ಆ್ಯಪ್ನಗರ

ಕಾಂಗ್ರೆಸ್‌ಗೆ ಮತ ಹಾಕದಿದ್ದರೆ ಕೊಲೆ ಮಾಡುತ್ತೇನೆ ಎಂದ ಬಿಜೆಪಿ ಸದಸ್ಯ

ಕಾಂಗ್ರೆಸ್, ಬಿಜೆಪಿ ಹಾಗೂ ಸಮಾಜವಾದಿ ಪಕ್ಷದ ಅಭ್ಯರ್ಥಿಗಳ ನಡುವಿನ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿರುವ ಮಧ್ಯ ಪ್ರದೇಶದ ಚತಾರ್ಪುರ್ ಜಿಲ್ಲೆಯ ರಾಜ್‌ನಗರ ಕ್ಷೇತ್ರದ ಜುರಹ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.

TIMESOFINDIA.COM 3 Dec 2018, 6:00 pm
ಭೋಪಾಲ್: ಕಾಂಗ್ರೆಸ್‌ಗೆ ಮತ ನೀಡದವರನ್ನು ಕೊಲೆ ಮಾಡುವುದಾಗಿ ಬಿಜೆಪಿ ನಾಯಕ ಬೆದರಿಕೆ ಒಡ್ಡಿದ ವಿಚಿತ್ರ ಪ್ರಸಂಗ ಮಧ್ಯಪ್ರದೇಶದಲ್ಲಿ ನಡೆದಿದೆ. ಆರೋಪಿ 'ಜುರಹ' ಗ್ರಾಮದ ಸರಪಂಚ್ ಕೂಡ ಆಗಿದ್ದು ಆತನ ಮೇಲಿಗ ಪ್ರಕರಣ ದಾಖಲಾಗಿದೆ.
Vijaya Karnataka Web bjp


ಕಾಂಗ್ರೆಸ್, ಬಿಜೆಪಿ ಹಾಗೂ ಸಮಾಜವಾದಿ ಪಕ್ಷದ ಅಭ್ಯರ್ಥಿಗಳ ನಡುವಿನ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿರುವ ಮಧ್ಯ ಪ್ರದೇಶದ ಚತಾರ್ಪುರ್ ಜಿಲ್ಲೆಯ ರಾಜ್‌ನಗರ ಕ್ಷೇತ್ರದ ಜುರಹ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸದವರು ಡಿಸೆಂಬರ್ 13ರೊಳಗೆ ಗ್ರಾಮ ತೊರೆಯಬೇಕು. ಇಲ್ಲದಿದ್ದರೆ ಕೊಲೆ ಮಾಡುತ್ತೇವೆ ಎಂದು ಗ್ರಾಮದ ಸರ್ಪಂಚ್ ಪ್ರದೀಪ್ ಸಿಂಗ್ ಅಲಿಯಾಸ್ ಧಂದೂ ಬೆದರಿಕೆಯೊಡಿದ್ದಾನೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಸರಪಂಚ್ ತಳ್ಳಿಹಾಕಿದ್ದಾನೆ.

ಈ ಸಂಬಂಧ ಜುರಹ ಗ್ರಾಮದ ನಿವಾಸಿ ಭಗೀರಥ ಕುಶ್ವಾಹ್ ಎಂಬವರು ಚತಾರ್ಪುರ್ ಜಿಲ್ಲೆಯ ಪೊಲೀಸ್ ಅಧೀಕ್ಷಕ ವಿನೀತ್ ಖನ್ನಾ ಅವರಿಗೆ ದೂರು ನೀಡಿದ್ದಾರೆ. ಧಂದೂ ಬೆದರಿಕೆಯೊಡ್ಡಿರುವ ಈ ಆಡಿಯೋ ಸಂಭಾಷಣೆ ಸಹ ವೈರಲ್ ಆಗಿದೆ.

ಬಿಜೆಪಿಯ ಅರವಿಂದ್ ಪಟೇರಿಯಾ ಎಂಬವರು ಕಾಂಗ್ರೆಸ್‌ನ ನತಿ ರಾಜ್ ಹಾಗೂ ಸಮಾಜವಾದಿ ಪಕ್ಷದ ಧೀರಜ್ ಚತುರ್ವೇದಿ ವಿರುದ್ಧ ಕಣಕ್ಕಿಳಿದಿದ್ದಾರೆ. ತಮ್ಮ ಸಹೋದರ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರೂ, ದಂಧೂ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದಾರೆ ಮತ್ತು ಕಾಂಗ್ರೆಸ್ ಪರ ಮತ ಚಲಾಯಿಸದವರನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡುವ ಮೂಲಕ ಗೂಂಡಾ ವರ್ತನೆ ಪ್ರದರ್ಶಿಸಿದ್ದಾರೆ.

123456
ವಿಕೆವಿಕವಿಕ ವೆಬ್ವಿಕ ಟೀಂವಿಕ ಪತ್ರಿಕೆವಿಕ ಆಪ್
3
4
5

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ