ಆ್ಯಪ್ನಗರ

ತಾಜ್ ಮಹಲನ್ನು ಶಾಜಹಾನ್ ನಮಗೆ ಬರೆದುಕೊಟ್ಟಿದ್ದಾರೆ: ವಕ್ಫ್ ಮಂಡಳಿ

ಜಗತ್ತಿನ ಏಳನೇ ಅದ್ಭುತ, ವಿಶ್ವವಿಖ್ಯಾತ ತಾಜ್ ಮಹಲ್ ತಮಗೆ ಸೇರಿದ್ದು ಮೊಘಲ್ ಚಕ್ರವರ್ತಿ ಶಾಜಹಾನ್ ತಮಗೆ ಬರೆದು ಕೊಟ್ಟಿದ್ದಾರೆಂದು ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿ ವಾದಿಸುತ್ತಿದೆ.

THE ECONOMIC TIMES 11 Apr 2018, 2:53 pm
ಹೊಸದಿಲ್ಲಿ: ಜಗತ್ತಿನ ಏಳನೇ ಅದ್ಭುತ, ವಿಶ್ವವಿಖ್ಯಾತ ತಾಜ್ ಮಹಲ್ ತಮಗೆ ಸೇರಿದ್ದು ಮೊಘಲ್ ಚಕ್ರವರ್ತಿ ಶಾಜಹಾನ್ ತಮಗೆ ಬರೆದು ಕೊಟ್ಟಿದ್ದಾರೆಂದು ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿ ವಾದಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಪುರಾತತ್ವ ಇಲಾಖೆ (ಎಎಸ್‌ಐ) ಸುಪ್ರೀಂಕೋರ್ಟ್‌ನಲ್ಲಿ ಹೋರಾಟ ನಡೆಸಿದೆ.
Vijaya Karnataka Web taj-mahal


ಮಂಗಳವಾರ ಸುನ್ನಿ ವಕ್ಫ್ ಮಂಡಳಿ ವಾದವನ್ನು ಕೇಳಿದ ಸುಪ್ರೀಂಕೋರ್ಟ್, ಶಾಜಹಾನ್ ತಾಜ್ ಮಹಲನ್ನು ಸುನ್ನಿ ಮಂಡಳಿಗೆ ಬರೆದುಕೊಟ್ಟಿರುವ ಪತ್ರಗಳನ್ನು ದಾಖಲೆ ತೋರಿಸಿ ಎಂದು ಆದೇಶಿಸಿದ್ದು, ಪತ್ರಗಳನ್ನು ಕೋರ್ಟ್‌ಗೆ ಸಲ್ಲಿಸಲು ಒಂದು ವಾರದ ಗಡುವು ನೀಡಿದೆ.

ತಾಜ್ ಮಹಲ್ ವಕ್ಫ್ ಮಂಡಳಿಗೆ ಸೇರುತ್ತದೆ ಎಂದು ಶಾಜಹಾನ್ ನೀಡಿರುವ ಡಿಕ್ಲರೇಷನ್ ಅಲ್ಲದೆ ಬೇರೇನಾದರು ಆಧಾರಗಳಿದ್ದರೂ ಕೋರ್ಟ್‌ಗೆ ಸಲ್ಲಿಸಬೇಕೆಂದು ಸುನ್ನಿ ಮಂಡಳಿಗೆ ಸುಪ್ರೀಂಕೋರ್ಟ್ ಸೂಚಿಸಿದೆ. ತಾಜ್ ಮಹಲ್ ವಕ್ಫ್ ಮಂಡಳಿಗೆ ಸೇರಿದ್ದು ಎಂದರೆ ಭಾರತದಲ್ಲಿ ಯಾರು ನಂಬುತ್ತಾರೆ? ಎಂದು ಸುನ್ನಿ ಮಂಡಳಿಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ದೀಪಕ್ ಮಿಶ್ರಾ ಪ್ರಶ್ನಿಸಿದ್ದಾರೆ.

ಈ ರೀತಿ ಪ್ರಕರಣಗಳಿಂದ ಅಮೂಲ್ಯವಾದ ಕೋರ್ಟ್ ಸಮಯ ವ್ಯರ್ಥವಾಗುತ್ತಿದೆ ಎಂದಿದೆ ಅತ್ಯುನ್ನತ ನ್ಯಾಯಪೀಠ. ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ತಾಜ್ ಮಹಲ್ ಸೇರಿದಂತೆ ದೇಶದ ಅನೇಕ ಪಾರಂಪರಿಕ ಕಟ್ಟಡಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಭಾರತ ಪುರಾತತ್ವ ಇಲಾಖೆ ವಹಿಸಿಕೊಂಡಿದೆ. ಇನ್ನು ತಾಜ್ ಮಹಲನ್ನು ಪತ್ನಿ ಮುಮ್ತಾಜ್ ಮೇಲಿನ ತನ್ನ ಪ್ರೀತಿಗೆ ಸಂಕೇತವಾಗಿ ಶಾಜಹಾನ್ ನಿರ್ಮಿಸಿದ ಎಂದು ಇತಿಹಾಸ ಹೇಳುತ್ತದೆ. 1658ರಲ್ಲಿ ಶಾಜಹಾನ್ ಮರಣಿಸಿದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ