ಮುಂದಿನ ಜನ್ಮದಲ್ಲಿ ಬ್ರಾಹ್ಮಣನಾಗಿ ಹುಟ್ಟಬೇಕು: ನಟ ಸುರೇಶ್ ಗೋಪಿ
ಮುಂದಿನ ಜನ್ಮವೊಂದಿದ್ದರೆ ನಾವು ಬ್ರಾಹ್ಮಣನಾಗಿಯೇ ಹುಟ್ಟುತ್ತೇನೆ, ಜನಿವಾರ ಹಾಕಿರುವವರು ದೇವರಿಗೆ ಸಮ ಎಂದು ಮಲಯಾಳಂ ನಟ ಹಾಗೂ ಸಂಸತ್ ಸದಸ್ಯ ಸುರೇಶ್ ಗೋಪಿ ಭಾನುವಾರ ಹೇಳಿದ್ದಾರೆ.
Vijaya Karnataka Web 25 Sep 2017, 6:37 pm
ತಿರುವನಂತಪುರಂ: ಮುಂದಿನ ಜನ್ಮವೊಂದಿದ್ದರೆ ನಾವು ಬ್ರಾಹ್ಮಣನಾಗಿಯೇ ಹುಟ್ಟುತ್ತೇನೆ, ಜನಿವಾರ ಹಾಕಿರುವವರು ದೇವರಿಗೆ ಸಮ ಎಂದು ಮಲಯಾಳಂ ನಟ ಹಾಗೂ ಸಂಸತ್ ಸದಸ್ಯ ಸುರೇಶ್ ಗೋಪಿ ಹೇಳಿದ್ದಾರೆ.
ತಿರುವನಂತಪುರಂನಲ್ಲಿ ಏರ್ಪಡಿಸಲಾಗಿದ್ದ ಬ್ರಾಹ್ಮಣ ಸಮಾಜದ ವಾರ್ಷಿಕ ಸಭೆ 'ಯೋಗಕ್ಷೇಮ ಸಭಾ'ಯಲ್ಲಿ ಪಾಲ್ಗೋಂಡಿದ್ದ ಸುರೇಶ್ ಗೋಪಿ, ಮುಂದಿನ ಜನ್ಮದಲ್ಲಿ ಬ್ರಾಹ್ಮಣನಾಗಿ ಮರುಹುಟ್ಟು ಪಡೆದು ಬಳಿಕ ಶಬರಿಮಲೆಯ ತಂತ್ರಿಯಾಗಿ ಸೇವೆ ಮಾಡಬೇಕೆಂಬ ಆಸೆಯಿದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.
ಮುಂದಿನ ಜನ್ಮದ ಕುರಿತು ನನಗೆ ನಂಬಿಕೆಯಿದೆ, ಹೀಗಾಗಿ ಮುಂದಿನ ಜನ್ಮದಲ್ಲಿ ನಾನು ಜನಿವಾರ ಹಾಕುವ ಬ್ರಾಹ್ಮಣನಾಗಿ ಹುಟ್ಟುಬೇಕೆಂದಿದ್ದೇನೆ. ಅಲ್ಲದೇ ಶಬರಿಮಲೆಯ ತಂತ್ರಿಯಾಗಿ ಸೇವೆ ಸಲ್ಲಿಸಬೇಕು ಇಲ್ಲವೇ ಕನಿಷ್ಠ ಪಕ್ಷ ಕೆಳ ದರ್ಜೆಯ ಅರ್ಚಕನಾಗಿ ದೇವರ ಸೇವೆ ಸಲ್ಲಿಸುವ ಮೂಲಕವಾದರೂ ದೇವರ ವಿಗ್ರಹವನ್ನು ಮುಟ್ಟಿ ಅವರಿಗೆ ಸ್ನಾನ ಮಾಡಿಸಬೇಕೆಂಬ ಆಸೆಯಿದೆ ಎಂದು ಸುರೇಶ್ ಗೋಪಿ ಹೇಳಿದ್ದಾರೆ.
ಗೋಪಿ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಗೋಪಿಯ ಫೇಮಸ್ ಚಿತ್ರಗಳಲ್ಲಿ ಒಂದಾಗಿರುವ ಪೈತ್ರುಕಮ್ ಚಿತ್ರದಲ್ಲಿ ಗೋಪಿ 'ನಾನು ಬ್ರಾಹ್ಮಣನಲ್ಲ, ನಾನೊಬ್ಬ ಮನುಷ್ಯ. ನನ್ನ ಜನಿವಾರವನ್ನು ತುಂಡರಿಸಿಕೊಂಡಿದ್ದೇನೆ. ಈ ಮೂಢನಂಬಿಕೆಯನ್ನು ಮೊದಲಿಗೆ ಕಪ್ಪು ಎಳೆಯನ್ನು ಕತ್ತರಿಸಿಬಿಟ್ಟಿದ್ದೇನೆ ಎಂದು ಹೇಳಿದ್ದರು. ಅಂದಿನ ಕಾಲದಲ್ಲಿ ಚಿತ್ರದ ಈ ಡೈಲಾಗ್ ಭಾರೀ ಫೇಮಸ್ ಆಗಿತ್ತು. ಆದರೆ ಇದೀಗ ಗೋಪಿ ಮಾತನ್ನು ಕೇಳಿರುವ ಕೇರಳಿಗರು ಟ್ರೋಲ್ ಆರಂಭಿಸಿದ್ದು, ಸಿನಿಮಾದಲ್ಲಿ ಹೇಳುವುದಕ್ಕೂ ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದಿದ್ದಾರೆ.
want to be reborn as brahmin says actor suresh gopi
ತಿರುವನಂತಪುರಂನಲ್ಲಿ ಏರ್ಪಡಿಸಲಾಗಿದ್ದ ಬ್ರಾಹ್ಮಣ ಸಮಾಜದ ವಾರ್ಷಿಕ ಸಭೆ 'ಯೋಗಕ್ಷೇಮ ಸಭಾ'ಯಲ್ಲಿ ಪಾಲ್ಗೋಂಡಿದ್ದ ಸುರೇಶ್ ಗೋಪಿ, ಮುಂದಿನ ಜನ್ಮದಲ್ಲಿ ಬ್ರಾಹ್ಮಣನಾಗಿ ಮರುಹುಟ್ಟು ಪಡೆದು ಬಳಿಕ ಶಬರಿಮಲೆಯ ತಂತ್ರಿಯಾಗಿ ಸೇವೆ ಮಾಡಬೇಕೆಂಬ ಆಸೆಯಿದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.
ಮುಂದಿನ ಜನ್ಮದ ಕುರಿತು ನನಗೆ ನಂಬಿಕೆಯಿದೆ, ಹೀಗಾಗಿ ಮುಂದಿನ ಜನ್ಮದಲ್ಲಿ ನಾನು ಜನಿವಾರ ಹಾಕುವ ಬ್ರಾಹ್ಮಣನಾಗಿ ಹುಟ್ಟುಬೇಕೆಂದಿದ್ದೇನೆ. ಅಲ್ಲದೇ ಶಬರಿಮಲೆಯ ತಂತ್ರಿಯಾಗಿ ಸೇವೆ ಸಲ್ಲಿಸಬೇಕು ಇಲ್ಲವೇ ಕನಿಷ್ಠ ಪಕ್ಷ ಕೆಳ ದರ್ಜೆಯ ಅರ್ಚಕನಾಗಿ ದೇವರ ಸೇವೆ ಸಲ್ಲಿಸುವ ಮೂಲಕವಾದರೂ ದೇವರ ವಿಗ್ರಹವನ್ನು ಮುಟ್ಟಿ ಅವರಿಗೆ ಸ್ನಾನ ಮಾಡಿಸಬೇಕೆಂಬ ಆಸೆಯಿದೆ ಎಂದು ಸುರೇಶ್ ಗೋಪಿ ಹೇಳಿದ್ದಾರೆ.
ಗೋಪಿ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಗೋಪಿಯ ಫೇಮಸ್ ಚಿತ್ರಗಳಲ್ಲಿ ಒಂದಾಗಿರುವ ಪೈತ್ರುಕಮ್ ಚಿತ್ರದಲ್ಲಿ ಗೋಪಿ 'ನಾನು ಬ್ರಾಹ್ಮಣನಲ್ಲ, ನಾನೊಬ್ಬ ಮನುಷ್ಯ. ನನ್ನ ಜನಿವಾರವನ್ನು ತುಂಡರಿಸಿಕೊಂಡಿದ್ದೇನೆ. ಈ ಮೂಢನಂಬಿಕೆಯನ್ನು ಮೊದಲಿಗೆ ಕಪ್ಪು ಎಳೆಯನ್ನು ಕತ್ತರಿಸಿಬಿಟ್ಟಿದ್ದೇನೆ ಎಂದು ಹೇಳಿದ್ದರು. ಅಂದಿನ ಕಾಲದಲ್ಲಿ ಚಿತ್ರದ ಈ ಡೈಲಾಗ್ ಭಾರೀ ಫೇಮಸ್ ಆಗಿತ್ತು. ಆದರೆ ಇದೀಗ ಗೋಪಿ ಮಾತನ್ನು ಕೇಳಿರುವ ಕೇರಳಿಗರು ಟ್ರೋಲ್ ಆರಂಭಿಸಿದ್ದು, ಸಿನಿಮಾದಲ್ಲಿ ಹೇಳುವುದಕ್ಕೂ ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದಿದ್ದಾರೆ.
want to be reborn as brahmin says actor suresh gopi