ಆ್ಯಪ್ನಗರ

ವ್ಯಾಪಂ: ಕಾಂಗ್ರೆಸ್‌ ನಾಯಕರ ಮೇಲೆ ಎಫ್‌ಐಆರ್‌ಗೆ ಕೋರ್ಟ್‌ ಆದೇಶ

ಮಧ್ಯಪ್ರದೇಶದ ವ್ಯಾವಸಾಯಿಕ್‌ ಪರೀಕ್ಷಾ ಮಂಡಲ್‌ (ವ್ಯಾಪಂ) ಹಗರಣದಲ್ಲಿ 'ಸಾಕ್ಷ್ಯಗಳನ್ನು ತಿರುಚಿದ' ಆರೋಪದಲ್ಲಿ ಕಾಂಗ್ರೆಸ್‌ ನಾಯಕರಾದ ದಿಗ್ವಿಜಯ್‌ ಸಿಂಗ್‌, ಕಮಲನಾಥ್‌, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಆರ್‌ಟಿಐ ಕಾರ್ಯಕರ್ತ, ಹಗರಣ ಬಯಲಿಗೆಳೆದ ಪ್ರಶಾಂತ್‌ ಪಾಂಡೆ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳುವಂತೆ ವಿಶೇಷ ಕೋರ್ಟ್‌ ಆದೇಶಿಸಿದೆ.

Vijaya Karnataka 28 Sep 2018, 9:17 am
ಭೋಪಾಲ್‌: ಮಧ್ಯಪ್ರದೇಶದ ವ್ಯಾವಸಾಯಿಕ್‌ ಪರೀಕ್ಷಾ ಮಂಡಲ್‌ (ವ್ಯಾಪಂ) ಹಗರಣದಲ್ಲಿ 'ಸಾಕ್ಷ್ಯಗಳನ್ನು ತಿರುಚಿದ' ಆರೋಪದಲ್ಲಿ ಕಾಂಗ್ರೆಸ್‌ ನಾಯಕರಾದ ದಿಗ್ವಿಜಯ್‌ ಸಿಂಗ್‌, ಕಮಲನಾಥ್‌, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಆರ್‌ಟಿಐ ಕಾರ್ಯಕರ್ತ, ಹಗರಣ ಬಯಲಿಗೆಳೆದ ಪ್ರಶಾಂತ್‌ ಪಾಂಡೆ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳುವಂತೆ ವಿಶೇಷ ಕೋರ್ಟ್‌ ಆದೇಶಿಸಿದೆ.
Vijaya Karnataka Web Digvijaya Singh


ವಕೀಲ ಸಂತೋಷ್‌ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಗಣಿಸಿದ ಕೋರ್ಟ್‌, ತಕ್ಷಣ ಎಫ್‌ಐಆರ್‌ ದಾಖಲಿಸಲು ಮತ್ತು ನವಂಬರ್‌ 13ರೊಳಗೆ ತನಿಖಾ ವರದಿ ಸಲ್ಲಿಸಲು ಸೂಚಿಸಿತು. ಕಾಂಗ್ರೆಸ್‌ ನಾಯಕರು ಸುಳ್ಳು ಸಾಕ್ಷ್ಯ ನೀಡಿ ಕೋರ್ಟ್‌ನ ದಿಕ್ಕು ತಪ್ಪಿಸಿದ್ದಾರೆ ಎಂದು ಸಂತೋಷ್‌ ದೂರಿದ್ದರು. ಮಧ್ಯಪ್ರದೇಶದ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನೂ ಒಳಗೊಂಡಂತೆ ಹಲವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಕೋರಿದ ಖಾಸಗಿ ದಾವೆಗೆ ಸಂಬಂಧಿಸಿ ಕಳೆದ ಶನಿವಾರವಷ್ಟೇ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಕೋರ್ಟ್‌ನಲ್ಲಿ ಹೇಳಿಕೆ ದಾಖಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ