ಹೊಸದಿಲ್ಲಿ: ಬಹುಕೋಟಿ ಅಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಕಾಪ್ಟರ್ ಖರೀದಿ ಹಗರಣದ ಆರೋಪಿ ರಾಜೀವ್ ಸಕ್ಸೇನಾಗೆ ದಿಲ್ಲಿಯ ನ್ಯಾಯಾಲಯ ಗುರುವಾರ ಏಳು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಅವರು, 5 ಲಕ್ಷ ರೂ. ಮೌಲ್ಯದ ಎರಡು ಖಾತ್ರಿಗಳ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದರು. ಇದೇ ವೇಳೆ ರಾಜೀವ್ ಆರೋಗ್ಯದ ಕುರಿತು ವಿಸ್ತೃತ ವರದಿ ಸಲ್ಲಿಸುವಂತೆ ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆಗೆ (ಏಮ್ಸ…) ಸೂಚಿಸಿದರು. ಹೃದ್ರೋಗ ಮತ್ತು ರಕ್ತದ ಕ್ಯಾನ್ಸರ್(ಲ್ಯುಕೇಮಿಯಾ)ನಿಂದ ಬಳಲುತ್ತಿರುವುದರಿಂದ ಜಾಮೀನು ನೀಡಬೇಕು ಎಂದು ರಾಜೀವ್ ಅರ್ಜಿಯಲ್ಲಿ ಕೋರಿದ್ದ. ಮುಂದಿನ ವಿಚಾರಣೆ ಫೆ. 22ರಂದು ನಡೆಯಲಿದೆ.
ಕಾಪ್ಟರ್ ಹಗರಣ: ರಾಜೀವ್ ಸಕ್ಸೇನಾಗೆ ಜಾಮೀನು
ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಅವರು, 5 ಲಕ್ಷ ರೂ. ಮೌಲ್ಯದ ಎರಡು ಖಾತ್ರಿಗಳ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದರು.
Vijaya Karnataka 15 Feb 2019, 5:00 am