಸ್ಥಳೀಯರು, ಎಲ್‌.ಜಿ .ಪಾಲಿಮರ್ಸ್‌ ಕಾರ್ಖಾನೆಯನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿದರು.
Vijaya Karnataka Web ವಿಶಾಖಪಟ್ಟಣಂ


ಕಳೆದ ಗುರುವಾರ ಅನಿಲ ಸೋರಿಕೆಯಾದ ಘಟನೆಯಲ್ಲಿ ಮೃತಪಟ್ಟ ಕೆಲವರ ಅಂತ್ಯಸಂಸ್ಕಾರ ಶನಿವಾರ ನಡೆಯಿತು. ಅದಕ್ಕಾಗಿ ಗ್ರಾಮದ ನೂರಾರು ಮಂದಿ ಸೇರಿದ್ದರು. ಕಾರ್ಖಾನೆಯ ಮುಂದೆ ಶವಯಾತ್ರೆ ಸಾಗುತ್ತಿದ್ದಂತೆ ಪ್ರತಿಭಟನೆ ನಡೆಸಿ, ಘಟನೆಗೆ ಕಾರಣರಾದವರನ್ನು ಬಂಧಿಸುವಂತೆ ಹಾಗೂ ಘಟಕವನ್ನು ಗ್ರಾಮದಿಂದ ಸ್ಥಳಾಂತರಿಸುವಂತೆ ಒತ್ತಾಯಿಸಿದರು.

ಈ ನಡುವೆ ಗ್ರಾಮದ ಪರಿಸ್ಥಿತಿ ಅವಲೋಕನಕ್ಕಾಗಿ ಜಿಪಿ ಡಿ. ಗೌತಮ್‌ ಸವಾಂಗ್‌ ಹಾಗೂ ವಿಶೇಷ ಮುಖ್ಯ ಕಾರ್ಯದರ್ಶಿ (ಕೈಗಾರಿಕೆ) ಕರಿಕಲ್‌ ವಲವೆನ್‌ ಅವರು ಸ್ಥಳಕ್ಕೆ ಬಂದಿದ್ದರು. ಅವರನ್ನು ಕಂಡಕೂಡಲೇ ಸ್ಥಳೀಯರು ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಸ್ಥಳದಲ್ಲಿದ್ದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದರು.

ವಿಷಾನಿಲ ದುರಂತ: ಆಸ್ಪತ್ರೆಗಳಲ್ಲಿ ಅಸ್ವಸ್ಥರನ್ನು ಭೇಟಿಯಾದ ಆಂಧ್ರ



ಗ್ಯಾಸ್‌ ಸೋರಿಕೆ ತಹಬದಿಗೆ: ದುರ್ಘಟನೆ ನಡೆದ ಗ್ರಾಮ ಸಹಜ ಸ್ಥಿತಿಗೆ ಮರಳಿದೆ ಎಂದು ಆಂಧ್ರಪ್ರದೇಶ ಸರಕಾರ ತಿಳಿಸಿದೆ. ಗ್ರಾಮದಲ್ಲಿ ಸೃಷ್ಟಿಯಾಗಿದ್ದ ಆತಂಕ ನಿವಾರಣೆಯಾಗಿದೆ. ಗಾಳಿಯೂ ಶುದ್ಧವಾಗಿದೆ. ಅನಿಲ ಸೋರಿಕೆಯಾದ ಘಟಕದ ಉಷ್ಣತೆ ಇಳಿಕೆಯಾಗಿದ್ದು, ಮತ್ತೆ ದುರ್ಘಟನೆ ನಡೆಯಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದೆ. 'ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮಸ್ಥರನ್ನು 48 ಗಂಟೆಗಳ ಕಾಲ ಗ್ರಾಮದಿಂದ ದೂರ ಇರುವಂತೆ ಸೂಚಿಸಲಾಗಿದ್ದು, ಆ ಅವಧಿ ಭಾನುವಾರಕ್ಕೆ ಮುಕ್ತಾಯವಾಗಲಿದೆ,'' ಎಂದು ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ