ಹೊಸದಿಲ್ಲಿ: ಆರು ರಾಜ್ಯಗಳಲ್ಲಿ ಮೂರು ಲೋಕಸಭಾ ಕ್ಷೇತ್ರಗಳು ಹಾಗೂ ಏಳು ವಿಧಾನಸಭಾ ಸ್ಥಾನಗಳಿಗೆ ಗುರುವಾರ ಉಪ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯ ಫಲಿತಾಂಶ ಜೂನ್ 26ರಂದು ಭಾನುವಾರ ಪ್ರಕಟವಾಗಲಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಈ ವರ್ಷದ ಆರಂಭದಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಬಳಿಕ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ಅಜಂಗಡ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಹಾಗೆಯೇ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಅವರೂ ವಿಧಾನಸಭೆಗೆ ಆಯ್ಕೆಯಾದಾಗ ರಾಮಪುರ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು.
ಈ ಬಾರಿ ಅಜಂಗಡದಿಂದ ಬಿಜೆಪಿಯ ದಿನೇಶ್ ಲಾಲ್ ಯಾದವ್ ಅಲಿಯಾಸ್ ನಿರಾಹುವಾ ಮತ್ತು ಬಿಎಸ್ಪಿಯ ಶಾ ಆಲಂ ಸ್ಪರ್ಧಿಸಿದ್ದು, ಅವರಿಗೆ ಎದುರಾಳಿಯಾಗಿ ಎಸ್ಪಿಯಿಂದ ಅಖಿಲೇಶ್ ಯಾದವ್ ಅವರ ಸಂಬಂಧಿ ಧರ್ಮೇಂದ್ರ ಯಾದವ್ ಅವರನ್ನು ಕಣಕ್ಕಿಳಿಸಿದೆ. ರಾಮಪುರದಲ್ಲಿ ಅಜಂ ಖಾನ್ ನಿಷ್ಠ ಆಸಿಮ್ ರಾಜಾ ಮತ್ತು ಬಿಜೆಪಿಯ ಘನಶ್ಯಾಮ್ ಲೋಧಿ ಮಧ್ಯೆ ಪೈಪೋಟಿ ನಡೆಯುತ್ತಿದೆ. ಕಾಂಗ್ರೆಸ್ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.
ಸಂಸದರಾಗಿದ್ದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸಂಗ್ರೂರ್ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರಿಂದ, ಅಲ್ಲಿ ಕೂಡ ಉಪ ಚುನಾವಣೆ ನಡೆಯುತ್ತಿದೆ. ಎಎಪಿಯ ಗುರ್ಮಾಲಿ ಸಿಂಗ್, ಕಾಂಗ್ರೆಸ್ಮ ದಲ್ವೀರ್ ಸಿಂಗ್ ಗೋಲ್ಡಿ, ಬಿಜೆಪಿಯ ಕೇವಲ್ ಧಿಲ್ಲೋನ್ ಕಣದಲ್ಲಿದ್ದಾರೆ.
ಇತ್ತೀಚೆಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಆಮ್ ಆದ್ಮಿ ಪಕ್ಷದ ರಾಘವ್ ಛಡ್ಡಾ ಅವರ ನಿರ್ಗಮನದಿಂದ ತೆರವಾದ ದಿಲ್ಲಿಯ ರಾಜಿಂದರ್ ನಗರ ವಿಧಾನಸಭೆ ಕ್ಷೇತ್ರಕ್ಕೆ ಮತದಾನ ನಡೆಯುತ್ತಿದೆ. ಉಳಿದಂತೆ ಜಾರ್ಖಂಡ್ನ ಮಂದಾರ್, ಆಂಧ್ರಪ್ರದೇಶದ ಅತ್ಮಾಕುರ್ ಹಾಗೂ ತ್ರಿಪುರಾದ ಅಗರ್ತಲಾ, ಬೋರ್ದವಾಲಿ, ಸುರ್ಮಾ ಮತ್ತು ಜುಬಾರಾಜನಗರ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿವೆ.
ರಾಷ್ಟ್ರಪತಿ ಆಯ್ಕೆಗೆ ನೆರವಾಗುವ ಎಲೆಕ್ಟೊರಲ್ ಕಾಲೇಜಿನಲ್ಲಿ ಉಂಟಾಗಿರುವ ಖಾಲಿ ಸ್ಥಾನಗಳನ್ನು ಭರ್ತಿ ಮಾಡಲು ಚುನಾವಣಾ ಆಯೋಗಕ್ಕೆ ಈ ಉಪ ಚುನಾವಣೆ ಸಹಾಯ ಮಾಡಲಿದೆ.
ಈ ಬಾರಿ ಅಜಂಗಡದಿಂದ ಬಿಜೆಪಿಯ ದಿನೇಶ್ ಲಾಲ್ ಯಾದವ್ ಅಲಿಯಾಸ್ ನಿರಾಹುವಾ ಮತ್ತು ಬಿಎಸ್ಪಿಯ ಶಾ ಆಲಂ ಸ್ಪರ್ಧಿಸಿದ್ದು, ಅವರಿಗೆ ಎದುರಾಳಿಯಾಗಿ ಎಸ್ಪಿಯಿಂದ ಅಖಿಲೇಶ್ ಯಾದವ್ ಅವರ ಸಂಬಂಧಿ ಧರ್ಮೇಂದ್ರ ಯಾದವ್ ಅವರನ್ನು ಕಣಕ್ಕಿಳಿಸಿದೆ. ರಾಮಪುರದಲ್ಲಿ ಅಜಂ ಖಾನ್ ನಿಷ್ಠ ಆಸಿಮ್ ರಾಜಾ ಮತ್ತು ಬಿಜೆಪಿಯ ಘನಶ್ಯಾಮ್ ಲೋಧಿ ಮಧ್ಯೆ ಪೈಪೋಟಿ ನಡೆಯುತ್ತಿದೆ. ಕಾಂಗ್ರೆಸ್ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.
ಸಂಸದರಾಗಿದ್ದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸಂಗ್ರೂರ್ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರಿಂದ, ಅಲ್ಲಿ ಕೂಡ ಉಪ ಚುನಾವಣೆ ನಡೆಯುತ್ತಿದೆ. ಎಎಪಿಯ ಗುರ್ಮಾಲಿ ಸಿಂಗ್, ಕಾಂಗ್ರೆಸ್ಮ ದಲ್ವೀರ್ ಸಿಂಗ್ ಗೋಲ್ಡಿ, ಬಿಜೆಪಿಯ ಕೇವಲ್ ಧಿಲ್ಲೋನ್ ಕಣದಲ್ಲಿದ್ದಾರೆ.
ಇತ್ತೀಚೆಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಆಮ್ ಆದ್ಮಿ ಪಕ್ಷದ ರಾಘವ್ ಛಡ್ಡಾ ಅವರ ನಿರ್ಗಮನದಿಂದ ತೆರವಾದ ದಿಲ್ಲಿಯ ರಾಜಿಂದರ್ ನಗರ ವಿಧಾನಸಭೆ ಕ್ಷೇತ್ರಕ್ಕೆ ಮತದಾನ ನಡೆಯುತ್ತಿದೆ. ಉಳಿದಂತೆ ಜಾರ್ಖಂಡ್ನ ಮಂದಾರ್, ಆಂಧ್ರಪ್ರದೇಶದ ಅತ್ಮಾಕುರ್ ಹಾಗೂ ತ್ರಿಪುರಾದ ಅಗರ್ತಲಾ, ಬೋರ್ದವಾಲಿ, ಸುರ್ಮಾ ಮತ್ತು ಜುಬಾರಾಜನಗರ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿವೆ.
ರಾಷ್ಟ್ರಪತಿ ಆಯ್ಕೆಗೆ ನೆರವಾಗುವ ಎಲೆಕ್ಟೊರಲ್ ಕಾಲೇಜಿನಲ್ಲಿ ಉಂಟಾಗಿರುವ ಖಾಲಿ ಸ್ಥಾನಗಳನ್ನು ಭರ್ತಿ ಮಾಡಲು ಚುನಾವಣಾ ಆಯೋಗಕ್ಕೆ ಈ ಉಪ ಚುನಾವಣೆ ಸಹಾಯ ಮಾಡಲಿದೆ.