ಆ್ಯಪ್ನಗರ

ವಿವಿಐಪಿ ಹೆಲಿಕಾಪ್ಟರ್‌ ಹಗರಣ: ಬಿಜೆಪಿಗೆ ಹೊಸ ಅಸ್ತ್ರ

ಹೆಲಿಕಾಪ್ಟರ್‌ ಖರೀದಿ ಹಗರಣ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಲು ಬಿಜೆಪಿಗೆ ಹೊಸ ಅಸ್ತ್ರವಾಗಲಿದೆ.

ಏಜೆನ್ಸೀಸ್ 27 Apr 2016, 11:42 am
ಹೊಸದಿಲ್ಲಿ: ಯುಪಿಎ ಅವಧಿಯಲ್ಲಿ ನಡೆದಿರುವ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿಗೆ ಹೊಸ ಅಸ್ತ್ರವಾಗಲಿದೆ.
Vijaya Karnataka Web vvip chopper scam italian court verdict gives bjp ammunition to gun for signora gandhi in house
ವಿವಿಐಪಿ ಹೆಲಿಕಾಪ್ಟರ್‌ ಹಗರಣ: ಬಿಜೆಪಿಗೆ ಹೊಸ ಅಸ್ತ್ರ


ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣದಲ್ಲಿ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್‌.ಪಿ.ತ್ಯಾಗಿ ಶಾಮೀಲಾಗಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಇಟಲಿ ಕೋರ್ಟ್‌ ತಿಳಿಸಿದ್ದು, ಈ ಸಂಬಂಧ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಚರ್ಚೆ ನಡೆಸಲು ಅವಕಾಶ ಕೋರಿ ಬಿಜೆಪಿ ನೋಟಿಸ್‌ ನೀಡಿದೆ.

ಈ ಸಂಬಂಧ ಲೋಕಸಭೆಯಲ್ಲಿ ಚರ್ಚೆ ನಡೆಸಲು ಹೊಸದಿಲ್ಲಿಯ ಸಂಸದೆ ಮೀನಾಕ್ಷಿ ಲೇಖಿ ನೋಟಿಸ್‌ ನೀಡಿದ್ದರೆ, ಅವರ ಸಹೋದ್ಯೋಗಿ ಭೂಪೇಂದ್ರ ಯಾದವ್‌ ರಾಜ್ಯಸಭೆಗೆ ನೋಟಿಸ್‌ ನೋಡಿದ್ದಾರೆ. ಇಟಲಿ ಕೋರ್ಟ್‌ ಆದೇಶದಲ್ಲಿ ಪ್ರಸ್ತಾಪವಾಗಿರುವ 'ಸಿಗ್ನೋರ' ಗಾಂಧಿ ವಿಷಯವನ್ನು ಬಿಜೆಪಿ ಸಭೆಯಲ್ಲಿ ಚರ್ಚಿಸಲಿದೆ.

ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣಕ್ಕೆ ಯುಪಿಎ ಸರಕಾರವೇ ಕಾರಣವೆಂದು ಇಟಲಿಯ ಕೋರ್ಟ್‌ ಹೇಳಿದ್ದು ಈ ವಿಷಯದಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಅಂದಿನ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌, ಸೋನಿಯಾ ಅವರ ಆಪ್ತ ಕಾರ್ಯದರ್ಶಿ ಅಹ್ಮದ್‌ ಪಟೇಲ್‌, ಆಸ್ಕರ್‌ ಫರ್ನಾಂಡಿಸ್‌ ಅವರ ಹೆಸರುಗಳನ್ನು ಉಲ್ಲೇಖೀಸಲಾಗಿದೆ.

ಹಗರಣ ಏನು ?

ಅತಿ ಗಣ್ಯರ ಪ್ರಯಾಣಕ್ಕೆಂದು 2010ರಲ್ಲಿ ಇಟಲಿ ಮೂಲದ ಫಿನ್‌ಮೆಕ್ಯಾನಿಕಾ ಕಂಪನಿಯ ಅಂಗಸಂಸ್ಥೆಯಾಗಿರುವ ಅಗಸ್ಟ್ಯಾ ವೆಸ್ಟ್‌ಲ್ಯಾಂಡ್‌ ಕಂಪನಿ ಜತೆ 12 ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಕೇಂದ್ರ ಸರಕಾರ ಒಪ್ಪಂದ ಮಾಡಿಕೊಂಡಿತ್ತು. 2013ರಲ್ಲಿ ಈ ಒಪ್ಪಂದದಲ್ಲಿ ಲಂಚದ ಆರೋಪ ಕೇಳಿಬಂದಿತ್ತು.

ಸುಮಾರು 3,600 ಕೋಟಿ ರೂ. ಮೊತ್ತದ ಖರೀದಿ ಒಪ್ಪಂದ ಕುದುರಿಸಲು ಕಂಪನಿಯು ತ್ಯಾಗಿ ಅವರ ಬ್ಯಾಂಕ್‌ ಖಾತೆಗೆ ಕಮೀಷನ್‌ ರೂಪದಲ್ಲಿ 120 ಕೋಟಿ ರೂ. ಹಣವನ್ನು ಜಮೆ ಮಾಡಿತ್ತು. ಅದನ್ನು ಫಲಾನುಭವಿಗಳಿಗೆ ಹಂಚಲಾಗಿತ್ತು ಎಂದು ಕೋರ್ಟ್‌ ತೀರ್ಪಿನಲ್ಲಿ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ